Homeಸುದ್ದಿಗಳುಬಿಜೆಪಿ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ - ತಂಗಡಗಿ

ಬಿಜೆಪಿ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ – ತಂಗಡಗಿ

ಸಿಂದಗಿ: ಮೈಸೂರು ರಾಜಾ ನಾಲ್ವಡಿ ಕೃಷ್ಣರಾಜ ಒಡೆಯರ ಅವರು ಭೋವಿ, ವಡ್ಡರ ಶ್ರಮವನ್ನು ನೋಡಿ 1956ರಲ್ಲಿ ಪ.ಜಾ ಪಟ್ಟಿಯಲ್ಲಿ ಸೇರ್ಪಡೆಗೆ ಆದೇಶ ನೀಡುವಂತೆ ಕೇಂದ್ರಕ್ಕೆ ಶಿಪ್ಪಾರಸು ಮಾಡಿ ಮೀಸಲಾತಿ ಕಲ್ಪಿಸಿಕೊಟ್ಟಿದ್ದರಿಂದ ಡಾ. ಅಂಬೇಡ್ಕರ ಅವರ ಸಂವಿದಾನದ ಆಧಾರದ ಮೇಲೆ ಇಂದು ನಾವೆಲ್ಲರ ಮೀಸಲಾತಿ ಯಿಂದ ಗೆದ್ದು ಬಂದಿದ್ದೇವೆ ಅಲ್ಲದೆ ಸಿದ್ದರಾಮಯ್ಯನವರ ಆಡಳಿತದಲ್ಲಿ ಭೋವಿ ಅಭಿವೃದ್ಧಿ ನಿಗಮ ಮಂಜೂರು ನೀಡಿದ್ದು ಅದಕ್ಕೆ ಬಿಜೆಪಿ ಸರಾಕಾರ ಹಣ ನೀಡುವಲ್ಲಿ ಮಲತಾಯಿ ಧೋರಣೆ ತಾಳುತ್ತಿದೆ ಇಂತಹ ಕೋಮುವಾದಿ ಪಕ್ಷದಿಂದ ದಲಿತರ ಉದ್ಧಾರವಾಗುವುದು ಕನಸಿನ ಮಾತು ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ಅರೋಪಿಸಿದರು.

ತಾಲೂಕಿನ ಆಲಮೆಲ ಹಾಗೂ ಮಲಗಾಣದ ವಡ್ಡರ ಗಲ್ಲಿಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಅಶೋಕ ಮನಗೂಳಿ ಪರ ಮತಯಾಚಿಸಿ ಬಹಿರಂಗ ಸಭೆಯಲ್ಲಿ ಮಾತನಾಡಿ, ಅದು ಮಿಸಲಾತಿ ದಕ್ಷಿಣ ಕರ್ನಾಟಕಕ್ಕೆ ಮೀಸಲಾಗಿತ್ತು ಅದನ್ನು ಉತ್ತರ ಕರ್ನಾಟಕಕ್ಕೂ ಮುಂದುವರೆಸಲು ಕಾಂಗ್ರೆಸ್ ಪಕ್ಷದ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಕಲ್ಪಿಸಿಕೊಟ್ಟರು ಅದನ್ನು ಪ್ರಧಾನಿ ಇಂದಿರಾಗಾಂಧಿ ಅವರು ಗೆಜೆಟನ್ನು ಪಾಸು ಮಾಡಿ ವಡ್ಡರ ಸಮುದಾಯವನ್ನು ಮೇಲೆತ್ತಿದ್ದಾರೆ ಆದರೆ ಅವರು ಮಾಡಿದ ಎಲ್ಲ ಯೋಜನೆಗಳಿಗೆ ತಣ್ಣೀರು ಎರಚಿದ್ದಾರೆ ಇಂತಹ ಪ್ರಮಾದವನ್ನು ಮಾಡಿದ ಬಿಜೆಪಿಗೆ ಮತ ಕೇಳುವ ನೈತಿಕ ಹಕ್ಕಿಲ್ಲ ಎಂದು ಆರೋಪಿದರು.

