Homeಸುದ್ದಿಗಳು110/11 ಕೆವಿ ವಿದ್ಯುತ್ ಪ್ರಸರಣ ಕೇಂದ್ರದ ಕಾಮಗಾರಿಗೆ ಚಾಲನೆ

110/11 ಕೆವಿ ವಿದ್ಯುತ್ ಪ್ರಸರಣ ಕೇಂದ್ರದ ಕಾಮಗಾರಿಗೆ ಚಾಲನೆ

ಸಿಂದಗಿ– ತಾಲೂಕಿನ ಗುಬ್ಬೇವಾಡಿ ಗ್ರಾಮದಲ್ಲಿ 110/11ಕೆ. ವಿ. ವಿದ್ಯುತ್ ಪ್ರಸರಣ ಕೇಂದ್ರದ  ಕಾಮಗಾರಿಗೆ ಶಾಸಕ ಅಶೋಕ್ ಮನಗೂಳಿ ಮಂಗಳವಾರ  ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.

ಈ ವೇಳೆ ಅವರು ಮಾತನಾಡಿ, ಈ ಭಾಗದ ರೈತರ ಬಹುದಿನಗಳ ಬೇಡಿಕೆಯಾಗಿರುವ ವಿದ್ಯುತ್ ಪ್ರಸರಣ ಕೇಂದ್ರ ಸ್ಥಾಪನೆಯಾಗುತ್ತಿರುವುದು ಸಂತಸ ತಂದಿದೆ. ಇದು ಯಂಕಂಚಿ ಗ್ರಾಮದಿಂದ ಗುಬ್ಬೇವಾಡ ಗ್ರಾಮದವರೆಗೆ 110ಕೆ. ವಿ ಸುಮಾರು 11 ಕಿಲೋಮೀಟರ್ ವರೆಗೆ ವಿದ್ಯುತ್ ಮಾರ್ಗ ನಿರ್ಮಿಸುವುದು ಹಾಗೂ 10 ಎಮ್. ವಿ. ಎ ವಿದ್ಯುತ್ ಪರಿವರ್ತಕ ಅಳವಡಿಸುವ ಕಾಮಗಾರಿ ಒಟ್ಟು 11.64 ಕೋಟಿ ಹಣವನ್ನ ಒಳಗೊಂಡಿರುವ ಕಾಮಗಾರಿ ಇದಾಗಿದೆ. ಇದರ ನಿರ್ಮಾಣದಿಂದ ಈ ಭಾಗ ಸೇರಿದಂತೆ ಸುತ್ತಮುತ್ತ ಅನೇಕ ಗ್ರಾಮಗಳ  ರೈತರಿಗೆ ಅತ್ಯಂತ ಅನುಕೂಲವಾಗಲಿದೆ. ರೈತರ ಪಂಪ್ಸೆಟ್ಟುಗಳಿಗೆ  ದಿನಕ್ಕೆ ಏಳು ಗಂಟೆ ವಿದ್ಯುತ್ ಪೂರೈಕೆ,  ಹೈ ವೋಲ್ಟೇಜ್ ವಿದ್ಯುತ್ ಪೂರೈಕೆ ಈ ಕೇಂದ್ರದಿಂದ ನೆರವೇರಲಿದೆ ಎಂದು ಶಾಸಕ ಅಶೋಕ್ ಮನಗೂಳಿ ಹೇಳಿದರು.

ಈ ವೇಳೆ ಸಂಸದ ರಮೇಶ್ ಜಿಗಜಿಣಗಿ, ಮಾಜಿ ಶಾಸಕ ರಮೇಶ್ ಭೂಸನೂರ ಮಾತನಾಡಿ, ವಿದ್ಯುತ್ ಪ್ರಸರಣ ಕೇಂದ್ರ ನಿರ್ಮಾಣದಿಂದ ಹೆಚ್ಚು ಅನುಕೂಲವಾಗಲಿದೆ. ರೈತರು ಇದರ ಉಪಯೋಗವನ್ನು ಪಡೆದುಕೊಳ್ಳಬೇಕು ಎಂದು ಮಾತನಾಡಿದರು.

ಕಾರ್ಯಕ್ರಮದಲ್ಲಿ ಬಾಗಲಕೋಟದ ಕೆಪಿಟಿಸಿಎಲ್ ಅಧಿಕಾರಿಗಳಾದ ಕೆ. ಜಿ. ಹಿರೇಮಠ್, ಜಿ. ಕೆ. ಗೋಟ್ಯಾಳ, ವಿಜಯಪುರದ ಕೆಪಿಟಿಸಿಎಲ್ ಅಧಿಕಾರಿಗಳಾದ ಸುನಂದಾ ಜಂಬಗಿ, ಪ್ರಭು ಭಾಗವಹಿಸಿದ್ದರು.

RELATED ARTICLES

Most Popular

error: Content is protected !!
Join WhatsApp Group