spot_img
spot_img

ಮಹಾಶಿವರಾತ್ರಿಯಲ್ಲಿ ಶಿವದರ್ಶನ

Must Read

- Advertisement -

ಬೆಂಗಳೂರು – ಮಾ 11 ರಂದು ಕೆಂಗೇರಿ ಉಪನಗರದ ಏಕದಳ ಬಂಡೆಮಠದಲ್ಲಿ ವಿವಿಧ ಶಿವಲಿಂಗ ಪ್ರದರ್ಶನವನ್ನು ಬಂಡೇಮಠ ಸಂಸ್ಥಾನ ಹಾಗೂ ಸ್ನೇಹಜೀವಿ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಏರ್ಪಡಿಸಲಾಗಿದೆ.

ಶಿವಮೊಗ್ಗ ಜಿಲ್ಲೆ ತಾಳಗುಂದದ ಕರ್ನಾಟಕದ ಅತ್ಯಂತಪ್ರಾಚಿನ ಶಿವಲಿಂಗ ಪ್ರಣವೇಶ್ವರ,ತಲೆಯಮೇಲೆ ಗಂಗೆಯನ್ನೆ ಹೊತ್ತ ತುರುವೇಕೆರೆಯ ಗಂಗಾಧರ,ಒಂದೇ ಪಾಣಿ ಪೀಠದ ಮೇಲೆ ತ್ರಿಮೂರ್ತಿಗಳನ್ನು ಬಿಂಬಿಸುವ ಗದಗದ ತ್ರಿಕೂಟೇಶ್ವರ ಹಾಗೆಯೆ ಐದು ಶಿವಲಿಂಗಳನ್ನು ಹೊಂದಿರುವ ಬೆಳಗಾವಿ ಜಿಲ್ಲೆ ಮುನವಳ್ಳಿಯ ಪಂಚಲಿಂಗೇಶ್ವರ, ಪರಶಿವನ ಮುಖವನ್ನು ಹೊಂದಿರುವ ಸೊರಬ ಸಮೀಪದ ಭಾರಂಗಿಯ ಮುಖಲಿಂಗ,ಮಂಡ್ಯ ಜಿಲ್ಲೆ ನೆಲಮನೆ,ಚಿತ್ರದುರ್ಗ ಜಿಲ್ಲೆ ,ಹೊಸದುರ್ಗ ತಾಲ್ಲೂಕಿನ ಹೆಗ್ಗೆರೆ,ಬೆಂಗಳೂರು ಜಿಲ್ಲೆ ಬೂದಿಗೆರೆ ಸಮೀಪದ‌ ಚೌಡಪ್ಪನಹಳ್ಳಿಯ ಹದಿನಾರು ಮೂಲೆಗಳುಳ್ಳ ಧಾರಾಲಿಂಗಗಳು,ಒಂದು ಶಿವಲಿಂಗದಲ್ಲಿ ಒಂದು ಸಾವಿರ ಶಿವಲಿಂಗಗಳನ್ನು ಹೊಂದಿರುವ ಶಿವಮೊಗ್ಗ ಜಿಲ್ಲೆ ಬಂದಣಿಕೆ,ಧಾರವಾಡ ಜಿಲ್ಲೆ ನರೇಂದ್ರ ,ಕೊಪ್ಪಳ ಜಿಲ್ಲೆ ಪುರದ ಸಹಸ್ರ ಲಿಂಗಗಳು,ಹಂಪಿಯ ಚಕ್ರತೀರ್ಥದಲ್ಲಿರುವ ಶಿವಲಿಂಗಗಳ ವ್ಯೂಹ,ಕದಂಬ,ಚಾಲುಕ್ಯ, ಗಂಗ,ನೊಳಂಬ,ಕಲ್ಯಾಣ ಚಾಲುಕ್ಯ, ಹೊಯ್ಸಳ, ವಿಜಯನಗರಸರು, ಮೈಸೂರು ಒಡೆಯರು ನಿರ್ಮಿಸಿರುವ ವೈವಿಧ್ಯಮಯ, ವೈಶಿಷ್ಟ್ಯಪೂರ್ಣ ಸಾವಿರಾರು ಶಿವಲಿಂಗಗಳ ಛಾಯಾ ಚಿತ್ರಗಳನ್ನು ಒಂದೇ ಸೂರಿನಡಿಯಲ್ಲಿ ನೋಡುವ ಅವಕಾಶ ಒದಗಿ ಬಂದಿದೆ.

