spot_img
spot_img

ಸೆಂಟರ್ ಫಾರ್ ಡಿವೈನ್ ಆರ್ಟ್ಸ್ ವತಿಯಿಂದ ಮೂರು ಕೃತಿಗಳ ಲೋಕಾರ್ಪಣೆ

Must Read

- Advertisement -

ಬೆಂಗಳೂರಿನ ಸೆಂಟರ್ ಫಾರ್ ಡಿವೈನ್ ಆರ್ಟ್ಸ್ ರವರು ನಗರದ ಗವಿಪುರಂ ಗುಟ್ಟಹಳ್ಳಿಯ ಉದಯಭಾನು ಕಲಾಸಂಘದಲ್ಲಿ ಮೂರು ಕೃತಿಗಳ ಲೋಕಾರ್ಪಣೆ ಮತ್ತು ಗೌರವ ಸಮರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಖ್ಯಾತ ಸಾಹಿತಿ ಡಾ.ಹೆಚ್.ಎಸ್. ವೆಂಕಟೇಶಮೂರ್ತಿ ಮಾಡಿ ಮಾತನಾಡುತ್ತ, ಕನ್ನಡ ಹವ್ಯಾಸಿ ರಂಗಭೂಮಿಯ ಹಿರಿಮೆಗೆ ಕುರುಹಾಗಿರುವ ರಂಗಪ್ರಾಜ್ಞರು. ಕಳೆದ 60 ವರ್ಷದಿಂದ ರಂಗ ಧ್ವನಿಯ ಜೀವಾಳವಾಗಿರುವ ಶ್ರೀಯುತರು ನೀಡಿರುವ ಕೊಡುಗೆ ಅಪಾರ.ಇಳಿ ವಯಸ್ಸಿನಲ್ಲೂ ರಂಗಭೂಮಿಯಲ್ಲಿ ಸಕ್ರಿಯವಾಗಿ ತೊಡಗಿರುವ ಅಬ್ಬೂರರು, ಬಹಿರಂಗದಲ್ಲಿ ಸಂಪ್ರದಾಯಶೀಲರಂತೆ ಕಂಡರು ಆಂತರ್ಯದಲ್ಲಿ ಅತ್ಯಾಧುನಿಕರು – ಮಹಾ ವಿಚಾರಶೀಲರು. ಅವರ ನಿರ್ದೇಶನದ ನಾಟಕಗಳನ್ನು ನೋಡಿದಾಗ ಇದು ನಮ್ಮ ಗಮನಕ್ಕೆ ಬರುತ್ತದೆ.  ಇತ್ತೀಚೆಗೆ ಭಾರತದ ಗೌರವಾನ್ವಿತ ಉಪರಾಷ್ಟ್ರಪತಿ ಜಗದೀಪ್ ಧನಕರ್ ರವರಿಂದ ಸಂಗೀತ ನಾಟಕ ಅಕಾಡೆಮಿಯ ‘ಅಮೃತ ಪ್ರಶಸ್ತಿ’ಗೆ ಭಾಜನರು. ಜೀವಂತ ಕಲೆಯಾದ ರಂಗಭೂಮಿಯ ಸಮಕಾಲೀನ ಸ್ಥಿತಿಗತಿಗಳಿಗೆ ಭಾವನಾತ್ಮಕವಾಗಿ ಅಲ್ಲದೆ ವೈಚಾರಿಕ ನೆಲೆಗಟ್ಟಿನಲ್ಲಿ ಸ್ಪಂದಿಸುವ ಹೊಸ ಪ್ರಯೋಗಗಳಿಗೆ ನಿರಂತರವಾಗಿ ಒಡ್ಡಿಕೊಳ್ಳುವ ಮಾಧ್ಯಮವನ್ನು ಸಮರ್ಥವಾಗಿ ಬಳಸಿಕೊಂಡ ಅಪರೂಪದ ಪ್ರತಿಭೆ ಅಬ್ಬೂರು ಜಯತೀರ್ಥ, ಇವರ ಸಾಧನೆಯ ಬಗ್ಗೆ ಹವ್ಯಾಸಿ ರಂಗಭೂಮಿಗೆ ಸಂಬಂಧಿಸಿದ ಯಾವುದೇ ಗ್ರಂಥಗಳಲ್ಲಿ ಒಂದಿಷ್ಟಾದರೂ ಪ್ರಸ್ತಾಪ ಇಲ್ಲದಿರುವುದನ್ನು ಕಂಡು ಯಾವುದೇ ರಂಗ ಸಂಸ್ಥೆ ,ಅಕಾಡೆಮಿ, ಸಂಸ್ಕೃತಿ ಇಲಾಖೆ, ಸರಕಾರವಾಗಲಿ ಮಾಡಲೇ ಬೇಕಿದ್ದರೂ ಮಾಡದಿರುವ ಕೆಲಸವನ್ನು ಈ ಹೊತ್ತಿನಲ್ಲಿ ಅವರ ಕುರಿತು ಅಕ್ಷರ ಅಭಿನಂದನೆ ಗುರುದಕ್ಷಿಣಾ ರೂಪವಾಗಿ ಸೆಂಟರ್ ಫಾರ್ ಡಿವೈನ್ ಆರ್ಟ್ಸ್ ಪರವಾಗಿ ಜಿ.ಪಿ ನಾಗರಾಜನ್ ಸಂಪಾದಕತ್ವದಲ್ಲಿ ಪ್ರಕಟಸಿರುವುದು ಶ್ಲಾಘನೀಯ ಎಂದು ಅಭಿಪ್ರಾಯ ಪಟ್ಟರು.

