ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕ್ ರಜತ ಮಹೋತ್ಸವ

Must Read

ಬಾಗಲಕೋಟೆ- ನಡೆದಾಡುವ ದೇವರಾದ ವಿಜಯಪುರದ ಜ್ಞಾನ ಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮಿಗಳ ಅಮೃತ ಹಸ್ತ ದಿಂದ 1997ರಲ್ಲಿ ಶುರುವಾದ ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕ್ ಪ್ರಸ್ತುತ ರಜತ ಮಹೋತ್ಸವ ಆಚರಿಸುವ ಮಟ್ಟಕ್ಕೆ ಬೆಳೆದಿರುವುದು ಆ ಸ್ವಾಮಿಗಳ ಶುಭಾರ್ಶೀವಾದ ಕಾರಣ ಎಂದು ಮಾಜಿ ಸಚಿವ ಎಸ್ ಆರ್ ಪಾಟೀಲ ಹೇಳಿದರು.

ಎಸ್ ಆರ್ ಪಾಟೀಲ ಸಾಂಗ್ ಸಮೂಹ ಸಂಸ್ಥೆಗಳು ಬಾಡಗಂಡಿ ಅವರ ಅಡಿಯಲ್ಲಿ ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕಿನ ರಜತ ಮಹೋತ್ಸವದ ನಿಮಿತ್ತ ಬ್ಯಾಂಕಿನ ನವೀಕೃತ ಕಟ್ಟಡ ಶಾಲಾ ನೂತನ ಕಟ್ಟಡ ಮತ್ತು ಎಸ್ಆರ್ ಪಾಟೀಲ ಶಿಕ್ಷಣ ಪ್ರತಿಷ್ಠಾನದ ನೂತನ ಕಟ್ಟಡಗಳ ಉದ್ಘಾಟನೆ ಹಾಗೂ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಆಶೀರ್ವಚನದಲ್ಲಿ ಮುಂದುವರೆದು ಮಾತನಾಡುತ್ತಾ, ಬರೀ ಹನ್ನೊಂದು ಲಕ್ಷ ರೂಪಾಯಿ ಶೇರು ಬಂಡವಾಳದೊಂದಿಗೆ ಆರಂಭವಾದ ಬ್ಯಾಂಕ್ ಇಂದು ಸುಮಾರು 900 ಕೋಟಿ ಬಂಡವಾಳ ಹೊಂದುವಷ್ಟು ಬೆಳೆದಿದೆ. ಸುಮಾರು ಹತ್ತು ಸಾವಿರದಷ್ಟು ಪೂರಕ ಉದ್ಯೋಗಗಳನ್ನು ನಮ್ಮ ಬ್ಯಾಂಕ್ ಒದಗಿಸಿದೆ ಎಂದರು.

ಇಂದು ಕಾರ್ಗಿಲ್ ಯುದ್ಧದಲ್ಲಿ ನಮ್ಮ ದೇಶ ವಿಜಯ ಸಾಧಿಸಿದ ದಿನವಿದು. ಇಂತಹ ಮಹತ್ವದಾಯಕವಾದ ಘಳಿಯ ಶುಭ ದಿನದಂದೇ ನಮ್ಮ ಬ್ಯಾಂಕಿನ ರಜತ ಮಹೋತ್ಸವ ಕಾರ್ಯಕ್ರಮ ಜರುಗುತ್ತಿರುವುದು ನನ್ನ ಪುಣ್ಯ ಇದು ನಮ್ಮ ಸಂಸ್ಥೆಯ ಇತಿಹಾಸದಲ್ಲಿಯೇ ಚಾರಿತ್ರ್ಯಿಕ ಸಮಾರಂಭ ಎಂದರೂ ತಪ್ಪಾಗಲಾರದು. ಶತಮಾನಗಳಷ್ಟು ಹಳೆಯದಾದ ಬ್ಯಾಂಕ್ ಗಳ ಪೈಪೋಟಿಗಳನ್ನು ಎದುರಿಸಿ ಇವತ್ತು ರಜತ ಮಹೋತ್ಸವ ಆಚರಿಸುವ ಮಟ್ಟಕ್ಕೆ ನಮ್ಮ ಬ್ಯಾಂಕ್ ಬೆಳೆದಿರುವುದು ಸಣ್ಣ ವಿಚಾರವಲ್ಲ ಇದರ ಹಿಂದೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಕಾರಣವಾದವರ ಪರಿಶ್ರಮ ಇದೆ ಎಂದರು.

ಮುಂದುವರೆದು ನಮ್ಮ ಬ್ಯಾಂಕ್ ರಜತ ಮಹೋತ್ಸವದ ನಿಮಿತ್ತ ಕಲೆ,ಸಾಹಿತ್ಯ, ಸಾಂಸ್ಕೃತಿಕ, ಕ್ರೀಡೆ ಸೇರಿದಂತೆ ಜಿಲ್ಲೆ,ರಾಜ್ಯ,ರಾಷ್ಟ್ರೀಯ ಮಟ್ಟದ ಕಾರ್ಯಕ್ರಮ ಮಾಡಿದ್ದೇವೆ ಎಂದರಲ್ಲದೆ ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕ್ ನಾವು ಕಟ್ಟಿದ ಮೊದಲ ಸಂಸ್ಥೆ ಆಗಿದೆ. ಅಲ್ಲಿಂದ ನಾವು ಹಿಂತಿರುಗಿ ನೋಡಲೇಇಲ್ಲ. ಇವತ್ತು ಬ್ಯಾಂಕ ಹದಿನೆಂಟು ಶಾಖೆಗಳನ್ನು ಹಾಗೂ ಎಲ್ ಕೆಜಿ ಯಿಂದ ವೈದ್ಯಕೀಯ ಕಾಲೇಜ್ ಹಂತಕ್ಕೆ ಎಸ್ ಆರ್ ಪಾಟೀಲ ಸಮೂಹ ಸಂಸ್ಥೆಗಳ ಬೃಹತ್ ಮಟ್ಟಕ್ಕೆ ಬೆಳೆಯಲು ಬೀಳಗಿ ಪಟ್ಟಣ ಬ್ಯಾಂಕ್ ನಮಗೆ ತಳಪಾಯವಾಗಿದೆ. ಎಂದು ಹೇಳಿದರು.

