ಸಿಂದಗಿ: ಪಟ್ಟಣದ ಡಾ. ಅಂಬೇಡ್ಕರ ವೃತ್ತದಲ್ಲಿ ಗುರುವಾರ ಸಂಜೆ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಮದ್ದು ಸಿಡಿಸಿ ಸಿಹಿ ಹಂಚುವ ಮೂಲಕ ವಿಜಯೋತ್ಸವ ಆಚರಿಸಿದರು.
ಆಮ್ ಆದ್ಮಿ ಪಕ್ಷದ ತಾಲೂಕಾಧ್ಯಕ್ಷ ಶಬ್ಬೀರಪಟೇಲ ಬಿರಾದಾರ ಮಾತನಾಡಿ, ಪಂಚ ರಾಜ್ಯಗಳ ಚುನಾವಣೆ ಫಲಿತಾಂಶದಲ್ಲಿ ಪಂಜಾಬ ರಾಜ್ಯದಲ್ಲಿ ಆಮ್ ಆದ್ಮಿ ಪಕ್ಷ ಒಂದು ಪ್ರಚಂಡ ಬಹುಮತದಿಂದ ಸುಮಾರು 92 ಕ್ಕಿಂತ ಜಾಸ್ತಿ ಸ್ಥಾನಗಳನ್ನು ಜಯ ಗಳಿಸಿ ಒಂದು ಇತಿಹಾಸ ಸೃಷ್ಟಿಸಿದೆ. ಗೋವಾದಲ್ಲಿ ಕೂಡ 2 ಸ್ಥಾನಗಳಲ್ಲಿ ಜಯ ಗಳಿಸಿ ಸುಮಾರು 7% ಮತ ತೆಗೆದುಕೊಂಡಿದೆ. ಯಾವ ರೀತಿ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ಸರ್ಕಾರ ಶಿಕ್ಷಣ, ವೈದ್ಯಕೀಯ ಮತ್ತು ಹತ್ತಾರು ಐತಿಹಾಸಿಕ ಕೆಲಸಗಳನ್ನು ಮಾಡಿ ದೆಹಲಿಯ ಜನತೆಗೆ ಒಂದು ರುಚಿ ತೋರಿಸಿದ್ದಾರೆ ಅದೇ ರೀತಿ ಪಂಜಾಬ್ ಜನತೆ ಕೂಡ ಒಂದು ರುಚಿ ನೋಡಲಿಕ್ಕೆ ಸಿದ್ಧರಾಗಿದ್ದಾರೆ ಎಂದರು.
ವಿಜಯೋತ್ಸವದಲ್ಲಿ ಆಮ್ ಆದ್ಮಿ ಪಕ್ಷದ ಅಶೋಕ ಕೋರಳ್ಳಿ, ಸಿದ್ದಾರಾಮ ವರಕೇರಿ, ಮಹೇಬೂಪಟೇಲ ಎಚ್. ಪಾಟೀಲ, ಶಂಕರಲಿಂಗ ಚಿನಮಳ್ಳಿ, ಜಾವೇದ ಮನಿಯಾರ, ಮಲಕಪ್ಪ ಕುರನಳ್ಳಿ ಇತರು ಉಪಸ್ಥಿತರಿದ್ದರು.