ಕವನ: ವೈಣಿಕನ ಕೈ ಸೇರಿದ ವೀಣೆ…

Must Read

 

ವೈಣಿಕನ ಕೈ ಸೇರಿದ ವೀಣೆ.. 

ವೈಣಿಕನ ಕೈ ಸೇರಿದ ವೀಣೆಯಿಂದ

ಹೊಮ್ಮುವುದು ಸುಮಧುರ ಸಂಗೀತವು

ಕಲೆಗಾರನ ಕುಂಚದಲಿ ಗೀಚಿದ ಗೆರೆಗಳು

ಆಗುವುದು ಸುಂದರ ಚಿತ್ರಗಳು

ದರ್ಜಿಯ ಕೈ ಸೇರಿದ ತುಂಡು ಬಟ್ಟೆಯು

ರೂಪುಗೊಳ್ಳುವುದು ಅಂದದ ಉಡುಪಾಗಿ

ಕಮ್ಮಾರನ ಬಡಿತದಿಂದ ಮಾತ್ರ ಕಬ್ಬಿಣವು

ರೂಪುಗೊಳ್ಳಲು ಸಾಧ್ಯ ಆಯುಧಗಳಾಗಿ

ಕುಂಬಾರನ ಕರಸ್ಪರ್ಶದಿಂದ ಮಣ್ಣಿನ ರೂಪವು-

ಬದಲಾಗಿ ಪಾತ್ರೆ, ಹಣತೆಗಳಾಗುವುದು

ಸೋನಗಾರನ ಕೈಚಳಕದಿಂದ ಮಣ್ಣಾಗಿದ್ದ-

ಚಿನ್ನವು ಚಂದದ ಆಭರಣಗಳಾಗುವುದು

ಕಡಲಿನಾಳವನು ಸೇರಿದ ಮಳೆಹನಿ ಮಾತ್ರವೇ

ಕಣ್ಮನ ಸೆಳೆಯುವ ಮುತ್ತಾಗುವುದು

ಸಪಾತ್ರವನು ಸೇರಿದರೇನೇ ವಸ್ತುಗಳಿಗೆ-

ನಿಜವಾದ ಯೋಗ್ಯತೆಯು ಬರುವುದು..


ರೇಣುಕಾ ಸುಧೀರ್ಅರಸಿನಮಕ್ಕಿ
ಬೆಳ್ತಂಗಡಿ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group