ಸಿಂದಗಿ: ದಿ.ಎಂ ಸಿ ಮನಗೂಳಿ ಯವರ ನಿಧನದಿಂದ ತೆರವಾದ ಸ್ಥಾನಕ್ಕೆ ಈ ಉಪಚುನಾವಣೆ ಒದಗಿದ್ದು ಅವರ ಅಧಿಕಾರವನ್ನು ಪೂರ್ಣಗೊಳಿಸುವ ದೃಷ್ಟಿಯಿಂದ ಅವರ ಆಶಯಂತೆ ಅವರ ಮಗನನ್ನು ಕಾಂಗ್ರೆಸ್ ಪಕ್ಷ ಕ್ಕೆ ಸೇರಿಸಿಕೊಂಡು ಸಂಪ್ರದಾಯದಂತೆ ಟಿಕೇಟ್ ನೀಡಿದು ಮನಗೂಳಿ ಯವರು ಗುತ್ತಿಬಸವಣ್ಣ ಯೋಜನೆಗಳನ್ನು ಚಾಂದಕವಟೆ ಜಮೀನಗಳಿಗೆ ನೀರು ಒದಗಿಸಿಕೊಟ್ಟಿದ್ದಾರೆ ನಾನು ನೀರಾವರಿ ಸಚಿವನಾಗಿ ನೀಡಿದ ಐವತ್ತು ಸಾವಿರ ಕೋಟಿ ರೂ. ಅನುದಾನದಿಂದ ವಿಜಯಪುರ ಜಿಲ್ಲೆಯು ಸಂಪೂರ್ಣ ನೀರಾವರಿಯಾಗಿದೆ ಎಂದು ಶಾಸಕ ಎಂ ಬಿ ಪಾಟೀಲ್ ಹೇಳಿದರು.
ಕ್ಷೇತ್ರದ ರಾಂಪುರ ಪಿಎ, ಗಣಿಹಾರ, ಚಾಂದಕವಠೆ ಗ್ರಾಮಗಳಲ್ಲಿ ಮತಯಾಚಿಸಿ ಮಾತನಾಡಿ, ವಿದೇಶದಲ್ಲಿರುವ ಕಪ್ಪು ಹಣ ಸ್ವದೇಶಕ್ಕೆ ತಂದು ಎಲ್ಲರ ಖಾತೆಗೆ ಹದಿನೈದು ಲಕ್ಷ ಹಣವನ್ನು ಹಾಕುವದಾಗಿ ಹೇಳಿದ ಮೋದಿಯವರು ಮತವನ್ನು ಪಡೆದು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಅಂದಾನಿ, ಅಂಬಾನಿ ಇಬ್ಬರನ್ನೆ ಶ್ರೀಮಂತರಾಗಿ ಮಾಡಿದ್ದಾರೆ. ಆದರೆ ಇಂದಿರಾಗಾಂಧಿಯವರು ಗರೀಬಿ ಹಟಾವೋದಂಥ ಕಾರ್ಯಕ್ರಮಗಳನ್ನು ಜಾರಿಗೆ ತರುವ ಮೂಲಕ ಮತ್ತು ವಿಧವಾ ವೇತನ, ವೃದ್ಧಾಪ್ಯ ವೇತನ ಯೋಜನೆಗಳನ್ನು ಜಾರಿಗೆ ತಂದ ಬಡವರ ಪಕ್ಷ ಕಾಂಗ್ರೆಸ್ ಮತ್ತು ವಿಶ್ವದಲ್ಲಿ ಭಾರತವು ಬಡತನ ಮತ್ತು ಹಸಿವಿನ ದೇಶದಲ್ಲಿ 101 ನೇ ರಾಷ್ಟ ಭಾರತವಾಗಿದೆ ರೈತರು ಒಂದು ವರ್ಷದಿಂದ ದೆಹಲಿಯ ಹತ್ತಿರ ಉಪವಾಸ ಮುಷ್ಕರ ಮಾಡುತ್ತಿದ್ದಾರೆ ಅವರ ಜೊತೆಯಲ್ಲಿ ಸೌಜನ್ಯಕಾದರೂ ರೈತ ಮುಖಂಡರನ್ನು ಕರೆದು ಮಾತನಾಡುವ ಸೌಜನ್ಯತೆ ಮೋದಿಯವರಿಗೆ ಇಲ್ಲ. ಇಂದಿರಾಗಾಂಧಿ ಯವರು ಬ್ಯಾಂಕುಗಳನ್ನು ರಾಷ್ಟ್ರೀಕರಣ ಮಾಡಿ ಪ್ರತಿಯೊಬ್ಬರಿಗೂ ಸಾಲ ಸೌಲಭ್ಯ ಗಳನ್ನು