- Advertisement -

ಬೆಂಗಳೂರು ಸಮೀಪದ ಕೆಂಗೇರಿ ಉಪನಗರದ ಏಕದಳ ಬಂಡೆಮಠದಲ್ಲಿ ,ಬಂಡೇಮಠ ಸಂಸ್ಥಾನ ಹಾಗೂ ಸ್ನೇಹಜೀವಿ ಚಾರಿಟೆಬಲ್ ಟ್ರಸ್ ಇವರ ಸಂಯುಕ್ತಾಶ್ರಯದಲ್ಲಿ ಬೆಂಗಳೂರಿನ ಸುಪ್ರಸಿದ್ಧ ಹವ್ಯಾಸಿ ಛಾಯಾಗ್ರಾಹಕರೂ ಹಾಗೂ ದೇವಾಲಯ ಅಧ್ಯಯನಕಾರರೂ ಆದ ಶ್ರೀ ಕೆಂಗೇರಿ ಚಕ್ರಪಾಣಿಯವರು ತೆಗೆದ ಛಾಯಾಚಿತ್ರಗಳನ್ನುಮಹಾಶಿವರಾತ್ರಿಯ ಪವಿತ್ರದಿನ (ದಿ.೧೧–೦೩-೨೦೨೧) ಆಯೋಜಿಸಲಾಗಿದೆ. ಆ ದಿನ ಬೆಳಿಗ್ಗೆ ಒಂಬತ್ತುವರೆಗೆ ಆರಂಭವಾಗುವ ಪ್ರದರ್ಶನ ರಾತ್ರಿ ಹನ್ನೊಂದು ಗಂಟೆಯವರೆಗೂ ಇರುತ್ತದೆ.

- Advertisement -

ಸಾವಿರಾರು ಶಿವಲಿಂಗಗಳ ಛಾಯಾಚಿತ್ರಗಳ ಜೊತೆ ಶಿವನ ಲೀಲಾಮೂರ್ತಿಗಳಾದ ಚಂದ್ರಶೇಖರ,ದಕ್ಷಿಣಾಮೂರ್ತಿ,ಕಾಲಭೈರವ,
ವೀರಭದ್ರ,ನಂದಿವಾಹನ ಶಿವ,ನಾಟ್ಯಶಿವರ ವೈವಿಧ್ಯಮಯ ಛಾಯಾಚಿತ್ರಗಳ ಜೊತೆ ಶಿವನ ಪರಿವಾರ ದೇವತೆಗಳಾದ ಪಾರ್ವತಿ, ಗಣಪತಿ ,ಸುಬ್ರಹ್ಮಣ್ಯ, ನಂದೀಶ್ವರ ಹಾಗೂ ನೂರಾರು ಶಿವದೇವಾಲಯಗಳ ಛಾಯಾಚಿತ್ರಗಳನ್ನು ನೋಡಿ ಕಣ್ಣುತುಂಬಿಸಿಕೊಳ್ಳುವ ಅವಕಾಶ ಶಿವಭಕ್ತರಿಗೆ ಲಭ್ಯವಿದೆ.

ದೇವಾಲಯ ಅಧ್ಯಯನಕಾರ ಕೆಂಗೇರಿ ಚಕ್ರಪಾಣಿ ಕಿರು ಪರಿಚಯ

ಬೆಂಗಳೂರು ಸಮೀಪದ ಕೆಂಗೇರಿಯವರಾದ ಚಕ್ರಪಾಣಿ ಭಾರತ್ ಸಂಚಾರ್ ನಿಗಮ (ಬಿ.ಎಸ್.ಎನ್.ಎಲ್) ನ ನಿವೃತ್ತ ಅಧಿಕಾರಿ.ವೃತ್ತಿಯಲ್ಲಿ ಸರ್ಕಾರಿ ನೌಕರರಾಗಿದ್ದರೂ ಪ್ರವೃತ್ತಿಯಲ್ಲಿ ದೇವಾಲಯಗಳ ಛಾಯಾಗ್ರಾಹಕರು ಹಾಗೂ ಸಂಶೋಧಕರು.

