ಕವನ

Must Read

ಅವ್ವ ನೆನಪಾದವಳು

ಚೆಂದಮಾಮನ ತೋರಿಸಿ ಕೆನೆ ಹಾಲು
ರುಚಿ ಬುತ್ತಿ ಮೊಸರ ಉಣಿಸಿದವಳು
ಮುಗಿಲ ಮನೆಯ ಚಿಕ್ಕೆಗಳ ಕರೆಯುತ
ಕಣ್ಣಲಿ ಸವಿ ಮಿನುಗ ಕುಣಿಸಿದವಳು…

ಬದುಕ ರೆಕ್ಕೆಗೆ ಬಣ್ಣ ಬಳಿಯುತ
ಮಿನುಗು ಕಣ್ಣಲಿ ಕನಸ ಬಿತ್ತಿದವಳು
ಮಾಗುತ ಸಿಹಿ ಹಣ್ಣಾಗಿ ಹೆಣ್ಣ ಬಾಳಲಿ
ಬೆಳಕ ಬಿತ್ತುತ ಕತ್ತಲ ಮಣಿಸಿದವಳು

ಬಾಳಗಾಣದ ನೊಗವಾಗಿ ನಗುತ ನಡೆದು
ಬದುಕ ಬಾಣಲಿಯಲಿ ಬೆಂದು ನಗವಾದವಳು
ನೋವ ತೆಕ್ಕೆಯಲಿ ನಲಿಯುತ ಅರಳುತ
ಜಗದ ಜಂಜಡಕೆ ಹೂವ ಗುಣಿಸಿದವಳು

ಬದುಕ ಬವಣೆಯ ಎದೆಯ ಬಾನಿಗೆ
ನೇರ ನಗೆ ಕವಣೆ ಬೀಸಿದವಳು
ನಂಜು ನುಂಗುತ ನಂಜುಂಡನಂತೆ ನಗುತ
ಎದೆ ಮೀಟುವ ಗಾಯವ ಎಣಿಸಿದವಳು..

ಅಳಲ ದನಿಯ ಕೊಳಲ ಕೊರಳಲಿ
ಸವಿಗಾನ ನುಡಿಸಿದವಳು..
ಸುರಿವ ಕಂಬನಿಯ ಮಳೆ ಹನಿಯಲಿ
ಹನಿಸಿ ಸುಡುವ ಬೇಗೆಯ ತಣಿಸಿದವಳು..

ಎಲ್ಲರಿಗೂ ಬೇಕಾಗಿ ಕಲ್ಲುಸಕ್ಕರೆಯಂತೆ
ಮೆಲ್ಲ ಸವಿ ಬೆಲ್ಲವಾಗಿ ಕರಗಿದವಳು..
ಹುಲ್ಲಾಗಿ ಹೂವಾಗಿ ಎಲ್ಲೆಡೆ ಸಲ್ಲುತ
ಮನದಿ ಮಲ್ಲಿಗೆ ನೆನಪ ಪೋಣಿಸಿದವಳು…

ಇಂದಿರಾ ಮೋಟೆಬೆನ್ನೂರ. ಬೆಳಗಾವಿ.

Latest News

ಖಂಡ್ರೆ ವಿರುದ್ಧ ಮಾತನಾಡಿದರೆ ನಾಲಿಗೆ ಕತ್ತರಿಸುವೆ – ಕಾಂಗ್ರೆಸ್ ಕಾರ್ಯಕರ್ತನ ವಿಡಿಯೋ

ಬೀದರ - ನಗರದ ಪಾಪನಾಶ ಶಿವಲಿಂಗ ‌ದೇವಸ್ಥಾನದ ಅಭಿವೃದ್ಧಿ ವಿಚಾರದಲ್ಲಿ ಇತ್ತೀಚೆಗೆ ಭಗವಂತ ಖೂಬಾ v/s ಖಂಡ್ರೆ ಟಾಕ್‌ವಾರ್ ನಡೆದ ಘಟನೆ ಇನ್ನೂ ಹಸಿರಾಗಿದೆಈ ಹಿನ್ನೆಲೆಯಲ್ಲಿ...

More Articles Like This

error: Content is protected !!
Join WhatsApp Group