Homeಸುದ್ದಿಗಳುಸಂವಿಧಾನ ಜಾಗೃತಿ ಜಾಥಾ ಅಂಗವಾಗಿ ಯುವ ಸಂಸತ್ ಅಧಿವೇಶನ

ಸಂವಿಧಾನ ಜಾಗೃತಿ ಜಾಥಾ ಅಂಗವಾಗಿ ಯುವ ಸಂಸತ್ ಅಧಿವೇಶನ

ಸಂವಿಧಾನ ಜಾಗೃತಿ ಜಾಥ -2024ರ ಅಂಗವಾಗಿ ಗುರುವಾರ  ಡಾ ಬಿ ಆರ್ ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆ ನೊಣವಿನಕೆರೆ (ಕೊನೆಹಳ್ಳಿ) ತಿಪಟೂರು ತಾಲ್ಲೂಕು ತುಮಕೂರು ಜಿಲ್ಲೆ ಇಲ್ಲಿ, ನಮ್ಮ ಸಂವಿಧಾನ ನಮ್ಮ ಹೆಮ್ಮೆಯ ಅಂಗವಾಗಿ ಯುವ ಸಂಸತ್ ಅಧಿವೇಶನ ಕಾರ್ಯಕ್ರಮ ನಡೆಯಿತು.

ನಿಜಗುಣಯ್ಯ ಹೆಚ್ ಎಸ್ .ಸಮಾಜ ವಿಜ್ಞಾನ ಶಿಕ್ಷಕರು ಹಾಗೂ ಸಂಪನ್ಮೂಲ ವ್ಯಕ್ತಿಗಳ  ಮಾರ್ಗದರ್ಶನದಲ್ಲಿ  ವಿದ್ಯಾರ್ಥಿಗಳೇ ಪಾಲ್ಗೊಂಡು ಅಧಿವೇಶನ ಸಂದರ್ಭದಲ್ಲಿ ನಡೆಯುವ ಚರ್ಚೆಯ ರೀತಿ ಎಲ್ಲಾ ಶಾಲಾ ಸಂಸತ್ ಸದಸ್ಯರು ಪರ ಹಾಗೂ ವಿರೋಧ ರೀತಿಯಲ್ಲಿ ಉತ್ತಮದಾಯಕವಾದ ಚರ್ಚೆ ಅತ್ಯಂತ ಯಶಸ್ವಿಯಾಗಿ ಕಾರ್ಯಕ್ರಮ  ನಡೆಸಲಾಯಿತು.

ಈ ಸಂದರ್ಭದಲ್ಲಿ ಶಾಲೆಯ  ಪ್ರಾಂಶುಪಾಲರು ಎಲ್ಲಾ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿದರು.

RELATED ARTICLES

Most Popular

error: Content is protected !!
Join WhatsApp Group