ನಮ್ಮ ಸಮೂಹ ಸಂಸ್ಥೆಗಳು ಜಾತ್ಯತೀತ, ಧರ್ಮಾತೀತ ಪರಿಕಲ್ಪನೆಯ ಹಾದಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ನಮ್ಮ ಸಂಸ್ಥೆಗಳಲ್ಲಿ ಯಾವತ್ತೂ ಕೂಡ ನಾವು ಮೇಲು,ಕೀಳು ಭೇದಬಾವ ಮಾಡುವುದಿಲ್ಲ.ಮನುಷ್ಯ ಈ ಭೂಮಿಗೆ ಬಂದ ಮೇಲೆ ಜನ್ಮ ಕೊಟ್ಟ ತಂದೆ,ತಾಯಿಗಳ, ವಿದ್ಯೆ ಕೊಟ್ಟ ಗುರುಗಳ, ಜನ್ಮ ನೀಡಿದ ಭೂಮಿತಾಯಿ ಕೊನೆಗೆ ನಾವು ಹುಟ್ಟಿದ ಊರು, ಈ ನಾಡಿನ ಋಣ ತೀರಿಸುವ ಕೆಲಸ ಮಾಡಿದಾಗ ಮಾತ್ರವೇ ನಾವು ಮನುಷ್ಯರಾಗಿ ಹುಟ್ಟಿದ್ದಕ್ಕೂ ಸಾರ್ಥಕ ಎಂದು ನಾನು ಭಾವಿಸಿದ್ದೇನೆ. ಈ ಸಮಾಜದ ಅಭಿವೃದ್ಧಿಗೆ ನಾನು ಜೀವಂತ ಇರುವ ತನಕವೂ ನನ್ನ ಕೈಲಾದ ಸೇವೆ ಮಾಡುತ್ತೇನೆ ಎಂದರು.

ಈ ವೇಳೆಯಲ್ಲಿ ಪ.ಪೂಜ್ಯ ಡಾ.ತೋಂಟದ ಸಿದ್ದರಾಮ ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸಿದ್ದರು ಸಚಿವರುಗಳಾದ ಕೆ ಎಚ್ ಮುನಿಯಪ್ಪ, ಎಚ್ ಕೆ ಪಾಟೀಲ, ಸತೀಶ ಜಾರಕಿಹೊಳಿ, ಶಿವಾನಂದ ಪಾಟೀಲ, ಆರ್ ಬಿ ತಿಮ್ಮಪೂರ ಸಂಸದರಾದ ಪಿ ಸಿ ಗದ್ದಿಗೌಡರ,ಶಾಸಕರಾದ ಎಚ್ ವೈ ಮೇಟಿ,ಶ್ರೀ ಭೀಮಸೇನ ಚಿಮ್ಮನಕಟ್ಟಿ ವಿಧಾನ‌ ಪರಿಷತ್ ಸದಸ್ಯರುಗಳಾದ ಪಿ ಎಚ್ ಪೂಜಾರಿ, ಹನಮಂತ ನೀರಾಣಿ, ಎಸ್ ಜಿ ನಂಜಯ್ಯನಮಠ, ಶ್ರೀ ಬಸವಪ್ರಭು ಸರನಾಡಗೌಡ, ಎಮ್ ಎನ್ ಪಾಟೀಲ
ಸೇರಿದಂತೆ ಬ್ಯಾಂಕಿನ ನಿರ್ದೇಶಕ ಮಂಡಳಿ,ಸಿಬ್ಬಂದಿ ವರ್ಗದವರು  ಸಮೂಹ ಸಂಸ್ಥೆಗಳ ಎಲ್ಲಾ ಮುಖ್ಯಸ್ಥರು ,ಗ್ರಾಹಕರು ಸಾರ್ವಜನಿಕರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Latest News

ಸೈಡ್ ನೀಡಲಿಲ್ಲ ಎಂಬ ಕಾರಣಕ್ಕೆ ಬಸ್ ಚಾಲಕನನ್ನು ಥಳಿಸಿದ ಬೈಕ್ ಸವಾರ

ಬೀದರ - ಸರ್ಕಾರಿ ಬಸ್ ಚಾಲಕ ಸೈಡ್ ಕೊಡಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಬಸ್ ಚಾಲಕನನ್ನು ಬಸ್ ನಿಂದ ಕೆಳಗೆ ಇಳಿಸಿ ಬೈಕ್ ಸವಾರ ಹಲ್ಲೆ...

More Articles Like This

error: Content is protected !!
Join WhatsApp Group