spot_img
spot_img

ಓತಿಹಾಳ ಸರಕಾರಿ ಶಾಲೆಯ ಛಾವಣಿ ಶಿಥಿಲ; ಬಯಲಲ್ಲೆ ಪಾಠ ಬೋಧನೆ

Must Read

- Advertisement -

ಸಿಂದಗಿ; ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೋಣೆಗಳು ಬಹಳ ಹಳೆಯದಾಗಿದ್ದು, ಮಳೆ ಬಂದರೆ ಸಾಕು ತರಗತಿಯ ಎಲ್ಲ ಕೋಣೆಗಳು ಸೋರುತ್ತಿರುತ್ತವೆ. ಹಲವಾರು ಬಾರಿ ಬಿಸಿ ಊಟದ ದವಸ-ಧಾನ್ಯಗಳು ಹಾಗೂ ಶಾಲೆಯ ಇನ್ನಿತರ ವಸ್ತುಗಳು ನೀರಲ್ಲಿ ಮುಳುಗಿ ಹೋಗಿದ್ದು, ಈ ವಿಷಯಕ್ಕೆ ಸಂಬಂಧಿಸಿದಂತೆ ಹತ್ತಾರು ವರ್ಷಗಳಿಂದಲೂ ಶಿಕ್ಷಣ ಇಲಾಖೆಗೆ ಸ್ಥಳೀಯ ಶಾಸಕರಿಗೆ ಮತ್ತು ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಿ ಗಮನಕ್ಕೆ ತಂದರು ಕೂಡಾ ಶಾಲೆಯ ರೀಪೇರಿ, ಕೋಣೆಗಳ ನಿರ್ಮಾಣ ಏನೂ ಆಗಿರುವುದಿಲ್ಲ ಎಂದು ಶಾಲೆಯ ಎಸ್.ಡಿ.ಎಮ್.ಸಿ.ಅಧ್ಯಕ್ಷೆ ಬಸಮ್ಮ ಪ್ರಭು ಮಣೂರ ದೂರಿದ್ದಾರೆ.

ಶಾಲೆಯ ಛಾವಣಿ ಕೂಡ ಸೋರುತ್ತಿದ್ದು ಮಕ್ಕಳಿಗೆ ಬಯಲಲ್ಲಿಯೆ ಪಾಠ ಮಾಡುವ ಪರಿಸ್ಥಿತಿ ಬಂದಿದೆ ಎಂದು ಅವರು ಹೇಳಿದ್ದಾರೆ.

ಈಗಲಾದರೂ ಶಿಕ್ಷಣ ಇಲಾಖೆ ಅಧಿಕಾರಿಗಳು ಮತ್ತು ಶಾಸಕರು ಹಾಗೂ ತಹಶೀಲ್ದಾರ ಸಾಹೇಬರು ತಕ್ಷಣ ಓತಿಹಾಳ ಗ್ರಾಮದ ಶಾಲೆಗೆ ಭೇಟಿ ನೀಡಿ ಮಕ್ಕಳ ಕಲಿಕೆಗಾಗಿ ಉತ್ತಮ ಕೋಣೆಗಳ ನಿರ್ಮಾಣ ಮಾಡಿಕೊಡಬೇಕು ಬೇಗ ಶಾಲಾ ಮಕ್ಕಳಿಗೆ ಕೋಣೆಗಳ ವ್ಯವಸ್ಥೆ ಮಾಡಬೇಕು ಇಲ್ಲವಾದರೆ ಶಾಲಾ ಮಕ್ಕಳ ಜೊತೆಗೆ ತಾಲೂಕು ಶಿಕ್ಷಣ ಇಲಾಖೆಯ ಮುಂದೆ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಶಾಲೆಯ ಎಸ್.ಡಿ.ಎಮ್.ಸಿ.ಅಧ್ಯಕ್ಷೆ ಬಸಮ್ಮ ಪ್ರಭು ಮಣೂರ ಶಾಲೆಯ ಎಸ್.ಡಿ.ಎಮ್.ಸಿ. ಸದಸ್ಯರ ಪರವಾಗಿ ಆಗ್ರಹಿಸಿದ್ದಾರೆ

- Advertisement -

 

- Advertisement -
- Advertisement -

Latest News

ಗುಜನಟ್ಟಿ ಗ್ರಾ ಪಂ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ

ಮೂಡಲಗಿ - ತಾಲೂಕಿನ ಗುಜನಟ್ಟಿ ಗ್ರಾಮ ಪಂಚಾಯತಿಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಸಾಮಾನ್ಯ ವರ್ಗದಿಂದ ಕಲ್ಲಪ್ಪ ನಿಂಗಪ್ಪ ಮುಕ್ಕಣ್ಣವರ, ಉಪಾಧ್ಯಕ್ಷರಾಗಿ...
- Advertisement -

More Articles Like This

- Advertisement -
close
error: Content is protected !!
Join WhatsApp Group