Homeಸುದ್ದಿಗಳುಶಾಸಕ ಭೂಸನೂರ ತಳವಾರ ಸಮುದಾಯಕ್ಕೆ ಎಸ್ಟಿ ಪ್ರಮಾಣ ಪತ್ರ ನೀಡಬೇಕು

ಶಾಸಕ ಭೂಸನೂರ ತಳವಾರ ಸಮುದಾಯಕ್ಕೆ ಎಸ್ಟಿ ಪ್ರಮಾಣ ಪತ್ರ ನೀಡಬೇಕು

ಸಿಂದಗಿ– ಕಳೆದ ಉಪ ಚುನಾವಣೆಯಲ್ಲಿ ತಳವಾರ ಸಮುದಾಯಕ್ಕೆ ಎಸ್ಟಿ ಪ್ರಮಾಣ ಪತ್ರ ನೀಡುವುದಾಗಿ ನಂಬಿಸಿ ಮತ ಪಡೆದುಕೊಂಡ ಶಾಸಕ ರಮೇಶ ಭೂಸನೂರ ಅವರು ಈ ಸಮುದಾಯಕ್ಕೆ ಮೋಸ ಮಾಡಿದ್ದಾರೆ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ತಳವಾರ ಸಮಾಜದ ಮಾಜಿ ತಾಲೂಕಾಧ್ಯಕ್ಷ ಸಂತೋಷ ಹರನಾಳ ಆಗ್ರಹಿಸಿದ್ದಾರೆ.

ಈ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ ಅವರು, ಈ ಸಮುದಾಯದ ಮುಖಂಡರಾದ ಶಿವಾಜಿ ಮೇಟಗಾರ ಸೇರಿದಂತೆ ಅನೇಕ ಗಣ್ಯರು ಬಿಜೆಪಿಯ ಯಾವುದೋ ಒಂದು ಆಸೆಗೆ ಜೋತು ಬಿದ್ದು ಸಮುದಾಯದ ಜನರಿಗೆ ತಪ್ಪು ದಾರಿಗೆ ತಳ್ಳಿದ್ದಾರೆ. ಚುನಾವಣೆ ನಂತರ ಕೇವಲ 6 ತಿಂಗಳಲ್ಲಿ ಎಸ್ಟಿ ಪ್ರಮಾಣ ಪತ್ರ ನೀಡುವ ಭರವಸೆ ನೀಡಿದ ರಾಜ್ಯ ಸರ್ಕಾರದ ನಾಯಕರು ಎಲ್ಲಿ ಹೋದರು.

ಚುನಾವಣೆ ಬಂದಾಗ ಮಾತ್ರ ಈ ಸಮುದಾಯ ನೆನಪಾಗುತ್ತದೆ ಬಸವಕಲ್ಯಾಣ, ಸಿಂದಗಿ ಸೇರಿದಂತೆ ಹಲವು ಕಡೆಗಳಲ್ಲಿ ಈ ಭರವಸೆಯನ್ನಿಟ್ಟು ಬಿಜೆಪಿ ಆ ಕ್ಷೇತ್ರಗಳನ್ನು ಗೆದ್ದುಕೊಂಡಿದೆ ಹೊರತು ಸಮಾಜದ ನೋವಿಗೆ ಅವರು ಸ್ಪಂದಿಸುತ್ತಿಲ್ಲ ಇಲ್ಲಿಯವರೆಗೂ ಈ ಸಮುದಾಯ ಎದುರಿಸುತ್ತಿರುವ ಈ ಸಮಸ್ಯೆಯ ಕಡೆಗೆ ಶಾಸಕ ರಮೇಶ ಭೂಸನೂರ ಕಿಂಚಿತ್ತು ಕಾಳಜಿ ಮಾಡಿಲ್ಲ ಕೂಡಲೇ ಎಸ್ಟಿ ಪ್ರಮಾಣ ಪತ್ರ ನೀಡುವಲ್ಲಿ ಸರ್ಕಾರ ಮುಂದಾಗಬೇಕು ಇಲ್ಲದಿದ್ದರೆ ಮುಂಬರುವ ಚುನಾವಣೆಯಲ್ಲಿ ತಕ್ಕ ಉತ್ತರ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

RELATED ARTICLES

Most Popular

error: Content is protected !!
Join WhatsApp Group