Homeಸುದ್ದಿಗಳುಹುಟ್ಟಿನಿಂದ ಸಾಯುವವರೆಗೆ ಬದುಕುವ ಹಕ್ಕು ಅದು ಮಾನವ ಹಕ್ಕು- ನ್ಯಾಯವಾದಿ ಅಂಗಡಿ

ಹುಟ್ಟಿನಿಂದ ಸಾಯುವವರೆಗೆ ಬದುಕುವ ಹಕ್ಕು ಅದು ಮಾನವ ಹಕ್ಕು- ನ್ಯಾಯವಾದಿ ಅಂಗಡಿ

ಸಿಂದಗಿ: ಮಾನವ ಹಕ್ಕುಗಳು ಯಾರೂ  ಕೊಟ್ಟಿದ್ದಲ್ಲ, ಇದನ್ನು ನಮಗೆ ಪ್ರಕೃತಿ ಕೊಟ್ಟಿದೆ ಈ ಹಕ್ಕನ್ನು ನಾವು ಯಾರಿಗೂ ಕೊಡುವುದಕ್ಕೆ ಬರುವುದಿಲ್ಲ. ಮಾನವ ಹಕ್ಕುಗಳನ್ನು ಸಂವಿಧಾನ ರಚನೆ ಮಾಡುವ ಸಂದರ್ಭದಲ್ಲಿ ಅವುಗಳನ್ನು ಮೂಲಭೂತ ಹಕ್ಕುಗಳೆಂದು ಅಳವಡಿಸಿಕೊಳ್ಳಲಾಗಿದೆ ಮನುಷ್ಯ ಹುಟ್ಟಿನಿಂದ ಸಾಯುವವರೆಗೆ ಬದುಕುವ ಹಕ್ಕು ಅದು ಮಾನವ ಹಕ್ಕು ಎಂದು ನ್ಯಾಯವಾದಿ ಎ.ಎಮ್.ಅಂಗಡಿ ಹೇಳಿದರು.

ಪಟ್ಟಣದ ಸಂಗಮ ಸಂಸ್ಥೆಯಲ್ಲಿ ಹಮ್ಮಿಕೊಂಡ ಮಾನವ ಹಕ್ಕುಗಳ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿ, ಮಾನವ ಹಕ್ಕುಗಳು ಎಲ್ಲಿ ಉಲ್ಲಂಘನೆಯಾಗುತ್ತದೆ ನಮ್ಮನ್ನು ಆಳುವಂತಹ ಸರ್ಕಾರ, ದೇಶದ ನಾಗರಿಕರಿಗೆ ಇರುವಂತಹ ಹಕ್ಕು ಮಾನವ ಹಕ್ಕುಗಳಾಗಿರಬಹುದು ಅಥವಾ ಮೂಲಭೂತ ಹಕ್ಕುಗಳಾಗಿರಬಹುದು, ಹಕ್ಕುಗಳು ಉಲ್ಲಂಘನೆಯಾದಾಗ ಮಾನವ ಹಕ್ಕು ಉಲ್ಲಂಘನೆಯೆಂದು ಪರಿಗಣಿಸುತ್ತೇವೆ. ಸಂಗಮ ಸಂಸ್ಥೆ ಯಾವತ್ತೂ ಜನರಿಗೆ ತಮಗೆ ಸಿಗುವ ಹಕ್ಕುಗಳು ಮತ್ತು ನ್ಯಾಯ ದೊರಕಿಸಿಕೊಡುವಲ್ಲಿ ಸಾಮಾಜಿಕ ಕಾಳಜಿ ವಹಿಸಿಕೊಂಡು ಬಂದಿದೆ ಎಂದರು.

