spot_img
spot_img

ಕವನ: ಮೇರು ಕನಕ

Must Read

- Advertisement -

ಮೇರು_ಕನಕ

ವ್ಯಾಸರು ಮೆಚ್ಚಿದ
ದಾಸರ ಪಂಕ್ತಿಯ
ಮೋಸವನರಿಯದ ಮುಗ್ಧರಿಗೆ
ತೋಷದಿ ಪರೀಕ್ಷೆ
ದಾಸರುವಿಟ್ಟರು
ಬೇಸರ ತೋರಿದ ಶಿಷ್ಯರಿಗೆ||

ಬಾಳೆಯ ಫಲವನು
ಕಾಳಗೆ ಕಾಣದೆ
ಕಾಳಜಿಯಿಂದಲಿ ಸವಿರೆಲ್ಲ
ಕಾಳನುವಿಲ್ಲದ್
ಸ್ಥಳವದುವಿಲ್ಲವು
ಹೇಳಿದ ಸುಂದರ ಜಗಮಲ್ಲ||

ಬಚ್ಚಮ ತನಯನು
ಕೆಚ್ಚೆದೆ ಶೂರನು
ಹೆಚ್ಚಿತು ಕೀರ್ತಿಯು ಮನೆತನದು
ರೊಚ್ಚಿಗೆ ಬರುವನು
ಚುಚ್ಚುತ ವೈರಿಯ
ಕೊಚ್ಚುತ ಚಣದಲಿ ಮಧಿಸುವನು||

- Advertisement -

ತಿಮ್ಮಪ್ಪ ವರನಿವ
ತಿಮ್ಮಪ್ಪ ನಾಯಕ
ಬಿಮ್ಮಿನ ಬೀರಪ್ಪ ಸುಪುತ್ರನು
ಸುಮ್ಮನೆ ಕೆಣಕುವ
ಹಮ್ಮಿನ ಹಗೆಗಿವ
ಗುಮ್ಮನ ತರದಲಿ ಕಾಡುವನು ||

ರಾಮನ ಧಾನ್ಯದ
ನೇಮವ ಪೊಗಳಿದ
ಧಮಯಂತಿ ನಳರ ಕೃತಿರಚಿಸಿ
ರಾಮನ ಭಕ್ತನು
ತಾಮಸ ಗುಣದವ
ನಾಮದಿ ಕನಕವ ನೀ ಗಳಿಸಿ||

ಶ್ರೀ ಈರಪ್ಪ ಬಿಜಲಿ

- Advertisement -
- Advertisement -

Latest News

ಕವನ : ಗೊಂಬೆಗಳ ಕಣ್ಣೀರು

ಗೊಂಬೆಗಳ ಕಣ್ಣೀರು ಅಂದು ನಾವು ಅಪ್ಪ ಅವ್ವನನ್ನು ಕಾಡಿ ಬೇಡಿ ಗೊಂಬೆಗಳಿಗಾಗಿ ಅಳುತ್ತಿದ್ದೆವು ಜಾತ್ರೆ ಉತ್ಸವದಲ್ಲಿ ಹಿರಿಯರಿಗೆ ದೇವರ ಮೇಲಿನ ಭಕ್ತಿ ನಮಗೋ ಬಣ್ಣ ಬಣ್ಣದ ಗೊಂಬೆಗಳ ಮೇಲೆ ಆಸಕ್ತಿ ಅವ್ವ ಹೇಗೋ ಮಾಡಿ ಅಪ್ಪನ ತುಡುಗಿನಲಿ ತನ್ನಲಿದ್ದ ದುಡ್ಡು ಕೊಟ್ಟು ತಂದಳು ಗೊಂಬೆಗಳ ಮಿತಿ ಇರಲಿಲ್ಲ...
- Advertisement -

More Articles Like This

- Advertisement -
close
error: Content is protected !!
Join WhatsApp Group