ಕವನ: “ತುಳಸಿ ಮಾತೆ”

Must Read

“ತುಳಸಿ ಮಾತೆ”

ಕೃಷ್ಣನ ನೆನೆವುದೆ ಭಾಗ್ಯವು ನಮಗೆ

ತುಳಸಿಯ ಪೂಜಿಸೆ ಸಂತೃಪ್ತಿಯೆಮಗೆ ಪ

ಗೋಪಾಲ ಕಂದನ ಪೂಜಿಸ ಬನ್ನಿರೆ

ಹೆಂಗಳೆಯರೆಲ್ಲ ಬೇಗ ತುಳಸಿ ತನ್ನಿರೆ ಅ.ಪ

ಜಗದಲಿ ನಾನಾ ಕಲಹ ಕಾರ್ಮೋಡ

ಕಲಿಯುಗದಲಿ ಕಟ್ಟೆಯೊಡೆದಿದೆ ನೋಡ

ನಾನು ನನ್ನದೆಂಬ ಅಹಂಭಾವ ಬಿಡ

ಭವ ಬಂಧನ ಬಿಟ್ಟು ಭಕ್ತಿಯಲಿ ಹಾಡ ೧

ಕರುಣಾಮಯಿ ಮಾತೆ ತುಳಸಿಮಾತೆ

ಸಕಲರಿಗೂ ಮಂಗಲ ಭಾಗ್ಯವಿಧಾತೆ 

ದಯೆ ತೋರೆಂದು ಬೇಡೋಣ ಮತ್ತೆ

ಜನುಮ ಜನುಮಕೂ ತುಳಸಿ ಮಾತೆ ೨

ಮನೆಮನೆಯಲಿ ಮಹಿಳೆಯರ ಮಾತೆ

ಮಂಗಲ ಸೂತ್ರ ಕಾಪಾಡು ನೀ ಮಾತೆ

ಸಂಸಾರ ಸುಖಶಾಂತಿ ಬೇಡುವರು ಮಾತೆ

ಕರುಣಾಮಯಿ  ಕಾಯೆ ತುಳಸಿ ಮಾತೆ ೩


ಸಂತೋಷ್ ಬಿದರಗಡ್ಡೆ

ಶಿಕ್ಷಕ, ಸಾಹಿತಿ ಹಾನಗಲ್.

Latest News

ಕವನ : ಅನುಬಂಧ

ಅನುಬಂಧಕಾಣದ ದಾರಿಯಲ್ಲಿ ಬೆಸೆದ ನಂಟು, ಹೆಸರಿಲ್ಲದಿದ್ದರೂ ಹೃದಯಕ್ಕೆ ಪರಿಚಿತವಾದ ಬಂಧ… ಕಾಲದ ಹೊಳೆ ಹರಿದರೂ ಕಳೆಯದ ಗುರುತು, ಗಂಟು ಅದು ಅನುಬಂಧ. ಮೌನದಲ್ಲೂ ಮಾತಾಡುವ ಸಂಬಂಧ, ಬಂಧ.. ಕಣ್ಣಂಚಿನ ನೀರನ್ನೂ ಓದುತ್ತದೆ ಒರೆಸುತ್ತದೆ. ಹೃದಯ ಮುರಿದು ನೊಂದ ಕ್ಷಣದಲ್ಲಿ ಅದೃಶ್ಯವಾಗಿ ಕೈ ಹಿಡಿದುಕೊಳ್ಳುತ್ತದೆ. ಮಣ್ಣಿನ ವಾಸನೆಯಂತೆ ಸಹಜ, ಬೆಳಗಿನ ಬೆಳಕಿನಂತೆ ಮೃದುವು. ನಗುವಿನಲ್ಲೂ,...

More Articles Like This

error: Content is protected !!
Join WhatsApp Group