ಸಿಗುವಂತೆ ಮಾಡಿದ್ದು ಕಾಂಗ್ರೆಸ್ ಸರ್ಕಾರ. ನಾಳೆ 19 ಕ್ಕೆ ರಾಜ್ಯದ ಮಾಜಿ ಮುಖ್ಯಮಂತ್ರಿ ಗಳಾದ ಸಿದ್ದರಾಮಯ್ಯರನ್ನು ಚಾಂದಕವಟೆ ಗ್ರಾಮಕ್ಕೆ ಅಶೋಕ ಮನಗೂಳಿ ಯವರ ಪರವಾಗಿ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಲು ಕರೆದು ಕೊಂಡು ಬರುತ್ತೇನೆ ಎಂದು ಹೇಳಿದರು
ಮಾಜಿ ಶಾಸಕ ಶರಣಪ್ಪ ಸುಣಗಾರ ಮಾತನಾಡಿ, ಈ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಹಾಗೂ ಜೆಡಿಎಸ್ ನೀವು ಮತದಾನ ಮಾಡುವಾಗ ಅಭ್ಯರ್ಥಿಯ ಬಗ್ಗೆ ತಿಳಿದುಕೊಂಡು ಮತದಾನವನ್ನು ಮಾಡಬೇಕು ಮೋದಿ ಮೋಡಿ ತಂತ್ರಕ್ಕೆ ಬಲಿಯಾಗಿ ರೈತರ ರಸಗೊಬ್ಬರ ಸಾಮಾನ್ಯ ಜನರ ದಿನವಸ್ತು ಬೆಲೆ ನಾಲ್ಕು ಪಟ್ಟು ಏರಿಸಿದ್ದಾರೆ. ಬಿಜೆಪಿ ಪಕ್ಷವು ಹುಟ್ಟಿದು ಸ್ವಾತಂತ್ರ್ಯ ಪಡೆಯಲಿಕ್ಕೆ ಅಲ್ಲ ಜಾತಿಮತ ವಿಂಗಡಿಸುವ ಸಲುವಾಗಿ ಹುಟ್ಟಿದ ಪಕ್ಷ ಆದರೆ ಕಾಂಗ್ರೆಸ್ ಪಕ್ಷವು ಬ್ರಿಟಿಷ್ ಸರ್ಕಾರವನ್ನು ಓಡಿಸಿ ಭಾರತವನ್ನು ಸ್ವಾತಂತ್ರ್ಯ ಪಡೆಯುವ ಸಲುವಾಗಿ ಹುಟ್ಟಿದೆ ಎಂದು ಹೇಳಿದ ಅವರು, ರಾಜ್ಯ ಸರ್ಕಾರದ ಯಡ್ಡಿಯೂರಪ್ಪನವರ ಅಧಿಕಾರ ಅವಧಿಯಲ್ಲಿ ಹಾಗೂ ಸಿದ್ದರಾಮಯ್ಯನವರ ಅವಧಿಯಲ್ಲಿ ಇವರ ಸಾಧನೆಗಳನ್ನು ನೋಡಿ ಜನಪರ ಯೋಜನೆಗಳನ್ನು ಮಾಡಿದಂಥ ಪಕ್ಷ ಕಾಂಗ್ರೆಸ್ ಪಕ್ಷ ಅದಕ್ಕೆ ತಮ್ಮ ಮತವನ್ನು ನೀಡಬೇಕು ಅಂದರು ಬಿಜೆಪಿಯವರು ಅಧಿಕಾರ ಸ್ವೀಕಾರ ಮಾಡುವ ಸಂದರ್ಭಗಳಲ್ಲಿ ಹಸಿರು ಶಾಲು ಹಾಕಿಕೊಂಡು ರೈತರ ಪರ ಸರ್ಕಾರ ಎಂದು ಹೇಳುವ ಇವರು ರೈತರಿಗೆ ಕೊಟ್ಟ ಕಾಣಿಕೆಯೇನು ಮತ್ತು ಬೈರತಿ ಬಸವರಾಜ ಎರಡು ಬಸ್ಸು ಜನರನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿ ಹಣವನ್ನು ಕೊಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.
