Homeಸುದ್ದಿಗಳುಗಾಂಜಾ ಸಾಗಾಟ ಮಾಡುವ ಪೇಡ್ಲರ್ ಗಳ ಮೇಲೆ ಕಠಿಣ ಕ್ರಮ- ಎಸ್.ಪಿ ಕಿಶೋರ್ ಬಾಬು ಎಚ್ಚರಿಕೆ...!

ಗಾಂಜಾ ಸಾಗಾಟ ಮಾಡುವ ಪೇಡ್ಲರ್ ಗಳ ಮೇಲೆ ಕಠಿಣ ಕ್ರಮ- ಎಸ್.ಪಿ ಕಿಶೋರ್ ಬಾಬು ಎಚ್ಚರಿಕೆ…!

ಬೀದರ – ಗಡಿ ಭಾಗದಲ್ಲಿ ಗಾಂಜಾ ಸಾಗಾಟ ದಂಧೆಯಲ್ಲಿ ತೊಡಗಿದ್ದ ನಟೋರಿಯಸ್ ಗಳ ಹೆಡೆಮುರಿ ಕಟ್ಟಲು ಜಿಲ್ಲಾ ಪೊಲೀಸ್ ಕಠಿಣ ಕ್ರಮಕ್ಕೆ ಮುಂದಾಗಿದ್ದು ಸತತ ಗಾಂಜಾ ಪೆಡ್ಲಿಂಗ್ ಮಾಡುವವರ ವಿರುದ್ಧ ಪಿಟ್ಎನ್ಡಿಪಿಎಸ್ ಪ್ರಕರಣ ದಾಖಲಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡೆಕ್ಕಾ ಕಿಶೋರ ಬಾಬು ಹೇಳಿದ್ದಾರೆ.

ನಗರದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸಕ್ತ ಒಂದೇ ತಿಂಗಳಲ್ಲಿ 640 ಕೆ.ಜಿ ಗಾಂಜಾ ಜಪ್ತಿ ಮಾಡಿಕೊಂಡಿದ್ದು ಗಾಂಜಾ ಸಾಗಾಟ ಮಾಡುತ್ತಿರುವವರ ವಿರುದ್ಧ ಹಿಂದಿನಿಂದಲೂ ಕ್ರಮ ಕೈಗೊಳ್ಳಲಾಗಿದೆ. ಇನ್ನು ಮೇಲೆಯೂ ಕೂಡ ಕಠಿಣ ಕ್ರಮಕ್ಕೆ ಮುಂದಾಗಿದ್ದು ಸತತವಾಗಿ ಗಾಂಜಾ ಪ್ರಕರಣದಲ್ಲಿ ಭಾಗಿಯಾದವರ ಮೇಲೆ ಪಿಟ್ ಎನ್ಡಿಪಿಎಸ್ ಕೇಸ್ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಗಾಂಜಾ ದಂಧೆಯಲ್ಲಿ ಭಾಗಿಯಾಗಿರುವವರ ವಿರುದ್ಧ ತೊಡೆ ತಟ್ಟಿ ನಿಂತಿರುವ ಬೀದರ್ ಪೊಲೀಸ್ ವರಿಷ್ಠಾಧಿಕಾರಿ ಕಿಶೋರ್ ಬಾಬು, ಗಾಂಜಾ ದಂಧೆಕೋರರನ್ನು ಬುಡ ಸಮೇತವಾಗಿ ಕಿತ್ತು ಹಾಕಲಾಗುತ್ತದೆ ಎಂದು ಗುಡುಗಿದ್ದಾರೆ.

RELATED ARTICLES

Most Popular

error: Content is protected !!
Join WhatsApp Group