*ನಿರಾಶ್ರಿತರಿಗೆ ಕೈ ಜೋಡಿಸೋಣ..*
ಕೊರಗಬೇಡ,ಕರಗಬೇಡ
ದೇವರ ದೂಷಿಸಲೂ ಬೇಡ
ಪ್ರವಾಹ, ಭೂಕಂಪ, ರೋಗ-ರುಜಿನಗಳು
ನೆಂಟರಂತೆ,ಬಯಸದಿದ್ದರೂ ಬಂದೇ ಬರುವವು….
ಅಂದು ನಮ್ಮ ಅಜ್ಜ-ಅಜ್ಜಿಯರ ದಿನಗಳಲಿ
ರಾಕ್ಷಸನಾಗಿ ಕಾಡಿತ್ತು ಪ್ಲೇಗ್, ಸಿಡುಬು, ಕಾಲರಾ,
ನಮ್ಮಷ್ಟು ವಿಧ್ಯೆ ಕಲಿಯದಿದ್ದರೂ,ಬುದ್ದಿವಂತರು
ಊರ ತ್ಯಜಿಸಿ,ಹೊಲ-ಗದ್ದೆಗಳಲಿ ಗುಡಿಸಲು ಕಟ್ಟಿ,
ಸಾಮಾಜಿಕ ಅಂತರ ರೂಪಿಸಿ,ಜೀವ ಕಾಪಾಡಿಕೊಳ್ಳುತ್ತಿದ್ದರು ಅಂದಿನ ಜನ…..
ಕೃಷಿ ಯ ಸ್ವರ್ಗ ನೈಲ್ ನದಿಯ ಪ್ರವಾಹಕೆ
ಹರಪ್ಪ-ಮೊಹೆಂಜೊದಾರೊ ಸ್ಮಶಾನವಾದವು,
ಪುರಾತನ ನಾಗರೀಕತೆ ಮಣ್ಣುಪಾಲಾಗಿತ್ತು,
ಆದರೂ ಮಾನವ ಸಮಾಜ ಬದುಕುಳಿಯಲಿಲ್ಲವೇ !!!
ಚಂದ್ರನ ಮೇಲೇರಲಿಲ್ಲವೇ ?ಮಂಗಳನ ಮುಟ್ಟಲಿಲ್ಲವೇ ?
ವೈರಸ್ ರೋಗದ ಬಗ್ಗೆ ಚಿಂತೆ ಬೇಡ,
ಸಾಮಾಜಿಕ ಅಂತರ ಕಾಪಾಡೋಣ ,
ನಾಮಕರಣ,ವಿವಾಹ,ಗೃಹಪ್ರವೇಶಗಳ ಹೆಸರಲಿ
ಶ್ರೀಮಂತಿಕೆಯ ,ಆಡಂಬರದ ಪ್ರದರ್ಶನ ಬೇಡ !!
ಸರಳವಾಗಿ ಮಾಡೋಣ ; ಸುಖವಾಗಿ ಬದುಕೋಣ !!!!!
ಪ್ರವಾಹ,ಭೂಕಂಪಗಳಾದಾಗ ಸೆಲ್ಫಿ ಹುಚ್ಚು ತ್ಯಜಿಸೋಣ,
ಜಾತಿ-ಮತ- ಧರ್ಮಗಳ ತ್ಯಜಿಸೋಣ ,
ನೊಂದವರ ಕಾಪಾಡಲು ಅಹರ್ನಶಿ ಶ್ರಮಿಸೋಣ..
ನಿರಾಶ್ರತರಿಗೆ ಬದುಕು ಕಟ್ಟಲು ಕೈಜೋಡಿಸೋಣ..
ಪ್ರವಾಹ ಪೀಡಿತ ಪ್ರದೇಶಗಳ ಗುರ್ತಿಸೋಣ ,
ನೊಂದ ಜನರ ಕಾಪಾಡಲು ಅಧಿಕಾರಸ್ಥರ ಒತ್ತಾಯಿಸೋಣ,
ತಗ್ಗಿನ ಜನರಿಗೆ ಶಾಶ್ವತ ಸೌಲಭ್ಯ ಕಲ್ಪಿಸಲು ಸರ್ಕಾರಕೆ ಒತ್ತಡ ಹೇರೋಣ, ನಿರಾಶ್ರಿತರ ಕಾಪಾಡಲು ಎಲ್ಲರೂ ಕೈಜೋಡಿಸೋಣ…..
ಡಾ.ಭೇರ್ಯ ರಾಮಕುಮಾರ್
ಸಾಹಿತಿಗಳು,ಪತ್ರಕರ್ತರು
ಮೊ:94496 80583
63631 72368