Homeಸುದ್ದಿಗಳುಬೀದರ್ ನಲ್ಲಿ ಕಂಪಿಸಿದ ಭೂಮಿ ; ಜನ ಭಯಭೀತ

ಬೀದರ್ ನಲ್ಲಿ ಕಂಪಿಸಿದ ಭೂಮಿ ; ಜನ ಭಯಭೀತ

ಬೀದರ – ಇಷ್ಟು ದಿವಸ ಕೊರೋನಾ ಭಯದಿಂದ ಜನರು ಜೀವನ ನಡೆಸಿದ್ದು ಈಗ ಕಲ್ಯಾಣ ಕರ್ನಾಟಕದಲ್ಲಿ ಭೂಮಿ ನಡುಗಿರುವ ಶಬ್ದ ದಿಂದ ಜನರು ಭಯಭೀತರಾಗಿ ಮನೆ ಬಿಟ್ಟು ಬೀದಿಗೆ ಬಂದ ಘಟನೆ ಬೀದರ್ ಜಿಲ್ಲೆಯ ಹುಮನಾಬಾದ್ ತಾಲೂಕಿನ ಗುರು ನಗರದಲ್ಲಿ ನಡೆದಿದೆ

ಹುಮನಾಬಾದ್ ಪಟ್ಟಣದ ಬೀದರ್ ರಸ್ತೆಯಲ್ಲಿರುವ ಗುರುನಗರ ಬಡಾವಣೆಯಲ್ಲಿ ಭೂಮಿ ಕಂಪನದ ಸದ್ದು ಕೇಳಿಬಂದ ಹಿನ್ನೆಲೆಯಲ್ಲಿ ಭಯದಿಂದ ನಿವಾಸಿಗಳು ಮನೆಯಿಂದ ಹೊರಗೆ ಓಡಿಬಂದರು. ಸರಿಯಾಗಿ 10 ಗಂಟೆ ಸುಮಾರಿಗೆ ಈ ಸದ್ದು ಬಂದಿದ್ದು, ಭಯಭೀತರಾಗಿ ಹೊರಗೆ ಓಡಿ ಬಂದಿದ್ದೇವೆ ಎಂದು ಬಡಾವಣೆ ನಿವಾಸಿಗಳೂ ಆದ ಪುರಸಭೆಯ ಮಾಜಿ ಉಪಾಧ್ಯಕ್ಷ ಮಲ್ಲಿಕಾರ್ಜುನ ಎಂ.ಸೀಗಿ ವಿವರಿಸಿದರು.

ಸುರೇಶ ಎಂ.ಸೀಗಿ, ರಮೇಶ ಸೀಗಿ, ಪುರಸಭೆ ಸದಸ್ಯ ವೀರೇಶ ಎಂ.ಸೀಗಿ ಮೊದಲಾದವರು ಮಾಧ್ಯದವರ ಎದುರು ಸಮಸ್ಯೆ ಹೇಳಿಕೊಂಡರು.

RELATED ARTICLES

Most Popular

error: Content is protected !!
Join WhatsApp Group