spot_img
spot_img

೧.೩೪ ಕೋಟಿ ರೂ. ದಂಡ ವಸೂಲಿ ಮಾಡಿದ ಬೀದರ್ ಪೊಲೀಸರು; ಜನತೆಯ ಆಕ್ರೋಶ

Must Read

- Advertisement -

ಕೊರೋನಾ ಮಹಾಮಾರಿಯಿಂದಾಗಿ ಜನತೆ ಬಸವಳಿದಿರುವಾಗಲೆ ಗಾಯದ ಮೇಲೆ ಬರೆ ಎಳೆದಂತೆ ಕಳೆದ ವರ್ಷ ಸಂಚಾರಿ ನಿಯಮಗಳ ನೆಪದಲ್ಲಿ ಬೀದರ್ ಪೊಲೀಸರು ೧.೩೪ ಕೋಟಿ ಹಣ ವಸೂಲಿ ಮಾಡಿ ದಾಖಲೆ ನಿರ್ಮಿಸಿದ್ದಾರೆ.

ಬೀದರ್ ಜಿಲ್ಲಾಧಿಕಾರಿ ಆರ್. ರಾಮಚಂದ್ರನ್ ಪತ್ರಕರ್ತರೊಡನೆ ಮಾತನಾಡುತ್ತ ಈ ವಿಷಯ ತಿಳಿಸಿದರು.

ಆದರೆ ಪೊಲೀಸರ ಈ ಕಾರ್ಯ ಜನಸಾಮಾನ್ಯರಲ್ಲಿ ತೀವ್ರ ಅಸಮಾಧಾನ ಹುಟ್ಟು ಹಾಕಿದ್ದು ಸಂವಿಧಾನದ ಇತರೆ ನಿಯಮಗಳನ್ನು ಪಾಲಿಸದೇ ರಾಜಾರೋಷವಾಗಿ ತಿರುಗುವ ಜನರನ್ನು ಬಿಟ್ಟು ಸಾಮಾನ್ಯ ಜನರಿಂದ ಸಂಚಾರಿ ನಿಯಮ ಉಲ್ಲಂಘನೆಯ ನೆಪ ಇಟ್ಟಕೊಂಡು ಕೋಟಿಗಟ್ಟಲೆ ಹಣ ವಸೂಲು ಮಾಡಿದ್ದಕ್ಕೆ ಖಂಡನೆ ವ್ಯಕ್ತವಾಗುತ್ತಿದೆ.

- Advertisement -

ನಾನು ಜನಪರ, ನನ್ನದು ಜನಪರ ಸರ್ಕಾರ ಎಂದು ಬೊಗಳೆ ಬಿಡುವ ಬಿ ಎಸ್ ಯಡಿಯೂರಪ್ಪನವರ ಸರ್ಕಾರದ ಆದೇಶದಂತೆ ದ್ವಿಚಕ್ರ ಹಾಗೂ ನಾಲ್ಕು ಚಕ್ರಗಳ ವಾಹನ ಸವಾರರಿಂದ ಕೊರೋನಾ ಬಿಕ್ಕಟ್ಟಿನಲ್ಲಿಯೂ ೧.೩೪ ಕೋಟಿ ದಂಡದ ಹಣ ಪೊಲೀಸ್ ಇಲಾಖೆ ವಸೂಲು ಮಾಡಿದ್ದು ಇದು ಯಾವ ರೀತಿಯ ಜನಪರ ಸರ್ಕಾರ ಎಂದು ಆಕ್ರೋಶದಿಂದ ಪ್ರಶ್ನೆ ಮಾಡುತ್ತಿದ್ದಾರೆ.

ಇತ್ತ ಸಾರಿಗೆ ಅಧಿಕಾರಿಗಳಿಗೂ ಇದು ಬಿಸಿ ತುಪ್ಪವಾಗಿದ್ದು ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ, ದಾಖಲೆಗಳನ್ನು ಇಟ್ಟುಕೊಂಡು ರಸ್ತೆಗೆ ಇಳಿಯಬೇಕು ಎಂದು ಬೀದರ್ ಜಿಲ್ಲಾಧಿಕಾರಿ ಆರ್. ರಾಮಚಂದ್ರನ್ ಮನವಿ ಮಾಡಿಕೊಂಡಿದ್ದಾರೆ.

ವರದಿ: ನಂದಕುಮಾರ ಕರಂಜೆ,
Times of ಕರ್ನಾಟಕ

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಕಿನ್ನರಿ ಬ್ರಹ್ಮಯ್ಯ ........................................... 12ನೇ ಶತಮಾನದ ಬಸವಾದಿ ಶಿವಶರಣರ ಕೀರ್ತಿವಾರ್ತೆಯನ್ನು ಕೇಳಿ ಪ್ರಭಾವಿತರಾಗಿ ನಾಡು ಹೊರನಾಡಿನಿಂದ ಅನೇಕ ಜನ ಶರಣರು ಕಲ್ಯಾಣಕ್ಕೆ ಬರಹತ್ತಿದರು. ಬಸವಣ್ಣನವರ ಸಮಕಾಲೀನರಾಗಿದ್ದ ಶರಣರಾದ ಗುಜರಾತದಿಂದ...
- Advertisement -

More Articles Like This

- Advertisement -
close
error: Content is protected !!
Join WhatsApp Group