spot_img
spot_img

ಕವನ: ಮೇರು ಕನಕ

Must Read

- Advertisement -

ಮೇರು_ಕನಕ

ವ್ಯಾಸರು ಮೆಚ್ಚಿದ
ದಾಸರ ಪಂಕ್ತಿಯ
ಮೋಸವನರಿಯದ ಮುಗ್ಧರಿಗೆ
ತೋಷದಿ ಪರೀಕ್ಷೆ
ದಾಸರುವಿಟ್ಟರು
ಬೇಸರ ತೋರಿದ ಶಿಷ್ಯರಿಗೆ||

ಬಾಳೆಯ ಫಲವನು
ಕಾಳಗೆ ಕಾಣದೆ
ಕಾಳಜಿಯಿಂದಲಿ ಸವಿರೆಲ್ಲ
ಕಾಳನುವಿಲ್ಲದ್
ಸ್ಥಳವದುವಿಲ್ಲವು
ಹೇಳಿದ ಸುಂದರ ಜಗಮಲ್ಲ||

ಬಚ್ಚಮ ತನಯನು
ಕೆಚ್ಚೆದೆ ಶೂರನು
ಹೆಚ್ಚಿತು ಕೀರ್ತಿಯು ಮನೆತನದು
ರೊಚ್ಚಿಗೆ ಬರುವನು
ಚುಚ್ಚುತ ವೈರಿಯ
ಕೊಚ್ಚುತ ಚಣದಲಿ ಮಧಿಸುವನು||

- Advertisement -

ತಿಮ್ಮಪ್ಪ ವರನಿವ
ತಿಮ್ಮಪ್ಪ ನಾಯಕ
ಬಿಮ್ಮಿನ ಬೀರಪ್ಪ ಸುಪುತ್ರನು
ಸುಮ್ಮನೆ ಕೆಣಕುವ
ಹಮ್ಮಿನ ಹಗೆಗಿವ
ಗುಮ್ಮನ ತರದಲಿ ಕಾಡುವನು ||

ರಾಮನ ಧಾನ್ಯದ
ನೇಮವ ಪೊಗಳಿದ
ಧಮಯಂತಿ ನಳರ ಕೃತಿರಚಿಸಿ
ರಾಮನ ಭಕ್ತನು
ತಾಮಸ ಗುಣದವ
ನಾಮದಿ ಕನಕವ ನೀ ಗಳಿಸಿ||

ಶ್ರೀ ಈರಪ್ಪ ಬಿಜಲಿ

- Advertisement -
- Advertisement -

Latest News

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ

  ಮಂಗದಿಂ ಮಾನವನು ಜನಿಸಿಬಂದೆನ್ನುವರು ಈಗಿರುವ ಮಂಗದಿಂ ಜನಿಸನೇಕೆ ? ಮಂಗ ಮಾನಸದಿಂದ ಮನುಜ‌ ಮಾನಸವೆಂಬ ಸಿದ್ಧಾಂತ ಸರಿಯೇನೋ ! - ಎಮ್ಮೆತಮ್ಮ ಶಬ್ಧಾರ್ಥ ಮಂಗ = ಕೋತಿ. ಮಾನಸ = ಮನ. ಮನುಜ...
- Advertisement -

More Articles Like This

- Advertisement -
close
error: Content is protected !!
Join WhatsApp Group