ಕಾರಿಪುರ ದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿಯ ನೇತೃತ್ವದಲ್ಲಿ ಪರಿಷತ್ತು ಭವನಕ್ಕಾಗಿ ಅಡಿಗಲ್ಲು ಸಮಾರಂಭ ಜನವರಿ ೨೬ ರಂದು ಬೆಳಿಗ್ಗೆ ನಡೆಯಿತು.
ಮಾಜಿ ಮುಖ್ಯ ಮಂತ್ರಿಗಳಾದ ಮಾನ್ಯ ಬಿ. ಎಸ್. ಯಡಿಯೂರಪ್ಪ ನವರು ಗುದ್ದಲಿ ಪೂಜೆ ನೆರವೇರಿಸಿ ನಂತರ ನಡೆದ ವೇದಿಕೆ ಕಾರ್ಯಕ್ರಮವನ್ನು ದೀಪಬೆಳಗಿಸಿ ಉದ್ಘಾಟಿಸಿದರು.
ಸಂಸದ ಬಿ. ವೈ. ರಾಘವೇಂದ್ರ ಅವರು, ಕಸಾಪ ಜಿಲ್ಲಾ ಅಧ್ಯಕ್ಷರಾದ ಡಿ. ಮಂಜುನಾಥ, ಯುವ ಮುಖಂಡರಾದ ಬಿ. ವೈ. ವಿಜೇಂದ್ರ, ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಕೆ. ಎಸ್. ಗುರುಮೂರ್ತಿ, ಪುರಸಭೆ ಅಧ್ಯಕ್ಷರಾದ ಶ್ರೀಮತಿ ರೇಖಾಬಾಯಿ, ಕೊಳಿಗೆ ರೇವಣಪ್ಪ, ಎಚ್. ಟಿ. ಬಳಿಗಾರ್, ಎಂ. ಬಿ. ಚನ್ನವೀರಪ್ಪ, ನಗರದ ಮಹಾದೇವಪ್ಪ, ಅಗಡಿ ಅಶೋಕ್, ಟಿ. ಎಸ್. ಮೋಹನ್, ಗುರುರಾಜ ಜಗತಪ್, ಎಚ್. ಎಸ್. ರಘು, ಎಸ್. ಆರ್. ಕೃಷ್ಣಪ್ಪ, ಕಾನೂರು ನಾಗಪ್ಪ, ಎಂ. ಆರ್. ರಘು, ಕಸಾಸಾಂ ವೇದಿಕೆ ಅಧ್ಯಕ್ಷರಾದ ಕೆ. ಎಸ್. ಹುಚ್ಚರಾಯಪ್ಪ, ಕಜಾಪ ಅಧ್ಯಕ್ಷರಾದ ಬಿ. ಪಾಪಯ್ಯ, ಜಿಲ್ಲಾ ಕಾರ್ಯದರ್ಶಿ ಎಂ. ಎಂ. ಸ್ವಾಮಿ, ಜಿಲ್ಲಾ ಸಮಿತಿಯ ಕಾನೂರು ಮಲ್ಲಿಕಾರ್ಜುನ, ತಾ. ಕಾರ್ಯದರ್ಶಿ ಸುನಿಲ್ ಕುಮಾರ್, ನರಸಿಂಹ ಸ್ವಾಮಿ, ಕಾಳಿಂಗರಾವ್, ಎಂ. ಎಚ್. ಸತ್ಯನಾರಾಯಣ, ಕುನ್ನೂರು ಮಂಜಪ್ಪ, ಕಾಶಿಬಾಯಿ, ಜಯಣ್ಣ, ಜಿಯಾಉಲ್ಲಾ, ಡಾ. ರಿಯಾಜ್ ಪಾಷ, ಚುರ್ಚುಗುಂಡಿ ಚನ್ನೇಶ್, ಗಾಯಕಿ ಕಾಶಿಬಾಯಿ, ಸೇರಿದಂತೆ ಅನೇಕರು ಭಾಗವಹಿಸಿದ್ದರು.