ಕಾಂಗ್ರೆಸ್ ಪಕ್ಷದ 2013ರಿಂದ 2018ರ ವರೆಗೆ ಸಿದ್ದರಾಮಯ್ಯನವರ ಆಡಳಿತದಲ್ಲಿ ಭೋವಿ ಅಭಿವೃದ್ಧಿ ನಿಗಮ ಮಾಡಿ ಅದಕ್ಕೆ ರೂ.285 ಕೋಟಿ ಮಿಸಲಿಟ್ಟಿದ್ದರು ನಂತರದಲ್ಲಿ ಬಂದ ಬಿಜೆಪಿ ಸರಕಾರ ಯಾವುದೇ ಹಣ ನೀಡದೆ ಅದೇ ಹಣದಲ್ಲಿ ಮುಂದುವರೆಸಿಕೊಂಡು ಹೊರಟಿದ್ದಾರೆ ಕುಟುಂಬದ ಸದಸ್ಯನಿಗೆ 7 ಕೆ.ಜಿ. ಅಕ್ಕಿ ನೀಡುತ್ತಿರುವುದನ್ನು 5 ಕೆ.ಜಿ. ಅಕ್ಕಿ ನೀಡಿ ಅನ್ಯಾಯ ಮಾಡುತ್ತಿದೆ. ಡಾ ಅಂಬೇಡ್ಕರರ ಸಂವಿಧಾನದ ಆಧಾರದ ಮೇಲೆ 165 ಯೋಜನೆಗಳನ್ನು ನೀಡಿದೆ ಅದರಲ್ಲಿ ಕೆಲವೊಂದು ಯೋಜನೆಗಳನ್ನು ನಿಲ್ಲಿಸಿಬಿಟ್ಟಿದೆ. ರೈತರಿಗೆ, ಕೂಲಿಕಾರ್ಮಿಕರಿಗೆ ಯಾವುದೇ ಪರಿಹಾರ ಕಲ್ಪಿಸಿಕೊಟ್ಟಿಲ್ಲ ಬರೀ ಆಶ್ವಾಸನೆಯಲ್ಲಿ ಕಾಲಹರಣ ಮಾಡುತ್ತಿದೆ. ಜನಸಾಮಾನ್ಯರಿಗೆ ದಿನಬಳಕೆ ವಸ್ತುಗಳು, ಡಿಜೆಲ್, ಪೆಟ್ರೋಲ, ಗ್ಯಾಸ್, ಸೇರಿದಂತೆ ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೆರಿಸಿ ಜನರನ್ನು ತೊಂದರೆಯಲ್ಲಿ ಸಿಲುಕಿಸಿದೆ ಇದನ್ನು ಅರಿತ ವಡ್ಡರ ಸಮಾಜದ ಬಂದುಗಳು ಸ್ವಾಭಿಮಾನ ಪ್ರದರ್ಶಿಸಿ ಬಿಜೆಪಿ ತಕ್ಕ ಪಾಠ ಕಲಿಸಬೇಕು ಎಂದರು.

ಈ ಸಂದರ್ಭದಲ್ಲಿ ಮಾಜಿ ಜಿಪಂ ಸದಸ್ಯ ಅಮರೀಶ ಬೋನಾಳ, ಎಪಿಎಂಸಿ ರೆಡ್ಡಿ ಶ್ರೀನಿವಾಸ ಗಂಗಾವತಿ, ರಮೇಶ ನಾಯಕ, ಬಸವರಾಜ ಯಂಪೂರೆ, ಹಣಮಂತ ಬಂಟನೂರ, ಶಿವಾನಂದ ರಾಯಚೂರ ಸೇರಿದಂತೆ ಅನೇಕರು ಇದ್ದರು.

RELATED ARTICLES

Most Popular

error: Content is protected !!
Join WhatsApp Group