ಎರಡು ಕವನಗಳು

Must Read

 ಸೂತ್ರದಾರ

ಕಂಡ ಕನಸುಗಳು
ಕರಗುವ ಮುನ್ನ
ಅಪ್ಪಿಕೋ ಪ್ರೀತಿಯ
ಒಲವ ದಾರಿಯ ನಡೆ
ನಿನ್ನ ಬದುಕು

ಬಾನಿನಂಗಳ ತುಂಬ
ಮಿನುಗುತಿವೆ ಚುಕ್ಕೆಗಳು
ಬೆಳದಿಂಗಳ ಬೆಳಗಿನಲಿ
ಧರೆಗಿಳಿದು ಬಂದ
ಚೆಲುವೆ ನೀನು

ಸಾವು ನೋವನು ಮೆಟ್ಟಿ
ಗಟ್ಟಿಗೊಂಡಿದೆ ಜೀವ
ನಿಜ ನೆಲೆಯ ಸ್ಪೂರ್ತಿ
ನೆಮ್ಮದಿಯ ಬಾಳು
ನಿನ್ನ ಒಲವು

ಹೋಗುವುದು ಬಲು ದೂರ
ನಡೆದು ಮರೆಯುವ ಭಾರ
ಬೆಸೆದು ಬಿಡು ಪ್ರೇಮ ದಾರ
ಸೋಲೋ ಗೆಲುವು ಕಷ್ಟ ನಷ್ಟ
ನಗುವ ಮೇಲೆ ಸೂತ್ರಧಾರ

  ಕಟ್ಟಿಹೆವು ಕೋಟೆ

ಎಲ್ಲದೆಲ್ಲವ ಬಿಟ್ಟು
ನಿನ್ನೆಡೆಗೆ ನಾ ಬಂದೆ
ಸ್ನೇಹ ಪ್ರೀತಿಯ ಬಾಳು
ನಿನ್ನ ಒಲವು

ಹಲವು ಕನಸುಗಳ
ಬಯಕೆ ಭರವಸೆ ದಾರಿ
ಕೂಡಿಹೆವು ನಾವು
ತಿರುಗುವ ಭೂಮಿ ಮೇಲೆ

ಕೊಡುವುದು ಪಡೆಯುವುದು
ಇಲ್ಲ ಸರಕಿನ ಮೂಟೆ
ಮನ ಭಾವ ಭದ್ರತೆ
ಕಟ್ಟಿಹೆವು ಕೋಟೆ

ಹುಣಿಮೆಯ ಬೆಳಗಿನಲಿ
ಸವಿ ಮಾತುಗಳ ಮೆಲಕು
ನೀನೊಮ್ಮೆ ಬಂದು
ನನ್ನ ಕೈ ಕುಲುಕು

ಡಾ.ಶಶಿಕಾಂತ ಪಟ್ಟಣ ರಾಮದುರ್ಗ

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group