ಕವನ: ಚೈತ್ರಮಾಸ

Must Read

ಚೈತ್ರಮಾಸ

ಸಂಸ್ಕೃತಿಯ ಸಾರಿದ
ಹೊಸ ವರುಷದ ಹರಿಕಾರ
ಯುಗಾದಿಯ ಸಿಂಗಾರ
ಚೈತ್ರಮಾಸದ ಚಿತ್ತಾರ……

ತಳಿರು ತೋರಣದ ಸಿಂಗಾರ
ಮನೆಯ ಬಾಗಿಲಿಗೆ ಬಂಗಾರ
ರಂಗೋಲಿ ಬಣ್ಣದ ಚಿತ್ತಾರ
ಎಲ್ಲಿಯೂ ಹಬ್ಬದ ಸಡಗರ……

ಕೋಗಿಲೆಯ ಇಂಪು
ಮಾವಿನ ತಂಪು
ಬೇವಿನ ಕಂಪು
ಚಿಗುರಲೆಯ ಸಡಗರವು…..

ಮಾವು ಬೇವಿನ
ತಳಿರು ತೋರಣ
ಹಬ್ಬದ ದಿಬ್ಬಣ
ಎಲ್ಲರ ಮನೆಯಲ್ಲಿ ಹೂರಣ….

ಮಾಸದ ನೆನಪುಗಳು ಇಂದಿಗೆ
ಅಳಿಸಿ ಹೋಗಲಿ ಎಂದಿಗೂ
ನವಮಾಸದ ಚಿಗುರಿಗೆ
ನಗೆಯ ಹೂವಿನ ಸ್ವಾಗತಕ್ಕೆ…….


ರೇಣುಕ.ಶಿವಪ್ಪ
ಶಿವಮೊಗ್ಗ

Latest News

ಕವನ : ಅನುಬಂಧ

ಅನುಬಂಧಕಾಣದ ದಾರಿಯಲ್ಲಿ ಬೆಸೆದ ನಂಟು, ಹೆಸರಿಲ್ಲದಿದ್ದರೂ ಹೃದಯಕ್ಕೆ ಪರಿಚಿತವಾದ ಬಂಧ… ಕಾಲದ ಹೊಳೆ ಹರಿದರೂ ಕಳೆಯದ ಗುರುತು, ಗಂಟು ಅದು ಅನುಬಂಧ. ಮೌನದಲ್ಲೂ ಮಾತಾಡುವ ಸಂಬಂಧ, ಬಂಧ.. ಕಣ್ಣಂಚಿನ ನೀರನ್ನೂ ಓದುತ್ತದೆ ಒರೆಸುತ್ತದೆ. ಹೃದಯ ಮುರಿದು ನೊಂದ ಕ್ಷಣದಲ್ಲಿ ಅದೃಶ್ಯವಾಗಿ ಕೈ ಹಿಡಿದುಕೊಳ್ಳುತ್ತದೆ. ಮಣ್ಣಿನ ವಾಸನೆಯಂತೆ ಸಹಜ, ಬೆಳಗಿನ ಬೆಳಕಿನಂತೆ ಮೃದುವು. ನಗುವಿನಲ್ಲೂ,...

More Articles Like This

error: Content is protected !!
Join WhatsApp Group