ಗುಣಮಟ್ಟದ ಒಳಚರಂಡಿ ಕಾಮಗಾರಿಗೆ ಆಗ್ರಹ

Must Read

ಸಿಂದಗಿ: ಮಾಜಿ ಸಚಿವ ದಿ.ಎಂ.ಸಿ.ಮನಗೂಳಿ ಅವರ ಅವಧಿಯಲ್ಲಿ ನಗರದ 50 ವರ್ಷಗಳ ಮುಂದಾಲೋಚನೆಯನ್ನಿಟ್ಟು ಮಂಜೂರುಗೊಂಡಿರುವ ರೂ.92 ಕೋಟಿ ವೆಚ್ಚದ ಒಳಚರಂಡಿ ಯೋಜನೆಯು ಕಾರ್ಯ ಭರದಿಂದ ನಡೆದಿದ್ದು ಅಟ್ಟುಕಟ್ಟಾಗಿ ನಿರ್ಮಾಣ ಕಾರ್ಯ ನಡೆಯಬೇಕು ಎಂದು ನಗರ ಸುಧಾರಣಾ ಸಮಿತಿ ಅಧ್ಯಕ್ಷ ಹಾಗೂ ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪುರ, ಕಾರ್ಯದರ್ಶಿ ಶಿವಾನಂದ ತಾವರಕೇಡ, ಶ್ರೀಶೈಲ್ ಯಳಮೇಲಿ, ಶಾಂತು ರಾಣಾಗೋಳ, ಗುರುಪಾದ ಮಲ್ಲಾಡ, ಹಿರೇಮಠ ಆಗ್ರಹಿಸಿದರು.

ಪಟ್ಟಣದಲ್ಲಿ ನಿರ್ಮಾಣಗೊಳ್ಳುತ್ತಿರುವ ಒಳಚರಂಡಿ ಕಾಮಗಾರಿಯನ್ನು ವೀಕ್ಷಿಸಿ ಮಾತನಾಡಿ, ಈಗಾಗಲೇ ಪ್ರಮುಖ ಬಡಾವಣೆಗಳಲ್ಲಿ ಕಾರ್ಯ ಮುಂದುವರಿದಿದೆ. ಸುಮಾರು 2000 ಚೇಂಬರ್ ಗಳ ನಿರ್ಮಾಣ ಹಂತ ಮುಗಿದಿದೆ ಆದರೆ ಗುಣಮಟ್ಟದ ಬಗ್ಗೆ ಒಳಚರಂಡಿ ಇಲಾಖೆ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಹೆಚ್ಚು ಗಮನ ಹರಿಸಬೇಕಿದೆ.

ಈ ಯೋಜನೆ ಸಿಂದಗಿ ನಗರದ ಜನರಿಗೆ ಅನುಕೂಲಕರವಾಗುತ್ತದೆ ಆದಕಾರಣ ಗುಣಮಟ್ಟದಲ್ಲಿ ಯಾವುದೇ ರಾಜಿಯಾಗದೆ ಇಲಾಖೆ ಕೆಲಸವನ್ನು ಮುಂದುವರಿಸಬೇಕು ಅದೇ ರೀತಿ ಇನ್ನೂ 2200 ಚೇಂಬರ್ ಗಳ ನಿರ್ಮಾಣ ಚೆನ್ನಾಗಿ ಆಗಬೇಕೆಂದು ಒತ್ತಾಯಿಸಿದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group