ಕವನ: ನಿರಾಶ್ರಿತರಿಗೆ ಕೈ ಜೋಡಿಸೋಣ..

Must Read

*ನಿರಾಶ್ರಿತರಿಗೆ ಕೈ ಜೋಡಿಸೋಣ..*

ಕೊರಗಬೇಡ,ಕರಗಬೇಡ
ದೇವರ ದೂಷಿಸಲೂ ಬೇಡ
ಪ್ರವಾಹ, ಭೂಕಂಪ, ರೋಗ-ರುಜಿನಗಳು
ನೆಂಟರಂತೆ,ಬಯಸದಿದ್ದರೂ ಬಂದೇ ಬರುವವು….

ಅಂದು ನಮ್ಮ ಅಜ್ಜ-ಅಜ್ಜಿಯರ ದಿನಗಳಲಿ
ರಾಕ್ಷಸನಾಗಿ ಕಾಡಿತ್ತು ಪ್ಲೇಗ್, ಸಿಡುಬು, ಕಾಲರಾ,
ನಮ್ಮಷ್ಟು ವಿಧ್ಯೆ ಕಲಿಯದಿದ್ದರೂ,ಬುದ್ದಿವಂತರು
ಊರ ತ್ಯಜಿಸಿ,ಹೊಲ-ಗದ್ದೆಗಳಲಿ ಗುಡಿಸಲು ಕಟ್ಟಿ,
ಸಾಮಾಜಿಕ ಅಂತರ ರೂಪಿಸಿ,ಜೀವ ಕಾಪಾಡಿಕೊಳ್ಳುತ್ತಿದ್ದರು ಅಂದಿನ ಜನ…..

ಕೃಷಿ ಯ ಸ್ವರ್ಗ ನೈಲ್ ನದಿಯ ಪ್ರವಾಹಕೆ
ಹರಪ್ಪ-ಮೊಹೆಂಜೊದಾರೊ ಸ್ಮಶಾನವಾದವು,
ಪುರಾತನ ನಾಗರೀಕತೆ ಮಣ್ಣುಪಾಲಾಗಿತ್ತು,
ಆದರೂ ಮಾನವ ಸಮಾಜ ಬದುಕುಳಿಯಲಿಲ್ಲವೇ !!!
ಚಂದ್ರನ ಮೇಲೇರಲಿಲ್ಲವೇ ?ಮಂಗಳನ ಮುಟ್ಟಲಿಲ್ಲವೇ ?

ವೈರಸ್ ರೋಗದ ಬಗ್ಗೆ ಚಿಂತೆ ಬೇಡ,
ಸಾಮಾಜಿಕ ಅಂತರ ಕಾಪಾಡೋಣ ,
ನಾಮಕರಣ,ವಿವಾಹ,ಗೃಹಪ್ರವೇಶಗಳ ಹೆಸರಲಿ
ಶ್ರೀಮಂತಿಕೆಯ ,ಆಡಂಬರದ ಪ್ರದರ್ಶನ ಬೇಡ !!
ಸರಳವಾಗಿ ಮಾಡೋಣ ; ಸುಖವಾಗಿ ಬದುಕೋಣ !!!!!

ಪ್ರವಾಹ,ಭೂಕಂಪಗಳಾದಾಗ ಸೆಲ್ಫಿ ಹುಚ್ಚು ತ್ಯಜಿಸೋಣ,
ಜಾತಿ-ಮತ- ಧರ್ಮಗಳ ತ್ಯಜಿಸೋಣ ,
ನೊಂದವರ ಕಾಪಾಡಲು ಅಹರ್ನಶಿ ಶ್ರಮಿಸೋಣ..
ನಿರಾಶ್ರತರಿಗೆ ಬದುಕು ಕಟ್ಟಲು ಕೈಜೋಡಿಸೋಣ..

ಪ್ರವಾಹ ಪೀಡಿತ ಪ್ರದೇಶಗಳ ಗುರ್ತಿಸೋಣ ,
ನೊಂದ ಜನರ ಕಾಪಾಡಲು ಅಧಿಕಾರಸ್ಥರ ಒತ್ತಾಯಿಸೋಣ,
ತಗ್ಗಿನ ಜನರಿಗೆ ಶಾಶ್ವತ ಸೌಲಭ್ಯ ಕಲ್ಪಿಸಲು ಸರ್ಕಾರಕೆ ಒತ್ತಡ ಹೇರೋಣ, ನಿರಾಶ್ರಿತರ ಕಾಪಾಡಲು ಎಲ್ಲರೂ ಕೈಜೋಡಿಸೋಣ…..

ಡಾ.ಭೇರ್ಯ ರಾಮಕುಮಾರ್
ಸಾಹಿತಿಗಳು,ಪತ್ರಕರ್ತರು
ಮೊ:94496 80583
63631 72368

- Advertisement -
- Advertisement -

Latest News

ಪುಸ್ತಕ ಪರಿಚಯ

ಪುಸ್ತಕದ ಹೆಸರು :- "ಬಸವ ಜನ್ಮಸ್ಥಳ ಬಸವನಬಾಗೇವಾಡಿ ಕ್ಷೇತ್ರ ಚರಿತ್ರೆ"ಲೇಖಕರು :- ಮುರುಗೇಶ ಸಂಗಮ (೯೪೪೯೪೩೭೬೦೪) ಬೆಲೆ :- ೧೧೦ನಮ್ಮ ಜ್ಞಾನ ವಿಸ್ತರವಾಗಬೇಕಾದರೆ ಪುಸ್ತಕ ಓದುವ ಹವ್ಯಾಸ...
- Advertisement -

More Articles Like This

- Advertisement -
close
error: Content is protected !!
Join WhatsApp Group