Homeಸುದ್ದಿಗಳುನಾನು ಇರುವವರೆಗೂ ಟಿಪ್ಪು ಪೂಜೆ ನಡೆಯದು - ಶರಣು ಸಲಗರ

ನಾನು ಇರುವವರೆಗೂ ಟಿಪ್ಪು ಪೂಜೆ ನಡೆಯದು – ಶರಣು ಸಲಗರ

ಬೀದರ: ನಾನು ಇರುವವರೆಗೂ ಬಸವಕಲ್ಯಾಣದಲ್ಲಿ ಟಿಪ್ಪು ಸುಲ್ತಾನನ ಪೂಜೆ ನಡೆಯುವುದಿಲ್ಲ ಇದು ನನ್ನ ವಚನ ಎಂದು ಶಾಸಕ ಶರಣು ಸಲಗರ ಗುಡುಗಿದ್ದಾರೆ.

ಗುಳೆ ಹೋದ ಮತದಾರರನ್ನು ಸೆಳೆಯಲು ಮಹಾರಾಷ್ಟ್ರಕ್ಕೆ ತೆರಳಿದ್ದ ವೇಳೆ ಮಾತನಾಡಿದ ಅವರು, ಕಾಂಗ್ರೆಸ್ ಅಭ್ಯರ್ಥಿ ವಿಜಯ ಸಿಂಗ್ ಅವರನ್ನು ಉದ್ದೇಶಿಸಿ, ಮೇರೆ ಭಾಯಿ ವಿಜಯಸಿಂಗ್ ನೀನೇನಾದರೂ ಟಿಪ್ಪು ಸುಲ್ತಾನ್ ಜಯಂತಿ ಮಾಡಬೇಕಾದರೆ ಅದು ನಾನು ಮರಣ ಹೊಂದಿದ ನಂತರವೇ ಮಾಡಬೇಕು ಎಂದು ಸವಾಲು ಹಾಕಿದರು. 

ಬಸವಣ್ಣನವರ ಕರ್ಮಭೂಮಿ ಬಸವಕಲ್ಯಾಣದಲ್ಲಿ ಟಿಪ್ಪು ಸುಲ್ತಾನನ ಪೂಜಾ ನಡೆಯಲು ಸಾಧ್ಯವಿಲ್ಲ ಬಸವೇಶ್ವರ ಹಾಗು ಶಿವಾಜಿ ಜಯಂತಿ ಮಾತ್ರ ಮಾಡ್ತೇವೆ. ನಾನು ಜೀವಂತ ಇರುವವರೆಗೂ ಬಸವಕಲ್ಯಾಣದಲ್ಲಿ ಟಿಪ್ಪು ಪೂಜೆ ಮಾಡೋಕೆ ಆಗಲ್ಲಾ ಎಂದು ಸಲಗರ ಹೇಳಿದರು.


ವರದಿ: ನಂದಕುಮಾರ ಕರಂಜೆ, ಬೀದರ

RELATED ARTICLES

Most Popular

error: Content is protected !!
Join WhatsApp Group