spot_img
spot_img

ಹೊಸ ಹೊಳಲು ಶ್ರೀ ಲಕ್ಷ್ಮೀನಾರಾಯಣ ಕ್ಷೇತ್ರ

Must Read

- Advertisement -

ಬೆಂಗಳೂರು – ಮಂಡ್ಯ ಜಿಲ್ಲೆ ಕೃಷ್ಣರಾಜ ಪೇಟೆಯಿಂದ ಒಂದೂವರೆ ಕಿಲೋ ಮೀಟರ್ ದೂರದಲ್ಲಿರುವ ಲಕ್ಷ್ಮೀನಾರಾಯಣ ಕ್ಷೇತ್ರವೇ ಹೊಸಹೊಳಲು. ಈ ಊರಿಗೆ ಈ ಹೆಸರು ಬಂದಿದ್ದು ಹೇಗೆ ಎಂಬ ಬಗ್ಗೆ ಐತಿಹ್ಯವಿದೆ.

ಇಲ್ಲಿ ಊರ ಮಧ್ಯದಲ್ಲಿ 13ನೇ ಶತಮಾನದಲ್ಲಿ ನಿರ್ಮಿಸಲಾದ ಹೊಯ್ಸಳರ ಕಾಲದ ಭವ್ಯವಾದ ದೇವಾಲಯವಿದೆ. ಈ ದೇವಾಲಯದ ನಿರ್ಮಾಣ ಕಾಲದಲ್ಲಿ ಗರುಡಗಂಬವನ್ನು ನಿಲ್ಲಿಸಲು ಭೂಮಿಯನ್ನು ಅಗೆದಾಗ, ಅಲ್ಲಿ ಹೊಳೆಯುವ ಹರಳುಗಳು ಸಿಕ್ಕವಂತೆ. ಹೊಚ್ಚ ಹೊಸ ಬಗೆಯ ಹೊಳೆಯುವ ಹೊಸ ಹರಳುಗಳು ಸಿಕ್ಕ ಊರು ಹೊಸ ಹರಳು ಎಂದೇ ಖ್ಯಾತಿವಾಗಿತ್ತಂತೆ. ಕಾಲಕ್ರಮೇಣ ಅಪಭ್ರಂಶವಾಗಿ ಹೊಸ ಹೊಳಲು ಆಗಿದೆ ಎನ್ನಲಾಗುತ್ತದೆ.

- Advertisement -

ಗಂಗರು ಮತ್ತು ಚೋಳರ ಆಳ್ವಿಕೆಗೆ ಒಳಪಟ್ಟಿದ್ದ ಈ ಊರು ಹೊಯ್ಸಳರ ಕಾಲದಲ್ಲಿ ಅಗ್ರಹಾರವಾಗಿತ್ತು ಎಂದು ತಿಳಿದುಬರುತ್ತದೆ. ವಿಜಯನಗರದ ಅರಸರ ಕಾಲದಲ್ಲಿ ಈ ಊರಿನ ಸುತ್ತ ಕೋಟೆ ನಿರ್ಮಿಸಲಾಗಿತ್ತು ಎಂದು ತಿಳಿದುಬರುತ್ತದೆ. ಆದರೆ ಇಲ್ಲಿರುವ ಈ ಅದ್ಭುತ ದೇವಾಲಯವನ್ನು ಯಾರು, ಯಾವ ಕಾಲದಲ್ಲಿ ಕಟ್ಟಿದರು ಎಂಬುದಕ್ಕೆ ಸ್ಪಷ್ಟ ಆಧಾರಗಳು ದೊರೆತಿಲ್ಲ. ಮುಖ್ಯದ್ವಾರದಿಂದ ಒಳಹೊಕ್ಕೊಡನೆ ಸಾಧಾರಣ ದೇವಾಲದಂತೆ ಭಾಸವಾಗುತ್ತದೆ. ಆದರೆ ಹಿಂಬದಿಯಲ್ಲಿನ ಗೋಪುರ ಹಾಗೂ ಬಿತ್ತಿಗಳಲ್ಲಿನ ಸೂಕ್ಷ್ಮ ಕೆತ್ತನೆ ಭವ್ಯತೆಗೆ ಸಾಕ್ಷಿಯಾಗಿದೆ.

- Advertisement -

ಇಲ್ಲಿರುವ ಭವ್ಯ ಹೊಯ್ಸಳ ವಾಸ್ತುಶಿಲ್ಪ ಹಾಗೂ ಕಲಾ ಶ್ರೀಮಂತಿಕೆಯ ದೇವಾಲಯ ಊರಿನ ಪ್ರಧಾನ ಆಕರ್ಷಣೆ.

ದೇವಾಲಯದ ಸುತ್ತಲೂ ಇರುವ ಬಿತ್ತಿಗಳಲ್ಲಿ ಹಾಗೂ ಒಳ ಆವರಣದಲ್ಲಿ ಇರುವ ಕಲಾ ವೈಭವವನ್ನು ನೋಡುವುದೇ ಒಂದು ಸೊಬಗು. ಈ ದೇವಾಲಯ ಬೇಲೂರು, ಹಳೆಬೀಡು, ನುಗ್ಗೇಹಳ್ಳಿ, ಬಸರಾಳು, ಜಾವಗಲ್, ಸೋಮನಾಥಪುರ ದೇವಾಲಯ ಮಾದರಿಯಲ್ಲೇ ಇದ್ದು, ಸುಂದರ ಹಾಗೂ ಸೂಕ್ಷ್ಮ ಕೆತ್ತನೆಗಳಿಂದ ಕೂಡಿದೆ.

ನಿರೂಪಣೆ : ಡಾಕ್ಟರ್ ಗುರುಮೂರ್ತಿ ಗುರೂಜಿ

- Advertisement -
- Advertisement -

Latest News

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ

  ಮಂಗದಿಂ ಮಾನವನು ಜನಿಸಿಬಂದೆನ್ನುವರು ಈಗಿರುವ ಮಂಗದಿಂ ಜನಿಸನೇಕೆ ? ಮಂಗ ಮಾನಸದಿಂದ ಮನುಜ‌ ಮಾನಸವೆಂಬ ಸಿದ್ಧಾಂತ ಸರಿಯೇನೋ ! - ಎಮ್ಮೆತಮ್ಮ ಶಬ್ಧಾರ್ಥ ಮಂಗ = ಕೋತಿ. ಮಾನಸ = ಮನ. ಮನುಜ...
- Advertisement -

More Articles Like This

- Advertisement -
close
error: Content is protected !!
Join WhatsApp Group