ಕವನ: ಅಕ್ಷರದಾಂಜಲಿ

Must Read

ಅಕ್ಷರದಾಂಜಲಿ

ಆಗಸದಂಚಿನ ನೇಸರನೆಲ್ಲಿ ಮರೆಯಾದನು
ಮಗುವಿನಂತಹ ಮನಸಿನ ಗಾನ ಗಂಧರ್ವನು
ಮರೆಯಾದ ಸುಕೋಮಲ ಸುಮವೊಂದು
ದೇವನೊಲುಮೆಯ ಚರಣಕಮಲಗಳಿಗೆ ಮುಡಿಪಾಯಿತೇ

ಗಡಿಗಳಾಚಿನ ಸ್ನೇಹ ಪ್ರೇಮ ಕರೆಯು ಕೇಳಿತು
ಗಾನಲಹರಿಯ ಸ್ವರ ಮಾಧುರ್ಯವ ಮನ ಬಯಸಿತು
ಆಕಾಶದೀಪವು ಮರೆಯಾಗಿ ಕತ್ತಲಾವರಿಸಿತು
ಭಾರತ ಮಾತೆಯ ಮಡಿಲಲಿ ಚಿರನಿದ್ರೆಗೈದಿತು

ಸ್ವರ ಸಾಮ್ರಾಟನ ಅಪಧಮನಿಗಳಲಿ
ಸಂಗೀತದ ಸ್ವರ ಲಾಲಿತ್ಯವು ತುಂಬಿರಲು
ಏರಿದೆತ್ತರದಲೂ ನಮ್ರತೆಯ ಸಾಕಾರವು
ಎಷ್ಟು ಜನರ ಮನವ ಕದ್ದ ಗಾರುಡಿಗನು

ನಾದದ ತಪಸ್ವಿಯಾಗಿ ಅರಳಿದಂತೆ
ಸಾಗರವೇ ತಾನಾದರೂ ಬಿಂದುವಿನಂತೆ
ತುಂಬಿದ ಕೊಡ ತುಳಕದೆಂದು
ಇರುವುದು ಕಲಿಯಲು ಪಾಠವು

ಸುಗುಣ ಸಂಸ್ಕಾರದ‌ಹಿರಿಮೆ ತಾ ಮೆರೆದು
ಕಿರಿಯ ರಿಗೆ ಹೆಜ್ಜೆಗುರುತು ಮೂಡಿಸಿ
ಮರೆಯಾದರೂ ಮನಭಾವ ಕದಡಿಸಿ
ಕಣ್ಣಬಿಂಬದಲ್ಲೊಂದು ಹನಿಯು ಮೂಡಲು

ಬಾಲ್ಯ ಹರೆಯದ ನೆನಪಿನಲ್ಲಿ ನಿನ್ನ ಗಾನ ತೋರಣ
ಎದೆಯು ಭಾರ ಗಾನ ಕೋಗಿಲೆಗೆ ನನ್ನ ಈ ಅಶ್ರುತರ್ಪಣ

ದೀಪಿಕಾ ಚಾಟೆ
ಬೆಳಗಾವಿ

Latest News

ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು

ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...

More Articles Like This

error: Content is protected !!
Join WhatsApp Group