ಕವನ : ಏಳಿ ಎದ್ದು ಬಿಡಿ

Must Read

ಏಳಿ, ಎದ್ದು ಬಿಡಿ

ಏಳಿ, ಎದ್ದುಬಿಡಿ
ತಡಮಾಡದೆ ನಡೆದು ಬಿಡಿ
ಸಾಧನೆಯ ಶಿಖರ ಏರಲು
ಕನಸು ನನಸಾಗಿಸಲು.

ಗೀಳಿನ ಬಾಳೇಕೆ
ಹಪಹಪಸಿ ಕೊರಗೇಕೆ
ನಾಳೆಯ ನಿರೀಕ್ಷೆಯಲಿ
ದಾಳ ಹೂಡುವ ಬಯಕೆಯಲಿ.

ತಾಳ ಮೇಳ ಸೇರುವಂತೆ
ಬಿಸಿ ಉಸಿರು ಕಟ್ಟುವಂತೆ
ಓರೆ ಕೋರೆ ಸರಿಪಡಿಸುತ
ಬಿರುಕಿಗೆ ಗಾರೆ ತುಂಬುತ.

ರಣ ಕಹಳೆ ಮೊಳಗಿಸಿ
ಕರಣ ಹರಿಸಿ
ಚಾರಣದ ಸ್ಥಿತಿಯಲಿ
ಪರಿಶ್ರಮದ ಸ್ತುತಿಯಲಿ.

ಆವಕಾಶದಲಿ ತೂರಿಬಿಡು
ಹುಸಿ ನಿದ್ರೆ ಸರಿಸಿಬಿಡು
ಘಾಸಿ ತರುವವರ ಮುಂದೆ
ತಾರೆ ಬೆಳಕು ಬೀರುವಂತೆ.

ಕಡಿದಾದ ದಾರಿ
ಮೊನಚು ತೋರಿ
ಜಾಗೃತಿಯ ಕಹಳೆ ಊದಿ
ಸುಕೃತಿಯ ಸರದಿ.

ಕಾಲದ ಕನ್ನಡಿ
ಭರವಸೆಯ ಮುನ್ನುಡಿ
ಗತಿಶೀಲ ಹಿಡಿ
ನಂದಿಸಿ ಸ್ವಾರ್ಥದ ಕಿಡಿ.

ಮುಂದೆ ಮುಂದೆ ನಡೆ
ಭಾವುಕತೆಯ ಬಿಡೆ
ಕಾಸಿದ ಕಬ್ಬಿಣದಂತೆ
ಎಡೆ ಬಿಡದೆ ಸಾಧಿಸುವ ಛಲದಂತೆ.

ಸದ್ದಿಲ್ಲದೆ ಸಾಧಿಸು
ಶುದ್ಧಿಯಲಿ ಕ್ರಮವಹಿಸು
ಬುದ್ಧಿಯ ಹಿಡಿತದಿ
ಅತ್ಮ ಬಲದ ವರದಿ.

ರೇಷ್ಮಾ ಕಂದಕೂರ, ಶಿಕ್ಷಕಿ
ಸಿಂಧನೂರು

1 COMMENT

  1. ಖುಷಿ ಆಯಿತು ಮೇಡಂ.
    ಬಹಳ ಚೆನ್ನಾಗಿದೆ.

Comments are closed.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group