ತಮ್ಮ ಸಹಪಾಠಿ ಕೆಂಗೇರಿಯ ಶ್ರೀ ಮುನಿ ಆಂಜಿನಪ್ಪನವರಿಂದ ಛಾಯಾಚಿತ್ರಕಲೆಯನ್ನು ಕಲಿತ ಚಕ್ರಪಾಣಿ ನಂತರ ಕನ್ನಡ ಸಾಹಿತ್ಯ ಪರಿಷತ್ತಿನ ಶಾಸನ ತರಗತಿಗೆ ಸೇರಿ ದೇವಾಲಯದ ಶಾಸ್ತ್ರೀಯ ಅಧ್ಯಯನವನ್ನೂ ಮಾಡಿದರು.

ಚಕ್ರಪಾಣಿಯವರು ಕನ್ನಡನಾಡಿನ ಮೂಲೆಮೂಲೆಗಳಲ್ಲೂ ಸಂಚರಿಸಿ ನಾಡಿನ ದೇವಾಲಯಗಳ ,ದೇವತಾಮೂರ್ತಿಗಳ ಛಾಯಾಚಿತ್ರಗಳನ್ನು ತೆಗೆದು ಸಂಗ್ರಹಿಸಿದ್ದಾರೆ ಹಾಗೂ ದೇವಾಲಯಗಳನ್ನು ಕುರಿತು ಪುಸ್ತಕಗಳನ್ನೂ ಬರೆದಿರುವರು.ಇವರು ಸುಮಾರು ಇಪ್ಪತೈದು ವರ್ಷಗಳಿಂದ ಯಾವ  ಪ್ರತಿಫಲಾಪೇಕ್ಷೆಯು ಇಲ್ಲದೆ ,ತಮ್ಮ ಸ್ವಂತ ಖರ್ಚಿನಲ್ಲಿ ಛಾಯಾಚಿತ್ರಗಳನ್ನು ತೆಗೆಯುವ ಹಾಗೂ ಸಾರ್ವಜನಿಕರಿಗೆ ಪ್ರದರ್ಶಿಸುವ ಕೈಂಕರ್ಯವನ್ನು ಕೆಂಗೇರಿಚಕ್ರಪಾಣಿಯವರು ಕೈಗೊಂಡಿರುವರು.

ಚೆನೈ ಮೈಸೂರು,ಕೆ.ಆರ್.ನಗರ,ಮಧುಗಿರಿ, ದೇವನಹಳ್ಳಿ ತಾಲ್ಲೂಕು ವಿಜಯಪುರ, ಕೆಂಗೇರಿ,ಧರ್ಮಸ್ಥಳ, ಬೆಂಗಳೂರಿನಲ್ಲಿ ಅನೇಕ ಕಡೆ ಇವರ ದೇವಾಲಯಗಳ ಚಿತ್ರಪ್ರದರ್ಶನವೂ ಪ್ರದರ್ಶಿತವಾಗಿ ವಿದ್ವಾಂಸರ ಹಾಗೂ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಕೆಂಗೇರಿ ಚಕ್ರಪಾಣಿಯವರ ಮೊ.ಸಂ.9448386886

ಪ್ರಣವ

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಕಿನ್ನರಿ ಬ್ರಹ್ಮಯ್ಯ ........................................... 12ನೇ ಶತಮಾನದ ಬಸವಾದಿ ಶಿವಶರಣರ ಕೀರ್ತಿವಾರ್ತೆಯನ್ನು ಕೇಳಿ ಪ್ರಭಾವಿತರಾಗಿ ನಾಡು ಹೊರನಾಡಿನಿಂದ ಅನೇಕ ಜನ ಶರಣರು ಕಲ್ಯಾಣಕ್ಕೆ ಬರಹತ್ತಿದರು. ಬಸವಣ್ಣನವರ ಸಮಕಾಲೀನರಾಗಿದ್ದ ಶರಣರಾದ ಗುಜರಾತದಿಂದ...
- Advertisement -

More Articles Like This

- Advertisement -
close
error: Content is protected !!
Join WhatsApp Group