ಸವದತ್ತಿ: ಪಟ್ಟಣದ ಗುರ್ಲಹೊಸೂರಿನ ಸರಕಾರಿ ಶಾಸಕರ ಮಾದರಿ ಶಾಲೆಗೆ ಬಿಸಿಯೂಟ ಹಾಗೂ ತರಗತಿ ವೀಕ್ಷಣೆಗೆ ಶಿಕ್ಷಣ ಸಂಯೋಜಕರಾದ ಎಮ್ ಜಿ .ಕಡೇಮನಿ,ಬಿ.ಆಯ್.ಈ.ಆರ್.ಟಿ ಸಿ ವ್ಹಿ ಬಾರ್ಕಿ ಹಾಗೂ ಸಿ.ಆರ್.ಪಿ ಯಾದ ರಾಮಚಂದ್ರಪ್ಪ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಶಾಲೆಯ ಪದವೀಧರ ಪ್ರಧಾನ ಗುರುಗಳಾದ ಎಮ್ ಬಿ ಕಮ್ಮಾರ ,ಸಹಶಿಕ್ಷಕರಾದ ಎಮ್ ಜಿ ದೊಡಮನಿ,ಎಮ್ ಎಮ್ ಮಾಟೋಳ್ಳಿ, ಬಿ ಎನ್ ದೊಡ್ಡಕಲ್ಲನ್ನವರ ಹಾಗೂ ಶಿಕ್ಷಕಿಯರಾದ ಶ್ರೀಮತಿ ಜಿ ಸಿ ಗುಂಡಾರ,ಎಸ್ ಎಸ್ ಮಿರ್ಜಿ,ಜಿ ಕೆ ಕೆಂಪಯ್ಯನವರ,ಬಿ ಕೆ ಸಂತಿ,ಎನ್ ಆರ್ ಯಕ್ಕುಂಡಿ ಹಾಗೂ ವ್ಹಿ ಆರ್ ಗೊರಗುದ್ದಿ ಶ್ರೀಮತಿ. ಎನ್.ಆರ್.ಜಂಬೂನವರ. ಹಾಜರಿದ್ದರು.
ಶಾಲಾ ಅಡುಗೆ ಸಿಬ್ಬಂದಿಯು ಎಸ್. ಓ. ಪಿ. ಪಾಲನೆ ಮಾಡಿ ಕಾರ್ಯ ನಿರ್ವಹಿಸಿದರು.ಮಕ್ಕಳಿಗೆ ಸಿಹಿ ಹಂಚುವುದರ ಮೂಲಕ ತರಗತಿಗಳ ಪುನರಾರಂಭ ಮತ್ತು ಪಿ. ಎಂ. ಪೋಷಣ ಶಕ್ತಿ ನಿರ್ಮಾಣ ಮಧ್ಯಾಹ್ನ ಉಪಹಾರ ಯೋಜನೆಯನ್ನು ಯಶಸ್ವಿಯಾಗಿ ಪ್ರಾರಂಭಿಸಲಾಯಿತು.