Homeಸುದ್ದಿಗಳುಬಸ್ ಇಲ್ಲದೆ ಪರದಾಡಿದ ವಿದ್ಯಾರ್ಥಿಗಳಿಂದ ಪ್ರತಿಭಟನೆ

ಬಸ್ ಇಲ್ಲದೆ ಪರದಾಡಿದ ವಿದ್ಯಾರ್ಥಿಗಳಿಂದ ಪ್ರತಿಭಟನೆ

ಬೀದರ – ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ತವರಿನಲ್ಲಿ ಬೀದರ್ ಜಿಲ್ಲೆಯ ತಾಲೂಕುಗಳಿಗೆ ಬಸ್ಸು ಇಲ್ಲದೇ ಪರದಾಡುತ್ತಿರುವ ಜನಸಾಮಾನ್ಯರ ಗೋಳು ಕೇಳುವರೇ ಇಲ್ಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ವಿದ್ಯಾರ್ಥಿ ಮುಖಂಡ ರತ್ನದೀಪ ಕಸ್ತೂರೆ.

ಬೀದರ್ ಸಾರಿಗೆ ಅಧಿಕಾರಿಗಳು ಬೇಜವಾಬ್ದಾರಿ ವರ್ತನೆ ಮಾಡಿದ್ದಾರೆ ಎಂದು ಖಂಡಿಸಿ ಪ್ರತಿಭಟನೆ ನಡೆಸಿದರು.

 

ಈ ಸಂದರ್ಭದಲ್ಲಿ ಮಾತನಾಡಿದ ಬಂಟಿ ದರಬಾರೆ ಯುವ ಒಕ್ಕೂಟದ ಸಂಸ್ಥಾಪಕ ಹಾಗೂ ಜಿಲ್ಲಾಧ್ಯಕ್ಷರಾದ ಹೋರಾಟಗಾರ ವಿದ್ಯಾರ್ಥಿ ಮುಖಂಡ ರತ್ನದೀಪ್ ಕಸ್ತೂರೆ ರವರು ಮಾತನಾಡುತ್ತ, ಬೀದರ್ ಜಿಲ್ಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಚಿವರಿದ್ದರೂ ಬೀದರ್ ನಗರದ ಬಸ್ ಸ್ಟಾಂಡ್ ನಲ್ಲಿ ಯಾವುದೇ ತಾಲೂಕುಗಳಿಗೆ ಹೋಗಲು 2- 3 ಗಂಟೆ ಯಾದರು ಬಸ್ ಸೌಲಭ್ಯ ಇಲ್ಲ ಎಂದು ಔರಾದ ಜೋಡೆತ್ತು ಎಂದು ಹೆಸರು ಪಡೆದುಕೊಂಡ ಕೇಂದ್ರ ಸಚಿವರ ಮತ್ತು ರಾಜ್ಯ ಸಚಿವರ ವಿರುದ್ಧ ವಾಗ್ದಾಳಿ ನಡೆಸಿದರು..

ಔರಾದ ನಲ್ಲಿ ಇದರಿಂದ ಬಹಳಷ್ಟು ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ ಅದರಲ್ಲಿ ವಿಶೇಷವಾಗಿ ದೂರದ ಹಳ್ಳಿಗಳಿಂದ ಬರುವ ವಿದ್ಯಾರ್ಥಿಗಳಿಗೆ ತುಂಬಲಾರದಷ್ಟು ಕಷ್ಟ ನಷ್ಟ ವಾಗುತ್ತಿದೆ ಈ ಸಂಧರ್ಭದಲ್ಲಿ ಜನಪ್ರತಿನಿಧಿಗಳಿಗೆ ಜನಸಾಮಾನ್ಯರು ಹಿಡಿಶಾಪ ಹಾಕುತ್ತಾ ಅಧಿಕಾರಿಗಳಿಗೆ ಕೇಳಿದರೆ ಬೇಜವಾಬ್ದಾರಿಯಿಂದ ವರ್ತಿಸಿದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರಲ್ಲದೆ ಒಂದು ವೇಳೆ ಇದೆ ರೀತಿ ಮುಂದುವರೆಸಿದರೆ ಉಗ್ರವಾದ ಹೋರಾಟ

ಮಾಡಲಾಗುವುದೆಂದು ಎಚ್ಚರಿಕೆ ನೀಡಿದರು.

ಕೋವಿಡ್ ನಿಯಮ ಉಲ್ಲಂಘನೆ ಸಾರಿಗೆ ಅಧಿಕಾರಿಗಳು ಹಾಗೂ ಸಚಿವರ ವಿರುದ್ಧ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿದ್ದರು.

ವರದಿ : ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ

RELATED ARTICLES

Most Popular

error: Content is protected !!
Join WhatsApp Group