ಸಿಂದಗಿ– ಕಳೆದ ಉಪ ಚುನಾವಣೆಯಲ್ಲಿ ತಳವಾರ ಸಮುದಾಯಕ್ಕೆ ಎಸ್ಟಿ ಪ್ರಮಾಣ ಪತ್ರ ನೀಡುವುದಾಗಿ ನಂಬಿಸಿ ಮತ ಪಡೆದುಕೊಂಡ ಶಾಸಕ ರಮೇಶ ಭೂಸನೂರ ಅವರು ಈ ಸಮುದಾಯಕ್ಕೆ ಮೋಸ ಮಾಡಿದ್ದಾರೆ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ತಳವಾರ ಸಮಾಜದ ಮಾಜಿ ತಾಲೂಕಾಧ್ಯಕ್ಷ ಸಂತೋಷ ಹರನಾಳ ಆಗ್ರಹಿಸಿದ್ದಾರೆ.
ಈ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ ಅವರು, ಈ ಸಮುದಾಯದ ಮುಖಂಡರಾದ ಶಿವಾಜಿ ಮೇಟಗಾರ ಸೇರಿದಂತೆ ಅನೇಕ ಗಣ್ಯರು ಬಿಜೆಪಿಯ ಯಾವುದೋ ಒಂದು ಆಸೆಗೆ ಜೋತು ಬಿದ್ದು ಸಮುದಾಯದ ಜನರಿಗೆ ತಪ್ಪು ದಾರಿಗೆ ತಳ್ಳಿದ್ದಾರೆ. ಚುನಾವಣೆ ನಂತರ ಕೇವಲ 6 ತಿಂಗಳಲ್ಲಿ ಎಸ್ಟಿ ಪ್ರಮಾಣ ಪತ್ರ ನೀಡುವ ಭರವಸೆ ನೀಡಿದ ರಾಜ್ಯ ಸರ್ಕಾರದ ನಾಯಕರು ಎಲ್ಲಿ ಹೋದರು.
ಚುನಾವಣೆ ಬಂದಾಗ ಮಾತ್ರ ಈ ಸಮುದಾಯ ನೆನಪಾಗುತ್ತದೆ ಬಸವಕಲ್ಯಾಣ, ಸಿಂದಗಿ ಸೇರಿದಂತೆ ಹಲವು ಕಡೆಗಳಲ್ಲಿ ಈ ಭರವಸೆಯನ್ನಿಟ್ಟು ಬಿಜೆಪಿ ಆ ಕ್ಷೇತ್ರಗಳನ್ನು ಗೆದ್ದುಕೊಂಡಿದೆ ಹೊರತು ಸಮಾಜದ ನೋವಿಗೆ ಅವರು ಸ್ಪಂದಿಸುತ್ತಿಲ್ಲ ಇಲ್ಲಿಯವರೆಗೂ ಈ ಸಮುದಾಯ ಎದುರಿಸುತ್ತಿರುವ ಈ ಸಮಸ್ಯೆಯ ಕಡೆಗೆ ಶಾಸಕ ರಮೇಶ ಭೂಸನೂರ ಕಿಂಚಿತ್ತು ಕಾಳಜಿ ಮಾಡಿಲ್ಲ ಕೂಡಲೇ ಎಸ್ಟಿ ಪ್ರಮಾಣ ಪತ್ರ ನೀಡುವಲ್ಲಿ ಸರ್ಕಾರ ಮುಂದಾಗಬೇಕು ಇಲ್ಲದಿದ್ದರೆ ಮುಂಬರುವ ಚುನಾವಣೆಯಲ್ಲಿ ತಕ್ಕ ಉತ್ತರ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.