ಮೂಡಲಗಿ : ತಾಲೂಕಿನ ನಾನಾ ಕಡೆ ಗುರುವಾರ ಗಾಳಿ, ಗುಡುಗು ಸಿಡಿಲು ಸಹಿತ ಭಾರೀ ಮಳೆಯಾಗಿದ್ದು, ಮೂಡಲಗಿ ತಾಲೂಕಿನ ರಂಗಾಪೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂಜು ರಂಗಪ್ಪಾ ಸನದಿ ಎಂಬುವವರಿಗೆ ಸೇರಿದ ಎರಡು ಎಮ್ಮೆ , ಒಂದು ಕರು ಸಿಡಿಲು ಬಡಿದು ಮೃತಪಟ್ಟಿವೆ.
ಸುಮಾರು ೪೫ ನಿಮಿಷ ಸುರಿದ ಭಾರೀ ಮಳೆಗೆ ಅಲ್ಲಲ್ಲಿ ಕೃಷಿ ಉತ್ಪನ್ನಗಳು ಕೂಡ ಹಾಳಾಗಿದ್ದು, ರಂಗಾಪೂರ ಗ್ರಾಮದಲ್ಲಿ ಸಿಡಿಲಿಗೆ ಎರಡು ಎಮ್ಮೆಗಳು ಹಾಗೂ ಒಂದು ಕರು ಮೃತಪಟ್ಟಿವೆ.