- Advertisement -

ರಾಣಿ ಚೆನ್ನಬೈರಾದೇವಿ ಕಾದಂಬರಿ ಆಧಾರಿತ ರಂಗರೂಪ ಕೃಷ್ಣಮೂರ್ತಿ ಕವತ್ತಾರ್ ರವರ ‘ಅವ್ವರಸಿ’ ಕೃತಿಯನ್ನು ಕಾದಂಬರಿಕಾರ ಡಾ. ಗಜಾನನ ಶರ್ಮ,ಹಿರಿಯ ರಂಗಕರ್ಮಿ ಅಬ್ಬೂರು ಜಯತೀರ್ಥರವರ ಕುರಿತು ಜಿ.ಪಿ ನಾಗರಾಜ್ ಬರೆದಿರುವ ‘ರಂಗಭೀಷ್ಮ ಅಬ್ಬೂರು ಜಯತೀರ್ಥ’ ಕೃತಿಯನ್ನು ರಂಗ ನಿರ್ದೇಶಕ ಡಾ.ಬಿ.ವಿ. ರಾಜಾರಾಮ್ ಮತ್ತು ನಗರ್ತ ಜನಾಂಗದ  ಸಾಧಕರ ಕುರಿತು ಎಮ್. ಬಸವರಾಜು ಮತ್ತು ಶೈಲಜಾ ಉದಯಶಂಕರ್ ಹೊರ ತಂದಿರುವ ಕೃತಿ ‘ನೆನೆ ನೆನೆ ಪ್ರಾತಃಸ್ಮರಣೀಯರ’ ಪುಸ್ತಕವನ್ನು ಹಾರಗದ್ದೆ ಶ್ರೀವಿದ್ಯಾ ಮಹಾಸಂಸ್ಥಾನದ ಶ್ರೀ ಆತ್ಮಾನಂದನಾಥಜಿರವರು ಅನಾವರಣ ಗೊಳಿಸಿದರು. 