ಚಾಂದಕವಟೆ ಗೌಡರಾದ ಬಸನಗೌಡ ಪಾಟೀಲ್ ಇವರ ಮಾತನಾಡಿ, ಬಿಜೆಪಿ ಸೋಲಿಸಿ ಕಾಂಗ್ರೆಸ್ ಗೆಲಿಸಬೇಕೆಂದು ಹೇಳುತ್ತಾ, ನಾನು ಯಾವುದೇ ಜಾತಿಗೆ ಸೀಮಿತ ವಲ್ಲ ನಮ್ಮೂರಿನಲ್ಲಿ ಎಲ್ಲಾ ಜಾತಿಯವರ ಒಡನಾಡಿಯಾಗಿ ನಮ್ಮ ತಂದೆವರ ಕಾಲದಿಂದ ಇಲ್ಲಿಯವರೆಗೆ ನಾವು ನಡೆದುಕೊಂಡು ಬಂದಿದ್ದೇವೆ. ಕಾರಣ 30 ನೇಯ ತಾರೀಖಿನ ದಿವಸ ಅಶೋಕ ಮನಗೂಳಿ ಯವರ ಹಸ್ತದ ಗುರ್ತಿಗೆ ಮತ ನೀಡಬೇಕು ಎಂದು ವಿನಂತಿಸಿದರು.
ಕೆಪಿಸಿಸಿ ವಕ್ತಾರ ಎಸ ಎಂ ಪಾಟೀಲ್ ಗಣಿಹಾರ, ಶರಣಗೌಡ ಪಾಟೀಲ್, ಸಿದ್ದನಗೌಡ ದೇವರಡ್ಡಿ, ಸುರೇಶ ಪೂಜಾರಿ, ಶರಣಪ್ಪ ವಾರದ, ಸುಜಾತಾ ಕಳ್ಳಿಮನಿ, ಲಲಿತಾ ದೊಡಮನಿ, ಅಶೋಕ ವಾರದ, ಯಡ್ಡಗಿ ಪಾಟೀಲ್, ವೈಜನಾಥ ಕಪೂರಮಠ, ಚನ್ನು ವಾರದ, ಗುರಪ್ಪ ಯಂಕಂಚಿ, ಸುಜಾತಾ ಸಿಂಧೆ, ನೂರಹ್ಮದ ಅತ್ತಾರ, ಕ್ಷೇತ್ರದ ವಕ್ತಾರ ಮಲ್ಲಿಕಾರ್ಜುನ ಸಾವಳಸಂಗ ಸೇರಿದಂತೆ ಅನೇಕರಿ ಭಾಗಿಯಾಗಿದ್ದರು.
ವರದಿ: ಪಂಡಿತ್ ಯಂಪೂರೆ, ಸಿಂದಗಿ.