Homeಸುದ್ದಿಗಳುವ್ಯಕ್ತಿ ಕಾಣೆ; ದೂರು

ವ್ಯಕ್ತಿ ಕಾಣೆ; ದೂರು

ಘಟಪ್ರಭಾ: ಮೋಬೈಲ್ ಗೆ ಕರೆನ್ಸಿ ಹಾಕಿಸಿಕೊಂಡು ಬರುವುದಾಗಿ ಹೋದ ವ್ಯಕ್ತಿಯೊಬ್ಬ ಕಾಣೆಯಾಗಿರುವ ಬಗ್ಗೆ ಆತನ ಸಹೋದರ ಪೊಲೀಸರಿಗೆ ದೂರು ನೀಡಿದ್ದಾರೆ.

ಸಮೀಪದ ಮಲ್ಲಾಪೂರ (ಪಿ ಜಿ) ಗ್ರಾಮದ, ೩೪ ವರ್ಷ ವಯಸ್ಸಿನ ಮಾರುತಿ ಲಕ್ಷ್ಮಣ ನಾಗರಮುನ್ನೊಳ್ಳಿ ( ತಳ್ಳ್ಯಾಗೋಳ) ದಿ. ೧೯ ರಂದು ಬಡಿಗವಾಡ ಗ್ರಾಮಕ್ಕೆ ಹೋಗಿ ಮೋಬೈಲ್ ಗೆ ಕರೆನ್ಸಿ ಹಾಕಿಸಿಕೊಂಡು ಬರುವುದಾಗಿ ಹೋದವನು ಇನ್ನೂ ಬಂದಿಲ್ಲ. ತನ್ನ ಸಹೋದರನನ್ನು ಹುಡುಕಿ ಕೊಡಬೇಕೆಂದು ಕಾಣೆಯಾದವನ ಸಹೋದರ ಹಾಲಪ್ಪ ಲಕ್ಷ್ಮಣ ನಾಗರಮುನ್ನೊಳ್ಳಿ ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

RELATED ARTICLES

Most Popular

error: Content is protected !!
Join WhatsApp Group