Homeಸುದ್ದಿಗಳು2024- 25ನೇ ಸಾಲಿನ ಬಸವ ಪುರಸ್ಕಾರ ಡಾ ಅನ್ನಪೂರ್ಣ ಹಿರೇಮಠ ಇವರಿಗೆ

2024- 25ನೇ ಸಾಲಿನ ಬಸವ ಪುರಸ್ಕಾರ ಡಾ ಅನ್ನಪೂರ್ಣ ಹಿರೇಮಠ ಇವರಿಗೆ

ಕಲಬುರ್ಗಿ ತಾಲೂಕಿನ ಪಾಳಗ್ರಾಮದ ಶ್ರೀ ಸುಭಾಷ್ ಚಂದ್ರ ಪಾಟೀಲ್ ಜನಕಲ್ಯಾಣ ಟ್ರಸ್ಟ್ ರಿಜಿಸ್ಟರ್ ವತಿಯಿಂದ ಸಾಹಿತ್ಯ ಕೃಷಿ ಸಾಧಕರಿಗೆ ಆರನೇ ವರ್ಷದ ರಾಜ್ಯಮಟ್ಟದ ಬಸವ ಪುರಸ್ಕಾರ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದ್ದು ಈ ವರ್ಷ 2024 25 ನೇ ಸಾಲಿನ ಪುಸ್ತಕ ಪುರಸ್ಕಾರ ಡಾ. ಶ್ರೀಮತಿ ಅನ್ನಪೂರ್ಣ ಹಿರೇಮಠ ಅವರಿಗೆ ದೊರೆತಿದೆ

ಡಾ. ಅನ್ನಪೂರ್ಣ ಅವರ ಗಜಲ್ ಸಂಕಲನ ‘ಮೌನ ವೀಣೆ ನುಡಿದಾಗ’ ಕೃತಿಯನ್ನು ಆಯ್ಕೆ ಮಾಡಲಾಗಿದೆ ಎಂದು ಟ್ರಸ್ಟ್ ತಿಳಿಸಿದೆ.

ದಿನಾಂಕ 16 ಜೂನ್ 2024ರ ಮಧ್ಯಾಹ್ನ ೧ ೩೦ ಕ್ಕೆ ಕಲಬುರಗಿ ನಗರದ ಲಿಂಗೈಕ್ಯ ಬಸವರಾಜಪ್ಪ ಅಪ್ಪ ಸಭಾಭವನದಲ್ಲಿ ಶರಣ ಸಾಹಿತ್ಯ ಹಾಗೂ ಸಾಂಸ್ಕೃತಿಕ ಸಮ್ಮೇಳನ ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಬಸವ ಪುರಸ್ಕಾರ ಪ್ರಧಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. ಈ ಸಮಾರಂಭದಲ್ಲಿ ಡಾ. ಅನ್ನಪೂರ್ಣಾ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಎಂದು ಟ್ರಸ್ಟ್ ಅಧ್ಯಕ್ಷ ಶರಣಗೌಡ ಪಾಟೀಲ ಪಾಳಾ ತಿಳಿಸಿದ್ದಾರೆ.

RELATED ARTICLES

Most Popular

error: Content is protected !!
Join WhatsApp Group