Homeಸುದ್ದಿಗಳುತನು ಕನ್ನಡ ಮನ ಕನ್ನಡ ರಾಜ್ಯ ಪ್ರಶಸ್ತಿಗೆ ಸಿದ್ದಲಿಂಗ ಕಿಣಗಿ ಆಯ್ಕೆ

ತನು ಕನ್ನಡ ಮನ ಕನ್ನಡ ರಾಜ್ಯ ಪ್ರಶಸ್ತಿಗೆ ಸಿದ್ದಲಿಂಗ ಕಿಣಗಿ ಆಯ್ಕೆ

ಸಿಂದಗಿ: ವಿಜಯಪುರದ ತನು ಫೌಂಡೇಶನ್ ಪ್ರತಿ ವರ್ಷದಂತೆ ಕೊಡಮಾಡುವ ರಾಜ್ಯ ಮಟ್ಟದ ತನು ಕನ್ನಡ ಮನ ಕನ್ನಡ ರಾಜ್ಯ ಪ್ರಶಸ್ತಿಗೆ ಸಿಂದಗಿಯ ವರದಿಗಾರ ಮತ್ತು ಎಚ್.ಜಿ ಕಾಲೇಜಿನ ಉಪನ್ಯಾಸಕ ಸಿದ್ದಲಿಂಗ ಕಿಣಗಿ ಆಯ್ಕೆಯಾಗಿದ್ದಾರೆ.

ಇವರು ಪತ್ರಿಕಾ ಕ್ಷೇತ್ರದಲ್ಲಿ ಸುಮಾರು ವರ್ಷಗಳ ಕಾಲ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ತನು ಫೌಂಡೇಶನ್ ಸಂಸ್ಥೆಯ ಅವರಿಗೆ ಪ್ರಶಸ್ತಿ ನೀಡಿದೆ. ನ6 ರಂದು ವಿಜಯಪುರದ ಕಂದಗಲ ಹಣಮಂತ್ರಾಯ ರಂಗಮಂದಿರದಲ್ಲಿ ಸಂಜೆ 4ಗಂಟೆಗೆ ಜರುಗುವ ಕಾರ್ಯಕ್ರಮದಲ್ಲಿ ಸಿದ್ದಲಿಂಗ ಕಿಣಗಿ ಅವರು ಪ್ರಶಸ್ತಿ ಪಡೆಯಲಿದ್ದಾರೆ. ಕಾನಿಪ ಸಂಘದ ಅಧ್ಯಕ್ಷ ಆನಂದ ಶಾಬಾದಿ ಹಾಗೂ ಎಲ್ಲ ಸದಸ್ಯರು ಅಭಿನಂದನೆ ಸಲ್ಲಿಸಿದ್ದಾರೆ.

RELATED ARTICLES

Most Popular

error: Content is protected !!
Join WhatsApp Group