ಬೀದರ – ಗಣರಾಜ್ಯೋತ್ಸವ ಸಂದರ್ಭದಲ್ಲಿ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಅವರು ಡಾ. ಬಿ ಆರ್ ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ ಮಾಡಿದರೆನ್ನಲಾದ ಹಿನ್ನೆಲೆಯಲ್ಲಿ ತಹಸೀಲ್ದಾರ ಮೇಲೆ ದಲಿತಪರ ಸಂಘಟನೆಗಳ ಕಾರ್ಯಕರ್ತ ರಿಂದ ಹಲ್ಲೆ ಮಾಡಿದ ಘಟನೆ ಜರುಗಿದೆ.
ಬೀದರ್ ಜಿಲ್ಲೆಯ ಹುಮನಾಬಾದ ತಾಲ್ಲೂಕು ಪಟ್ಟಣದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿ ಹುಮನಾಬಾದ್ ತಹಶೀಲ್ದಾರ ಪ್ರದೀಪಕುಮಾರ್ ಮಠಪತಿ ಅವರ ಮೇಲೆ ಬಿಎಸ್ ಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ಅಂಕುಶ ಗೊಖಲೆ ಸೇರಿದಂತೆ ಹಲವರು ಹಲ್ಲೆ ಮಾಡಿದ್ದಾರೆನ್ನಲಾಗಿದೆ
ತಹಶೀಲ್ದಾರ ಕಚೇರಿಯಲ್ಲಿನ ಪೀಠೋಪಕರಣ ಧ್ವಂಸಗೊಳಿಸಿ ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು ಮನವಿ ಪತ್ರ ಪಡೆಯಲು ತಹಸೀಲ್ದಾರ ಬಂದಿಲ್ಲ ಎಂದು ನೆಪವೊಡ್ಡಿ ಹಲ್ಲೆ ಕೂಡ ಮಾಡಿದರು.ಅಂಬೇಡ್ಕರ್ ವೃತದಲ್ಲೆ ಮನವಿ ಪತ್ರ ಪಡೆಯುವಂತೆ ಪ್ರತಿಭಟನಾಕಾರರು ಪಟ್ಟು ಹಿಡಿದರು, ಸ್ಥಳಕ್ಕೆ ತಹಶೀಲ್ದಾರ ರು ಬರದೆ ಇರುವುದಕ್ಕೆ ಆಕ್ರೋಶಗೊಂಡ ಕಿಡಿಗೇಡಿಗಳು ತಹಶೀಲ್ದಾರ ಕಚೇರಿಗೆ ಪೀಠೋಪಕರಣ ಧ್ವಂಸ ಮಾಡಿದ್ದಲ್ಲದೆ ಅವರ ಮೇಲೆ ಹಲ್ಲೆ ಕೂಡ ಮಾಡಿದರು. ಘಟನೆಯ ವಿವರ ಪಡೆದ ಸ್ಥಳೀಯ ಶಾಸಕ ರಾಜಶೇಖರ್ ಪಾಟೀಲ್ ಭೇಟಿ ನೀಡಿದ್ದು ಘಟನೆಯ ಬಗ್ಗೆ ಯಾವ ರೀತಿಯ ಕ್ರಮಕ್ಕೆ ಆದೇಶಿಸುತ್ತಾರೆ ಕಾದು ನೋಡಬೇಕು.
ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