- Advertisement -
ಬೀದರ್: ತಹಶೀಲ್ದಾರ ಅವರ ಮೇಲೆ ಮಾರಣಾಂತಿಕ ಹಲ್ಲೆಗೈದವರ ಗಡಿಪಾರಿಗೆ ಆಗ್ರಹಿಸಿ, ಕಲ್ಯಾಣ ಕರ್ನಾಟಕ ಸರ್ವ ಸಮುದಾಯಗಳ ಒಕ್ಕೂಟದಿಂದ ಜಿಲ್ಲೆಯ ಹುಮನಾಬಾದ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ಉಪತಹಶೀಲ್ದಾರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಅಖಿಲ ಭಾರತ ವೀರಶೈವ ಮಹಾಸಭಾ ತಾಲ್ಲೂಕು ಅಧ್ಯಕ್ಷ ಬಾಬುರಾವ ಪೋಚಂಪಳ್ಳಿ ದುಷ್ಕೃತ್ಯ ಗೈದವರನ್ನು ಗೂಂಡಾ ಕಾಯ್ದೆ ಅಡಿ ಗಡಿಪಾರು ಮಾಡುವುದರ ಜೊತೆಗೆ ಹಲ್ಲೆಗೈದ ವ್ಯಕ್ತಿಗಳು ತಹಶೀಲ್ದಾರ ಡಾ.ಪ್ರದೀಪಕುಮಾರ ಹಿರೇಮಠ ಸೇರಿ 25 ಜನರ ವಿರುದ್ಧ ದಾಖಲಿಸಿದ ಅಟ್ರಾಸಿಟಿ ಕೇಸ್ 3 ದಿನಗಳೊಳಗೆ ವಾಪಸ್ ಪಡೆಯದಿದ್ದರೇ ರಾಜ್ಯಾದ್ಯಂತ ಉಗ್ರ ಸ್ವರೂಪದ ಪ್ರತಿಭಟನೆ ನಡೆಸಲಾಗುವುದು ಎಂದು ಡಾ.ಬಸವರಾಜ ಸ್ವಾಮಿ ಎಚ್ಚರಿಸಿದರು.
- Advertisement -
ಮಲ್ಲಿಕಾರ್ಜುನ ಮಾಶೆಟ್ಟಿ, ಮಹೇಶ ಅಗಡಿ, ಮಲ್ಲಿಕಾರ್ಜುನ ಸೀಗಿ, ಗುರುಲಿಂಗ ಭಾವಿ, ಸಿದ್ದು ಚಕಪಳ್ಳಿ, ಸುನೀಲ ಡಿ.ಎನ್.ಪತ್ರಿ, ದತ್ತು ಪರೀಟ್ ಮತ್ತಿತರರಿದ್ದರು.
ವರದಿ: ನಂದಕುಮಾರ ಕರಂಜೆ, ಬೀದರ