ಇದೇ ಸಂದರ್ಭದಲ್ಲಿ ವಿಶ್ವ ರಂಗಭೂಮಿ ದಿನಾಚರಣೆಯ ಅಂಗವಾಗಿ ಖ್ಯಾತ ರಂಗಕರ್ಮಿ ಅಬ್ಬೂರು ಜಯತೀರ್ಥ ಮತ್ತು ಹಿರಿಯ ಪತ್ರಕರ್ತ ರು. ಬಸಪ್ಪ ಮತ್ತು ಹಿರಿಯ ಸಂಗೀತ ವಿದ್ವಾಂಸ ವಿದ್ವಾನ್ ಎಸ್.ಶಂಕರರವರಿಗೆ ಗೌರವ ಸಮರ್ಪಣೆ ಮತ್ತು ಕೆ. ವಿ. ಗೋಪಿನಾಥ್,ಜಿ. ಪಿ. ನಾಗರಾಜನ್ ,ಸಚಿನ್ ಶಿವರುದ್ರಪ್ಪ ,ಶೈಲಜಾ ಉದಯಶಂಕರ್,ಡಾ. ಕಾವ್ಯ ನಾಗರಾಜನ್ ಹಾಗೂ ಡಾ. ಗುರುರಾಜ ಪೋಶೆಟ್ಟಿಹಳ್ಳಿ ರವರುಗಳನ್ನು ಅಭಿನಂದಿಸಲಾಯಿತು, ಕಾರ್ಯಕ್ರಮದ ಆಯೋಜಕರಾದ ಎಂ. ಬಸವರಾಜು ,ಲೀಲಾ ಬಸವರಾಜು , ಸುಧಾ ಪ್ರಸನ್ನ ಉಪಸ್ಥಿತರಿದ್ದರು.

ಶಶಿಕಲಾ ನಾಗರಾಜನ್ ಕಾರ್ಯಕ್ರಮ ನಿರೂಪಿಸಿದರು, ಅಬ್ಬೂರು ಜಯತೀರ್ಥರವರ ಶಿಷ್ಯರು ರಂಗಗೀತೆಗಳನ್ನು ಪ್ರಸ್ತುತಪಡಿಸಿದರು. 

- Advertisement -

ಪ್ರಾಸ್ತಾವಿಕ ನುಡಿ ಮಾತನಾಡುತ್ತ ಎಂ.ಬಸವರಾಜುರವರು 2003ರಲ್ಲಿ ಆರಂಭವಾದ ಈ ಸಂಸ್ಥೆ ಭಾರತೀಯ ಕಲೆ -ಸಾಹಿತ್ಯ ಪರಂಪರೆಯ ಕುರಿತು ವ್ಯಾಪಕ ಪ್ರಚಾರ ಮತ್ತು ಅದರ ಪ್ರಸರಣೆಯಲ್ಲಿ ತೊಡಗಿದೆ. ಅಂದಿನ ರಾಜ್ಯಪಾಲರಾಗಿದ್ದ  ಟಿ.ಎನ್ ಚತುರ್ವೇದಿರವರಿಂದ ಉದ್ಘಾಟನೆಗೊಂಡ ಈ ಸಂಸ್ಥೆ ಕಲಾ ರಂಗದ ದಿಗ್ಗಜರಾದ ಜಿ. ವಿ. ಅಯ್ಯರ್ , ಬಿ. ವಿ. ರಾಜಾರಾಮ್ ಮೊದಲಾದವರಿಂದ ಪ್ರಾತ್ಯಕ್ಷಿಕೆಗಳನ್ನು ನಡೆಸಿದೆ . ಭಾರತೀಯ ಸಾಂಪ್ರದಾಯಿಕ ನೃತ್ಯದ ಕುರಿತು ಅನೇಕ ವಿದ್ವಜ್ಜನರು ಬರೆದಿರುವ ಲೇಖನಗಳ ಸಂಗ್ರಹ ‘ನೃತ್ಯ ಮಂಜರಿ’ ಅನ್ನು ಪ್ರಕಟಿಸಿದೆ ಮತ್ತು ಆ ಕ್ಷೇತ್ರದಲ್ಲಿ ಖ್ಯಾತನಾಮರಾದ ಕರ್ನಾಟಕ ಕಲಾಶ್ರೀ ಗುರು ಶ್ರೀಮತಿ ಬಿ. ಕೆ ವಸಂತಲಕ್ಷ್ಮಿ , ಮುಖ್ಯಮಂತ್ರಿ ಚಂದ್ರು , ಬಿ.ಜಯಶ್ರೀ ಮೊದಲಾದ ಕಲಾಚೇತನಗಳನ್ನು ಗೌರವಿಸಿದೆ ಮತ್ತೊಂದು ವಿಶೇಷವೆಂದರೆ ಹಿರಿಯ ನಾಟಕಕಾರ ಎಸ್.ಕೆ. ಮಾಧವ ರಾವ್ ರವರ ಅನೇಕ ನಾಟಕಗಳನ್ನು ಭಾಗ್ಯಲಕ್ಷ್ಮಿ ಪ್ರಕಾಶದ ಮುಖಾಂತರ ಪ್ರಕಟಿಸಲಾಗಿರುತ್ತದೆ. ಮಕ್ಕಳಿಗೆ ಬೇಸಿಗೆ ಶಿಬಿರವನ್ನು ಆಯೋಜಿಸಿ ರಂಗಾಸಕ್ತಿಯನ್ನು ಅವರಲ್ಲಿ ಬೆಳೆಸುವುದು ಸಂಸ್ಥೆಯ ಉದ್ದೇಶಗಳಲ್ಲಿ ಒಂದಾಗಿದೆ. 

