ಕವನ: ರೈಲು ನಿಲ್ದಾಣದಲ್ಲಿ…

Must Read

ರೈಲು ನಿಲ್ದಾಣದಲ್ಲಿ

ತುಂಟ ನಿಹಾಲ್ ನನ್ನು ಇಂದು

ರೈಲು ನಿಲ್ದಾಣಕ್ಕೆ ಕರೆದೊಯ್ದಾಗ 

ಅವ ಕೇಳಿದ ಪ್ರಶ್ನೆಗೆ ಸುಸ್ತೋ ಸುಸ್ತು! 

ದಾರಿಯಲ್ಲಿ ಸಿಕ್ಕ ಕುದುರೆ ಟಾಂಗಾ 

ನೋಡಿ ಕುದುರೆಯನ್ನು ಮುಟ್ಟಿದ್ದೇ ಮುಟ್ಟಿದ್ದು!

ಆ ಖುಷಿ ಕುದುರೆ ಮಾಲೀಕನಿಗೂ ಸಿಕ್ಕಿದೆಯೋ ಇಲ್ಲವೋ ದೇವನೇ ಬಲ್ಲ ! 

ಅವನಿಗಂತೂ ಖುಷಿಯಾಗಿತ್ತು. 

ಆಗ ನನಗನಿಸಿದ್ದು 

ಚಿಕ್ಕ ಚಿಕ್ಕ ಸಂಗತಿಗಳು ನೀಡುವ ಖುಷಿ

ಕೋಟಿ ಕೋಟಿ ಕೊಟ್ಟು ಖರೀದಿಸುವ ವಸ್ತುವಿನಲ್ಲಿಲ್ಲವಲ್ಲಾ ಎಂದು!

ನಿಲ್ದಾಣ ಪ್ರವೇಶಿಸಿದಾಗ ಅವ ಕೇಳಿದ ಪ್ರಶ್ನೆ

 ಮಾಮಾ ,

ರೈಲು ಇಲ್ಲಿ ಏಕೆ ನಿಂತಿದೆ? 

ಜೀವನ ಪಯಣವೆಂಬ ರೈಲಿನಲಿ 

ಚಲಿಸುತ್ತಿರುವ ನಮ್ಮ ಜೀವನವು 

ಒಮ್ಮೆ ನಿಲ್ಲುತ್ತದೆ ಪುಟ್ಟಾ! 

ಹಾಗಾಗಿ ಅದು ತನ್ನ ಕೆಲಸ ಮುಗಿಸಿ ನಿಂತಿದೆ  ಎಂದೆ. 

ನಿಮಿಷ ಕಳೆಯುವಷ್ಟರಲ್ಲಿ 

ಅಂವಾ ರೈಲು ಇನ್ನೂ 

ಯಾಕೆ ಬರಲಿಲ್ಲ ಮಾಮಾ ?  

ಎಂದು ಕೇಳಿದ.

ಜೀವನ ಪಯಣವೆಂಬ ರೈಲಿನಲಿ 

ಕೆಲವೊಮ್ಮೆ ನಮ್ಮ ಭಾಗ್ಯದಲ್ಲಿಲ್ಲದ ವಸ್ತುಗಳ 

ನಿರೀಕ್ಷೆಯಲ್ಲಿದ್ದಾಗ 

ಅವು ಬಾರದೇ ಹೋದಾಗ 

ನಮ್ಮ ರೈಲು ಬಂದಿಲ್ಲವೆಂದೇ ತಿಳಿಯಬೇಕು !

ಸಮಯ ಬಂದಾಗ 

ನಮ್ಮ ಬದುಕಿನ

ರೈಲು ಬಂದೇ ಬರುತ್ತದೆ 

ಅದಕಾಗಿ ಕಾಯಬೇಕು ಎಂಬ ತತ್ವ ತಿಳಿಸಿದೆ.

ಸದ್ದುಗದ್ದಲದ ನಡುವಿನ ಅವನ   

ನಿಲ್ದಾಣದಲ್ಲಿನ ಓಡಾಟ 

ನನ್ನ ಬದುಕೆಂಬ ರೈಲಿನ ಓಡಾಟಕ್ಕೆ 

ಬೆಳಕ ತೋರಿಸಿತು.


ಪ್ರೊ. ಶಿವಕುಮಾರ ಕೋಡಿಹಾಳ, ಮೂಡಲಗಿ

Latest News

ಮಾಚಿದೇವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು

ಮಡಿವಾಳ ಮಾಚಿದೇವರ ಜಯಂತಿ ಸಿಂದಗಿ; ಹನ್ನೆರಡನೆಯ ಶತಮಾನದಲ್ಲಿಯೇ ಸಮಾಜದ ಏಳ್ಗೆಗಾಗಿ ಸಮಾನತೆಯನ್ನು ಬಯಸಿದ ಶರಣ ಮಡಿವಾಳ ಮಾಚಿದೇವರ ಜೀವನ ಚರಿತ್ರೆ ಬಹಳ ಅರ್ಥ ಪೂರ್ಣವಾಗಿದೆ ಅವರ ವಚನಗಳನ್ನು...

More Articles Like This

error: Content is protected !!
Join WhatsApp Group