ಅಧ್ಯಕ್ಷತೆ ವಹಿಸಿದ ಸಂಗಮ ಸಂಸ್ಥೆಯ ನಿರ್ದೇಶಕ ಫಾ. ಸಂತೋಷ ಮಾತನಾಡಿ, ಮಾನವ ಹಕ್ಕುಗಳನ್ನು 1948 ರಲ್ಲಿ ವಿಶ್ವಸಂಸ್ಥೆ ಅಂಗೀಕರಿಸಿತು. 1993 ರಲ್ಲಿ ಭಾರತದ ರಾಷ್ಟ್ರೀಯ ಮಾನವ ಹಕ್ಕುಗಳ ಸಂರಕ್ಷಣೆ ಮತ್ತು ಉತ್ತೇಜನಕ್ಕಾಗಿ ಸ್ಥಾಪಿಸಲಾಯಿತು. ಇದು ವ್ಯಕ್ತಿಯ ಜೀವನ, ಸ್ವಾತ್ರಂತ್ರ್ಯ, ಸಮಾನತೆ ಮತ್ತು ಘನತೆಗೆ ಸಂಬಂಧಿಸಿದ ಹಕ್ಕುಗಳ ಮೇಲೆ ಕಾರ್ಯ ನಿರ್ವಹಿಸುತ್ತದೆ. ಜಾತಿ, ಮತ, ಧರ್ಮ, ಜನಾಂಗ, ಬಣ್ಣ, ಭಾಷೆ ಮತ್ತು ಲಿಂಗ ಎಂಬ ತಾರತಮ್ಯ ಇಲ್ಲದೆ ಪ್ರತಿಯೊಬ್ಬ ಮನುಷ್ಯನೂ ಮೂಲಭೂತ ಹಕ್ಕುಗಳಿಗೆ ಅರ್ಹನಾಗಿರುತ್ತಾನೆ. ಮನುಷ್ಯ ಮೂಲ ಸವಲತ್ತುಗಳನ್ನು ಪಡೆಯುವುದು ಪ್ರತಿಯೊಬ್ಬ ಪ್ರಜೆಯ ಜನ್ಮಸಿದ್ಧ ಹಕ್ಕಾಗಿದೆ. ಸ್ವಾತ್ರಂತ್ರ್ಯ, ಸಮಾನತೆ ಹಾಗೂ ಎಲ್ಲರಿಗೂ ನ್ಯಾಯ ಒದಗಿಸುವುದು 2023ರ ಥೀಮ್ ಆಗಿದೆ. ಮಾನವ ಹಕ್ಕುಗಳ ದಿನಾಚರಣೆ ಕೇವಲ ಭಾರತ ದೇಶದಲ್ಲಿ ಸೀಮಿತವಲ್ಲ ಇಡೀ ಪ್ರಪಂಚಕ್ಕೆ ಸೀಮಿತವಾಗಿದ್ದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಂಗಮ ಸಂಸ್ಥೆಯ ಸಹ-ನಿರ್ದೇಶಕರಾದ ಸಿಸ್ಟರ್ ಸಿಂತಿಯಾ ಡಿಮೆಲ್ಲೊರವರು ಪ್ರಾಸ್ಥಾವಿಕವಾಗಿ ಮಾತನಾಡಿದರು. ಕಾರ್ಯಕ್ರಮಕ್ಕೆ ಬಂದಂತಹ ಸಂಘದ ಸದಸ್ಯರಿಗೆ ಸೆಲ್ಕೊ ಸೊಲಾರ್ ಕುರಿತು ಪ್ರಸನ್ನಕುಮಾರ ಹಾಗೂ ಶಿವಕುಮಾರ್‍ರವರು ಸ್ವ-ಉದ್ಯೋಗದ ಮಾಹಿತಿ ನೀಡಿದರು.  

ಕಾರ್ಯಕ್ರಮದಲ್ಲಿ ಸ್ಪೂರ್ತಿ ಮಹಿಳಾ ಸಂಘಗಳ ಒಕ್ಕೂಟದ ಅದ್ಯಕ್ಷೆ ರೇವತಿ ಮೇತ್ರಿ, ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರು, ಕಟ್ಟಡ ಕಾರ್ಮಿಕರು, ವಿಶೇಷ ಚೇತನರು, ಹಳ್ಳಿ ಅಭಿವೃದ್ಧಿ ಸಮಿತಿ ಸದಸ್ಯರು, ಸಿಸಿಎಪ್‍ಎಪ್ ಸದಸ್ಯರು ಹಾಗೂ ಮ.ಅ.ಅ ಗುಂಪುಗಳ ಸದಸ್ಯರು ಉಪಸ್ಥಿತರಿದ್ದರು. ವಿಜಯ ಬಂಟನೂರ ನಿರೂಪಿಸಿದರು, ಮಲಕಪ್ಪ ಎಸ್ ಹಲಗಿ  ಸ್ವಾಗತಿಸಿದರು. ಬಸವರಾಜ ಬಿಸನಾಳ ವಂದಿಸಿದರು. ಸಂವಿಧಾನ ಪ್ರಸ್ತಾವನೆ ಹಾಡಲಾಯಿತು.

RELATED ARTICLES

Most Popular

error: Content is protected !!
Join WhatsApp Group