ನಗರ್ತ ಜನಾಂಗ ಕರ್ನಾಟಕದ ಒಂದು ವಿಶಿಷ್ಟ ಸಮುದಾಯವಾಗಿದೆ. ಮೂಲತಃ ವ್ಯಾಪಾರಿಗಳಾಗಿ ತಮ್ಮ ಆರ್ಥಿಕ ಚಟುವಟಿಕೆಗಳಿಂದ ಸಮಾಜದ ಅವಿಭಾಜ್ಯ ಅಂಗವೆನಿಸಿ ಆಚಾರ ವಿಚಾರಗಳಲ್ಲಿ ನಿಷ್ಠೆ ಉಳ್ಳವರಾಗಿ ದಾನ – ಧರ್ಮಗಳನ್ನು ಪ್ರೋತ್ಸಾಹಿಸುತ್ತಾ ಮುನ್ನೆಡುತ್ತಿರುವ ಈ ಸಮುದಾಯದ ಅನೇಕ ಹಿರಿಯ ಚೇತನಗಳನ್ನು ನೆನೆಯುವ ಒಂದು ಪ್ರಯತ್ನವೇ  ‘ನೆನೆ ನೆನೆ ಪ್ರಾತಃಸ್ಮರಣೀಯರ’ ಎಂಬ ಈ ಕೃತಿ ನೆನೆ ಮನವೇ ಎಂಬ ಕೃತಿಯ ಮುಂದುವರೆದ ಭಾಗವಾಗಿ ಸಮಾಜಶಾಸ್ತ್ರೀಯ ಅಧ್ಯಯನದ ದೃಷ್ಟಿಯಿಂದ ದಾಖಲಿಸಿರುವ ಸಮಾಜದ ಹಲವಾರು ಹಿರಿಯರಾದ ಜೆ. ಎಸ್. ದಂಡಪಾಣಿ, ಡಾ. ಸಿ. ಸೋಮಶೇಖರ್, ಜರಗನಹಳ್ಳಿ ಶಿವಶಂಕರ್ ಮೊದಲಾದ ಸಾಂಸ್ಕೃತಿಕ –ಸಾಹಿತ್ಯಕ – ಶೈಕ್ಷಣಿಕ ವಲಯದ ಜೀವನ, ವ್ಯಕ್ತಿತ್ವ ಸಾಧನೆಗಳನ್ನು ಎಂ. ಬಸವರಾಜು ಮತ್ತು ಶೈಲಜಾ ಉದಯಶಂಕರ ರವರು ಸಂಪಾದಕರಾಗಿ ಹೊರತರಲಾಗಿದೆ.

