ಮಾದ್ಯಮದ ಮುಂದೆ ಬಿಕ್ಕಿ‌ಬಿಕ್ಕಿ ಅತ್ತ ಪ್ರಭು ಚೌಹಾಣ್

Must Read

ಬೀದರ – ಕೇಂದ್ರ ಸಚಿವ ಭಗವಂತ ಖೂಬಾ ನನ್ನ ಸೋಲಿಸಲು ಕುತಂತ್ರ ಮಾಡಿದರು, ಆದರೆ ಕ್ಷೇತ್ರದ ಜನತೆ ನನ್ನ ಕೈ ಬಿಡಲಿಲ್ಲ ಎಂದು ಮಾಧ್ಯಮದವರ ಮುಂದೆ ಔರಾದ್ ಕ್ಷೇತ್ರದ ವಿಜೇತ ಬಿಜೆಪಿ ಅಭ್ಯರ್ಥಿ ಪ್ರಭು ಚೌಹಾಣ್ ಬಿಕ್ಕಿ ಬಿಕ್ಕಿ ಅತ್ತರು.

ಹೆತ್ತ ತಾಯಿಗೆ, ಮೋಸ ಮಾಡೊ‌ ಕೆಲಸವನ್ನ ಭಗವಂತ ಖುಬಾ ಮಾಡಿದಾರೆ. ಔರಾದ್‌ನಲ್ಲಿ ೩೦೦ ಜನರನ್ನ ಬಿಟ್ಟು, ನನ್ನ ಸೋಲಿಸಲು ಕುತಂತ್ರ ಮಾಡಿದ್ರು. ಆದ್ರೆ ಔರಾದ್ ಜನ ನನ್ನ ಕೈ ಹಿಡಿದಿದ್ದಾರೆ. ಹಿಂದೆ ಲೋಕಸಬಾ ಚುನಾವಣೆಯಲ್ಲಿ ನಾವೇ ನಿಂತು ಅವರ ಚುನಾವಣೆ ಮಾಡಿದ್ದೆವು. ಆದರೆ ಭಗವಂತ ಖೂಬಾ, ನನ್ನ ವಿರುದ್ದ ಯಾಕೆ ಷಡ್ಯಂತ್ರ ಮಾಡಿದ್ರೋ ಗೊತ್ತಿಲ್ಲಾ ಎಂದು ಪ್ರಭು ಚವ್ಹಾಣ ಕಣ್ಣೀರು ಹಾಕಿದರು.

ಪ್ರಭು ಚೌಹಾಣ್ ಸೋಲಿಸಬೇಕು ಎಂದು ಮನೆ ಮನೆಗೆ ಹೋಗಿ ಭಗವಂತ ಖೂಬಾ ಮತ್ತು ಟೀಂ ಪ್ರಚಾರ ಮಾಡಿದ್ದಾರೆ. ನಾನು ಭಗವಂತ ಖುಬಾಗೆ ಏನೂ ಮೋಸ ಮಾಡದೇ ಇದ್ರೂ, ನನಗೆ ದೋಖಾ ಮಾಡಿದ್ರು. ನಾನು ಸೋಲಬೇಕು ಅಂತಾ, ಭಗವಂತ ಖುಬಾ ಕಾಂಗ್ರೆಸ್‌ಗೆ ಫಂಡಿಂಗ್ ಮಾಡಿದ್ದಾರೆ. ನನಗೆ ಬಹಳ ನೋವಾಗಿದೆ ಎಂದು ಬಿಕ್ಕಿ‌ಬಿಕ್ಕಿ ಅತ್ತರು  ಪ್ರಭು ಚೌಹಾಣ್


ವರದಿ: ನಂದಕುಮಾರ ಕರಂಜೆ, ಬೀದರ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group