Homeಸುದ್ದಿಗಳುರಾಜ್ಯದ ಅನುದಾನಿತ ಸಂಸ್ಥೆಗಳಿಗೆ ೪೩೮ ಕೋ. ರೂ. ಮಂಜೂರು

ರಾಜ್ಯದ ಅನುದಾನಿತ ಸಂಸ್ಥೆಗಳಿಗೆ ೪೩೮ ಕೋ. ರೂ. ಮಂಜೂರು

spot_img

ಮೂಡಲಗಿ: ಕರ್ನಾಟಕ ರಾಜ್ಯದ ನಾಲ್ಕು ಕೇಂದ್ರೀಯ ಅನುದಾನಿತ ಸಂಸ್ಥೆಗಳಾದ ಐ.ಐ.ಟಿ ಧಾರವಾಡ, ಎನ್.ಐ.ಟಿ ಸುರತ್ಕಲ್, ಐ.ಐ.ಎಸ್ಸಿ ಬೆಂಗಳೂರು ಮತ್ತು ರಾಜ್ಯದ ಕೇಂದ್ರೀಯ ವಿಶ್ವವಿದ್ಯಾಲಯ ಸೇರಿದಂತೆ ಕಳೆದ ೩ ವರ್ಷಗಳಲ್ಲಿ ಒಟ್ಟು ೪೩೮.೪೦ ಕೋಟಿ ರೂಪಾಯಿ ಮಂಜೂರಾದ ಅನುದಾನವು ಬಳಕೆಯಾಗಿದೆ ಎಂದು ಕೇಂದ್ರ ಶಿಕ್ಷಣ ಸಚಿವಾಲಯದ ರಾಜ್ಯ ಸಚಿವ ಡಾ. ಸುಕಾಂತ ಮಜುಂದಾರ್ ಅವರು ಲಿಖಿತ ರೂಪದಲ್ಲಿ ಮಾಹಿತಿ ನೀಡಿದ್ದಾರೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ತಿಳಿಸಿದ್ದಾರೆ.

ನವದೆಹಲಿಯಲ್ಲಿ ನಡೆಯುತ್ತಿರುವ ಮಳೆಗಾಲ ಅಧಿವೇಶದಲ್ಲಿ ಕರ್ನಾಟಕ ರಾಜ್ಯದಲ್ಲಿ ಕೇಂದ್ರೀಯ ಅನುದಾನಿತ ಉನ್ನತ ಶಿಕ್ಷಣ ಸಂಸ್ಥೆಗಳ ಮೂಲಸೌಕರ್ಯ ಮತ್ತು ವ್ಯವಸ್ಥೆಗಳನ್ನು ಪುನರುಜ್ಜೀವನಗೊಳಿಸುವ ಯೋಜನೆಯಡಿ ಸರ್ಕಾರವು ತೆಗೆದುಕೊಂಡ ಕ್ರಮಗಳು ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ಕೇಂದ್ರೀಯ ಅನುದಾನಿತ ಉನ್ನತ ಶಿಕ್ಷಣ ಸಂಸ್ಥೆಗಳ ಮೂಲಸೌಕರ್ಯ ಅಗತ್ಯತೆಗಳನ್ನು ಪೂರೈಸಲು, ಉನ್ನತ ಶಿಕ್ಷಣ ಹಣಕಾಸು ಸಂಸ್ಥೆ ಮೂಲಕ ಹಣವನ್ನು ಒದಗಿಸಲಾಗುತ್ತದೆ. ಐ.ಐ.ಟಿ.ಗಳು, ಎನ್.ಐ.ಟಿ.ಗಳು, ಐ.ಐ.ಟಿ.ಎಸ್, ಐ.ಐ.ಎಂ.ಎಸ್, ಸಿ.ಯು.ಗಳು, ಐ.ಐ.ಎಸ್.ಇ.ಆರ್.ಗಳು ಮತ್ತು ಐ.ಐ.ಎಸ್.ಸಿ.ಯಂತಹ ಸಂಸ್ಥೆಗಳು ಈ ಯೋಜನೆಯಡಿ ಧನಸಹಾಯಕ್ಕೆ ಅರ್ಹವಾಗಿವೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ೨೦೨೪-೨೫ ರಲ್ಲಿ ೩೬.೨೯ ಕೋಟಿ ರೂಪಾಯಿ ಅನುದಾನ ಬಳಕೆಯಾಗಿದೆ ಎಂದು ಸಚಿವರು ಉತ್ತರಿಸಿದ್ದಾರೆಂದರು.

RELATED ARTICLES

Most Popular

error: Content is protected !!
Join WhatsApp Group