ಎರಡು ಕವನಗಳು

Must Read

 ಸೂತ್ರದಾರ

ಕಂಡ ಕನಸುಗಳು
ಕರಗುವ ಮುನ್ನ
ಅಪ್ಪಿಕೋ ಪ್ರೀತಿಯ
ಒಲವ ದಾರಿಯ ನಡೆ
ನಿನ್ನ ಬದುಕು

ಬಾನಿನಂಗಳ ತುಂಬ
ಮಿನುಗುತಿವೆ ಚುಕ್ಕೆಗಳು
ಬೆಳದಿಂಗಳ ಬೆಳಗಿನಲಿ
ಧರೆಗಿಳಿದು ಬಂದ
ಚೆಲುವೆ ನೀನು

ಸಾವು ನೋವನು ಮೆಟ್ಟಿ
ಗಟ್ಟಿಗೊಂಡಿದೆ ಜೀವ
ನಿಜ ನೆಲೆಯ ಸ್ಪೂರ್ತಿ
ನೆಮ್ಮದಿಯ ಬಾಳು
ನಿನ್ನ ಒಲವು

ಹೋಗುವುದು ಬಲು ದೂರ
ನಡೆದು ಮರೆಯುವ ಭಾರ
ಬೆಸೆದು ಬಿಡು ಪ್ರೇಮ ದಾರ
ಸೋಲೋ ಗೆಲುವು ಕಷ್ಟ ನಷ್ಟ
ನಗುವ ಮೇಲೆ ಸೂತ್ರಧಾರ

  ಕಟ್ಟಿಹೆವು ಕೋಟೆ

ಎಲ್ಲದೆಲ್ಲವ ಬಿಟ್ಟು
ನಿನ್ನೆಡೆಗೆ ನಾ ಬಂದೆ
ಸ್ನೇಹ ಪ್ರೀತಿಯ ಬಾಳು
ನಿನ್ನ ಒಲವು

ಹಲವು ಕನಸುಗಳ
ಬಯಕೆ ಭರವಸೆ ದಾರಿ
ಕೂಡಿಹೆವು ನಾವು
ತಿರುಗುವ ಭೂಮಿ ಮೇಲೆ

ಕೊಡುವುದು ಪಡೆಯುವುದು
ಇಲ್ಲ ಸರಕಿನ ಮೂಟೆ
ಮನ ಭಾವ ಭದ್ರತೆ
ಕಟ್ಟಿಹೆವು ಕೋಟೆ

ಹುಣಿಮೆಯ ಬೆಳಗಿನಲಿ
ಸವಿ ಮಾತುಗಳ ಮೆಲಕು
ನೀನೊಮ್ಮೆ ಬಂದು
ನನ್ನ ಕೈ ಕುಲುಕು

ಡಾ.ಶಶಿಕಾಂತ ಪಟ್ಟಣ ರಾಮದುರ್ಗ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group