ಸಿಂದಗಿ: ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ವೃತ್ತಗಳು ಇರುವದು ಸರಿಯಲ್ಲ ಅನಧಿಕೃತವಾಗಿ ನಿರ್ಮಾಣವಾಗಿರುವ ಅಂಥ ವೃತ್ತವನ್ನು ತೆರವುಗೊಳಿಸಬೇಕೆಂದು ಮೇಲಧಿಕಾರಿಗಳಿಗೆ ತಿಳಿಸಿದ್ದರೂ ಕೂಡಾ ಯಾವುದೇ ಪ್ರಯೋಜನವಾಗಿಲ್ಲ ಅಧಿಕಾರಿಗಳು ಸರ್ವೋಚ್ಛ ನ್ಯಾಯಾಲಯದ ಆದೇಶ ಮೀರಿ ವೃತ್ತವನ್ನು ತೆರವುಗೊಳಿಸುವ ಕಾರ್ಯ ಮಾಡಿಲ್ಲ ಎಂದು ದಾನಪ್ಪಗೌಡ ಚನಗೊಂಡ ವಕೀಲರು ಆರೋಪಿಸಿದರು.
ಪಟ್ಟಣದ ಖಾಸಗಿ ಹೋಟೆಲಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ತಾಲೂಕಿನ ಗೋಲಗೇರಿ ಗ್ರಾಮದಲ್ಲಿ ಸಂಗನಗೌಡ ಪಾಟೀಲ ಮತ್ತು ಡಂಬಳ ಗ್ರಾಮದಲ್ಲಿ ಶಂಕರಗೌಡ ಪಾಟೀಲರವರ ಹೆಸರಿನ ವೃತ್ತಗಳು ಅನಧಿಕೃತವಾಗಿ ನಿರ್ಮಾಣವಾಗಿವೆ ವೃತ್ತವು ನಡು ರಸ್ತೆಯಲ್ಲಿದ್ದು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಮತ್ತು ಈ ವೃತ್ತವು ಕಾನೂನಾತ್ಮಕವಾಗಿಲ್ಲ. ಗ್ರಾಪಂ ಅಧಿಕಾರಿಗಳಿಗೆ ಕೇಳಿದರೆ ನಮಗೆ ಮಾಹಿತಿಯಿಲ್ಲ ಎನ್ನುವ ಉತ್ತರ ಬಂದಿದೆ. ರಾಜ್ಯ ಹೆದ್ದಾರಿಯಲ್ಲಿ ಇರುವ ವೃತ್ತಗಳನ್ನು ತೆರವು ಗೊಳಿಸಲು ಮುಂದಾಗಬೇಕು. ಒಂದನೆಯ ವೃತ್ತವನ್ನು ಗೋಲಗೇರಿ ಗ್ರಾಮದಲ್ಲಿ ಹಾದು ಹೋಗುವ ಸಿಂದಗಿ ಶಹಾಪುರ ಹೆದ್ದಾರಿಯನ್ನು ಮತ್ತು ಗೋಲ್ಲಾಳೇಶ್ವರ ದೇವಸ್ಥಾನಕ್ಕೆ ಹೋಗುವ ಮುಖ್ಯರಸ್ತೆಯನ್ನು ಅತಿಕ್ರಮಣ ಮಾಡಿ ನಿರ್ಮಿಸಲಾಗಿದ್ದು ಅದೇ ರೀತಿ 2ನೇ ವೃತ್ತವನ್ನು ಡಂಬಳ ಗ್ರಾಮಕ್ಕೆ ಹೊಂದಿಕೊಂಡು ಹೋಗುವ ರಾಜ್ಯ ಹೆದ್ದಾರಿಯನ್ನು. ಮತ್ತು ಡಂಬಳದಿಂದ ವಂದಾಲಕ್ಕೆ ಹೋಗುವ ರಸ್ತೆ ಮತ್ತು ಶಾಹಪುರ ಹೆದ್ದಾರಿಯನ್ನು ಅತಿಕ್ರಮಣಮಾಡಿ ನಿರ್ಮಿಸಲಾಗಿದೆ ಸದರ ವೃತ್ತಗಳು ಸಾರ್ವಜನಿಕರಿಗೆ ಅಡೆತಡೆ ಉಂಟು ಮಾಡಿದಲ್ಲದೆ ಈ ವೃತ್ತವು ಕಾನೂನು ಬಾಹಿರವಾಗಿದ್ದು ಇಂತಹ ವೃತ್ತಗಳನ್ನು ತೆರವಗೊಳಿಸದಿರುವುದು ಆಡಳಿತ ಅಧಿಕಾರಿಗಳ ಬೇಜವಾಬ್ದಾರಿತನ ಎತ್ತಿ ತೋರಿಸುತ್ತಿದೆ. ಕರ್ನಾಟಕ ಪಂಚಾಯತ್ ರಾಜ್ಯ ಅಧಿನಿಯಮದ ಪ್ರಕಾರ ಪಂಚಾಯತಿಗೂ ಕೂಡ ಇಂತಹ ವೃತ್ತ ನಿರ್ಮಿಸಲು ಅಧಿಕಾರ ಇರುವದಿಲ್ಲ ಬಲ್ಲ ಮೂಲಗಳ ಪ್ರಕಾರ ಕೆಲವು ಕಿಡಿಗೇಡಿಗಳು ಕಾನೂನು ಬಾಹಿರ ಪ್ರಯತ್ನ ಮಾಡುತ್ತಿದ್ದು ಇಂತದ್ದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಸೂಚನೆ ನೀಡಬೇಕೆಂದು ಅಧಿಕಾರಿಗಳಿಗೆ ಮನವಿ ಮಾಡಿದ್ದಾಗ್ಯೂ ತಾಲುಕಾ ಅಧಿಕಾರಿಗಳು ಇದಕ್ಕೆ ಸಂಬಂಧಪಟ್ಟ ತಾಲುಕಾ ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದಲ್ಲಿ ಕಾನೂನ್ಮಾತಕ ಹೋರಾಟ ನಡೆಸಲಾಗವುದು ಎಂದು ಎಚ್ಚರಿಕೆ ನೀಡಿದರು.
ಈ ಸುದ್ದಿಗೋಷ್ಠಿಯಲ್ಲಿ ಬಸವರಾಜ ಹದಗಲ್ಲ, ಬಸವರಾಜ ಮಾರಲಬಾವಿ, ಭಿಮರಾಯ ಪೂಜಾರಿ, ಶಿವಲಿಂಗಯ್ಯ ಹೀರೆಮಠ, ಭಿಮನಗೌಡ ಚಿಂಚೋಳ್ಳಿ ಇದ್ದರು,