spot_img
spot_img

ಅಶೋಕ ಮನಗೂಳಿ ಪರ ಪತ್ನಿ ಮತಬೇಟೆ

Must Read

- Advertisement -

ಸಿಂದಗಿ: ಕಳೆದ ಸಮ್ಮಿಶ್ರ ಸರಕಾರದಲ್ಲಿ ನಮ್ಮ ಪತಿರಾಯ ದಿ.ಮಾಜಿ ಸಚಿವ ಎಂ.ಸಿ.ಮನಗೂಳಿ ಅವರು ಯಾವುದೇ ಜಾತಿ ಭೇದ ತೋರದೇ ಎಲ್ಲರು ನಮ್ಮವರು ಎನ್ನುವ ರೀತಿಯಲ್ಲಿ ಅಡಳಿತ ನಡೆಸಿ ಸರ್ವರಿಗೂ ನ್ಯಾಯ ಒದಗಿಸಿಕೊಟ್ಟಿದ್ದಾರೆ ಎನ್ನುವುದಕ್ಕೆ ಸುಲ್ಪಿ ಅವರನ್ನು ನಮ್ಮ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಿಕೊಂಡಿದ್ದು ತಾಜಾ ಉದಾಹರಣೆ ಅದೇ ಹಾದಿಯಲ್ಲಿ ನಮ್ಮ ಮಗ ಅಶೋಕ ಮನಗೂಳಿ ಅವರು ಹೊರಟಿದ್ದು ಅವನಿಗೆ ನಿಮ್ಮ ಅತ್ಯಮೂಲ್ಯವಾದ ಮತ ನೀಡಿ ಆಶೀರ್ವದಿಸಿ ಎಂದು ದಿ. ಎಂ.ಸಿ.ಮನಗೂಳಿ ಅವರ ಧರ್ಮ ಪತ್ನಿ ಸಿದ್ದಮ್ಮಗೌಡತಿ ಮನಗೂಳಿ ಮನವಿ ಮಾಡಿದರು.

ಪಟ್ಟಣದ 16ನೇ ವಾರ್ಡಿನಲ್ಲಿ ಮಾತಂಗಿ ಸಮುದಾಯದ ಹೆಣ್ಣು ಮಕ್ಕಳ ಮನೆ ಮನೆಗೆ ಕುಟುಂಬ ಸಮೇತ ತೆರಳಿ ಮತಯಾಚಿಸಿ ಮಾತನಾಡಿ, ಹಿಂದೆ ಗ್ರಾಮ ಸೇವಕರಾಗಿದ್ದಾಗೂ ಕೆಳ ವರ್ಗದ ಸಮುದಾಯದವರಿಗಾಗಿ ಸರಕಾರದಿಂದ ಇಂಜಿನ್‍ಗಳನ್ನು ವಿತರಣೆ ಮಾಡಿದ್ದಾರೆ. ಶಿಕ್ಷಣ ಸಂಸ್ಥೆಯಿಂದ ಹಲವಾರು ಜನರಿಗೆ ಶಿಕ್ಷಣ ನೀಡುವದರ ಜೊತೆಗೆ ನೌಕರಿಗಳನ್ನು ನೀಡಿದ್ದಾರೆ ಅವರು ದಿವಂಗತರಾದ ಬಳಿಕ ಅವರ ಸ್ಥಾನವನ್ನು ಅಶೋಕ  ಮುಂದುವರೆಸಿಕೊಂಡು ಹೊರಟಿದ್ದಾನೆ. ಕಾರಣ ತಮ್ಮೆಲ್ಲರ ಆಶೀರ್ವಾದದಿಂದ ಎಮ್ಮೆಲ್ಲೆ ಮಾಡಿ ವಿಧಾನ ಸೌಧಕ್ಕೆ ಕಳುಹಿಸಿ ಇನ್ನೂ ಜನ ಸೇವೆ ಮಾಡಲು ಅನುಕೂಲವಾಗುತ್ತದೆ ಎಂದು ಬೇಡಿಕೊಂಡರು.

ಈ ಸಂದರ್ಭದಲ್ಲಿ ಅಶೋಕ ಮನಗೂಳಿ ಅವರ ಧರ್ಮ ಪತ್ನಿ ನಾಗರತ್ನಾ ಮನಗೂಳಿ, ಡಾ. ಸೌಮ್ಯ ಮನಗೂಳಿ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಇದ್ದರು.

- Advertisement -
- Advertisement -

Latest News

ಇದು ಇಂದಿನ ಹಾಸ್ಟೆಲ್ ಹುಡುಗ ಹುಡುಗಿಯರಿಗೆ ನಾವೆಲ್ಲ ಹೇಳಬೇಕಾದ ಖಾಸ್ ಬಾತ್

ಸರ್... ಓ ಸರ್...ಕಾಂಬಳೆ ಸರ್  ... ಸರ್ ನಮಸ್ಕಾರ್ರಿ ಆರಾಮ ಅದೀರಿ?? ನಾ ಯಾರ್ ಹೇಳ್ರಿ ಅನ್ನುತ್ತಿದ್ದಂತೆಯೇ ನಿವೃತ್ತಿ ಹೊಂದಿ ಐದಾರು ವರ್ಷ ಆಗಿದ್ದ ಬಿಸಿಎಮ್...
- Advertisement -

More Articles Like This

- Advertisement -
close
error: Content is protected !!
Join WhatsApp Group