Homeಸುದ್ದಿಗಳುಸರ್ಕಾರ ನೀಡಿದ್ದ ಕೋವಿಡ್ ಪರಿಹಾರ ಚೆಕ್ ಬೌನ್ಸ್..!

ಸರ್ಕಾರ ನೀಡಿದ್ದ ಕೋವಿಡ್ ಪರಿಹಾರ ಚೆಕ್ ಬೌನ್ಸ್..!

ಯಾದಗಿರಿ – ಕೋವಿಡ್ ನಿಂದ ಮೃತಪಟ್ಟವರಿಗೆ ಪರಿಹಾರ ನೀಡುವುದಾಗಿ ಬಡಾಯಿ ಕೊಚ್ಚಿಕೊಳ್ಳುವ ಸರ್ಕಾರದಿಂದ ಬಂದ ಪರಿಹಾರದ ಚೆಕ್ ಬೌನ್ಸ್ ಆಗಿದ್ದು ಅಚ್ಚರಿ ಮೂಡಿಸಿದೆ.

ಬ್ಯಾಂಕಿನಲ್ಲಿ ಹಣ ಇಲ್ಲದೆಯೇ ಚೆಕ್ ನೀಡಿತಾ ಸರ್ಕಾರ ?

ಕೋವಿಡ್ ನಿಂದ ಮರಣ ಹೊಂದಿದ ವ್ಯಕ್ತಿಗಳಿಗೆ ಪರಿಹಾರ ಚೆಕ್ ವಿತರಣೆ ಮಾಡಲಾಗಿತ್ತು. ಪರಿಹಾರ ಸಿಗುತ್ತದೆ ಎಂಬ ಆಸೆಯಲ್ಲಿದ್ದವರಿಗೆ ಚೆಕ್ ಬೌನ್ಸ್ ಶಾಕ್ ಸಿಕ್ಕಿದ್ದು ಸರ್ಕಾರದ ಬಣ್ಣ ಬಯಲಾದಂತಾಗಿದೆ.

ಹಿನ್ನೆಲೆ – ಸುರಪುರ ತಾಲೂಕಿನ ಜಾಲಿಬೆಂಚಿ ಗ್ರಾಮದ ಬಸಣ್ಣಗೌಡ ಎನ್ನುವ ವ್ಯಕ್ತಿ ಕೋವಿಡ್ ನಿಂದ ಮೃತ ಪಟ್ಟಿದ್ದರು. ಈ ವ್ಯಕ್ತಿಯ ಕುಟುಂಬಸ್ಥರಿಗೆ ಒಂದು ಲಕ್ಷ ಪರಿಹಾರದ ಚೆಕ್ ಸರ್ಕಾರದಿಂದ ನೀಡಲಾಗಿತ್ತು. ಸುರಪುರ ಶಾಸಕ ರಾಜುಗೌಡ ಖುದ್ದಾಗಿ ಕುಟುಂಬದವರಿಗೆ ಚೆಕ್ ನೀಡಿದ್ದರು. ಆದರೆ ಸದ್ಯ ಸರ್ಕಾರದಿಂದ ನೀಡಿರುವ ಚೆಕ್ ಬೌನ್ಸ್ ಆಗಿದೆ. ಸರ್ಕಾರದ ಖಾತೆಯಲ್ಲಿ ಹಣ ಇಲ್ಲದೆಯಿದ್ದರೂ ಚೆಕ್ ನೀಡಿ ಜನರಿಗೆ ಮೋಸ ಮಾಡಿತಾ ಸರ್ಕಾರ ಎಂದು ಜನತೆ ಕೇಳುವಂತಾಗಿದೆ. ಸರ್ಕಾರ ನೀಡಿರುವ ಚೆಕ್ ಹಿಡಿದಯಕೊಂಡು ಬ್ಯಾಂಕ್ ಗೆ ಅಲೆದು ಅಲೆದು ಕುಟುಂಬಸ್ಥರು ಸುಸ್ತಾಗಿದ್ದಾರೆ. ಈಗ ಆ ಚೆಕ್ ಕೂಡ ಬೌನ್ಸ್ ಆಗಿ ಸರ್ಕಾರ ಪೇಚಿಗೆ ಸಿಲುಕಿದಂತಾಗಿದೆ.

ಚೆಕ್ ಬೌನ್ಸ್ ಪ್ರಕರಣದ ಕುರಿತು ಶಾಸಕರು ಏನು ಹೇಳುತ್ತಾರೋ ಕಾದು ನೋಡಬೇಕು.


ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ

RELATED ARTICLES

Most Popular

error: Content is protected !!
Join WhatsApp Group