ಹಿರಿಯ ಕಾದಂಬರಿಕಾರ ಡಾ.ಗಜಾನನ ಶರ್ಮರ ಚೆನ್ನಭೈರಾದೇವಿ ಐತಿಹಾಸಿಕ ಕಾದಂಬರಿಯ ಆಯುಧ ಭಾಗವನ್ನು ಆಧರಿಸಿ ‘ಅವ್ವರಸಿ’ ಏಕವ್ಯಕ್ತಿ ನಾಟಕ ರೂಪಕವನ್ನು ಕೃಷ್ಣಮೂರ್ತಿ ಕವತ್ತಾರರು ಸಿದ್ಧಪಡಿಸಿರುತ್ತಾರೆ. ಗೇರುಸೊಪ್ಪೆಯ ಕರಿಮೆಣಸಿನ ರಾಣಿಯಾಗಿದ್ದ ಈಕೆ ಪೋರ್ಚುಗೀಸರು, ಕೆಳದಿ ಅರಸರು ಮತ್ತು ಬಿಜಾಪುರದ ಸುಲ್ತಾನರ ನಡುವಿನ ಯುದ್ಧಗಳನ್ನು ತನ್ನ ಜಾಣ್ಮೆಯಿಂದ ನಿರ್ವಹಿಸಿ 54 ವರ್ಷಗಳ ಕಾಲ ರಾಜ್ಯಭಾರ ನಡೆಸಿದ ಕೀರ್ತಿ ಈಕೆಗೆ ಸಲ್ಲುತ್ತದೆ.

ಪೋರ್ಚುಗೀಸರ ಮತಾಂತರ ಪ್ರಯತ್ನಕ್ಕೆ ಅಡ್ಡಿಯಾಗಿ ದಕ್ಷಿಣ ಕೊಂಕಣಕ್ಕೆ ಕಾಲಿಡದಂತೆ ಕಾಳಿ ನದಿ ಆಚೆಯಲ್ಲೇ ತಡೆದು ನಿಲ್ಲಿಸಿದ್ದು ಅಲ್ಲದೆ ಗೇರುಸೊಪ್ಪೆಯಲ್ಲಿ ಚತುರ್ಮುಖ ಬಸದಿ ಅಂತಹ ಅಪರೂಪದ ಬಸದಿಯನ್ನು ನಿರ್ಮಿಸಿ ಸರ್ವಧರ್ಮ ಸಮಭಾವದಿಂದ ನಾಡನ್ನು ಆಳಿದ ವೀರ ವನಿತೆ . ಈ ನಾಡಿನ ಜನರಿಗೆ ಈ ವೀರವನಿತೆಯ ಜೀವನ ಗಾಥೆಯನ್ನು ರಂಗದ ಮೇಲೆ ಏಕವ್ಯಕ್ತಿ ಪ್ರದರ್ಶನ ಮಾಡಿದ ಹಿರಿಮೆ 75 ಹರೆಯದ ಡಾ. ಲೀಲಾ ಬಸವರಾಜು ರವರಿಗೆ ಸಲ್ಲುತ್ತದೆ .ಅದನ್ನು ರಂಗ ರೂಪಾಂತರ – ನಿರ್ದೇಶನ ಮಾಡಿದ ಖ್ಯಾತ ನಾಟಕಕಾರ , ನಿರ್ದೇಶಕ ಕೃಷ್ಣಮೂರ್ತಿ ಕವತ್ತಾರರು ಈ ಕೃತಿಯ ಲೇಖಕರು ಎಂದು ತಿಳಿಸಿದರು.


ವಿವರಗಳಿಗೆ : 9686583163

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಕಿನ್ನರಿ ಬ್ರಹ್ಮಯ್ಯ ........................................... 12ನೇ ಶತಮಾನದ ಬಸವಾದಿ ಶಿವಶರಣರ ಕೀರ್ತಿವಾರ್ತೆಯನ್ನು ಕೇಳಿ ಪ್ರಭಾವಿತರಾಗಿ ನಾಡು ಹೊರನಾಡಿನಿಂದ ಅನೇಕ ಜನ ಶರಣರು ಕಲ್ಯಾಣಕ್ಕೆ ಬರಹತ್ತಿದರು. ಬಸವಣ್ಣನವರ ಸಮಕಾಲೀನರಾಗಿದ್ದ ಶರಣರಾದ ಗುಜರಾತದಿಂದ...
- Advertisement -

More Articles Like This

- Advertisement -
close
error: Content is protected !!
Join WhatsApp Group