ಕವನ: ರಕ್ಷಾಬಂಧನ

Must Read

*ರಕ್ಷಾಬಂಧನ*

ಅಣ್ಣ-ತಂಗಿಯರ ಅನುಬಂಧ
ಜೀವ ಜೀವದ ಭಾವಾನುಬಂಧ
ಅದುವೇ ಈ ರಕ್ಷಾಬಂಧನ

ಆರತಿಯ ಬೆಳಗಿ ಹರಸುವರು
ಸದಾ ನಮ್ಮಿಂದ ರಕ್ಷಣೆಯ ಬೇಡುವರು
ನಮ್ಮ ಪ್ರೀತಿಯ ಸಹೋದರಿಯರು

ಪ್ರೀತಿಯ ಉಡುಗೊರೆಯ ಪಡೆಯುತಾ
ಸದಾ ರಕ್ಷಣೆಯ ವರವ ಬೇಡುತಾ
ಹರಸುವರು ಅಣ್ಣನ ಜೀವನ ಬದುಕುತಾ

ಕಷ್ಟ-ಸುಖಗಳನು ಹಂಚಿಕೊಳ್ಳುತಾ
ಸದಾ ಒಳಿತನ್ನೇ ಬಯಸುತಾ
ಬೆಳಗುವರು ಸಹೋದರರ ಬಾಳನು ನಲಿಯುತಾ

ವರ್ಷಕ್ಕೊಮ್ಮೆ ಬರುವ ಈ ರಕ್ಷಾಬಂಧನ
ಸಹೋದರ ಸಂಬಂಧದ ಬಿಗಿಬಂಧನ
ಬಾಂಧವ್ಯ ಗಟ್ಟಿಗೊಳಿಸುವ ಪ್ರೇಮ ಬಂಧನ


ಶಿವಕುಮಾರ ಕೋಡಿಹಾಳ
ಮೂಡಲಗಿ

Latest News

ಎಲ್ಲಾ ಜಿಲ್ಲೆಗಳ ಯುವ ಸಾಧಕರಿಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರಾಜ್ಯ ಯುವ ಪ್ರಶಸ್ತಿ ಪ್ರದಾನ  

ಮೂಡಲಗಿ:-ತಾಲೂಕಿನ ಹಳ್ಳೂರ ಗ್ರಾಮದಲ್ಲಿ ರಾಜ್ಯದ ೩೧ ಜಿಲ್ಲೆಯ "ಯುವ ಸಾಧಕರಿಗೆ ಪ್ರಶಸ್ತಿ" ಪ್ರದಾನ ಸಮಾರಂಭ ಕಾರ್ಯಕ್ರಮ ದಿ. 26 ಹಾಗೂ 27 ರಂದು ಜರುಗುವುದು.ಕರ್ನಾಟಕ ರಾಜ್ಯ...

More Articles Like This

error: Content is protected !!
Join WhatsApp Group