ಕವನ: ಅಕ್ಷರದಾಂಜಲಿ

Must Read

ಅಕ್ಷರದಾಂಜಲಿ

ಆಗಸದಂಚಿನ ನೇಸರನೆಲ್ಲಿ ಮರೆಯಾದನು
ಮಗುವಿನಂತಹ ಮನಸಿನ ಗಾನ ಗಂಧರ್ವನು
ಮರೆಯಾದ ಸುಕೋಮಲ ಸುಮವೊಂದು
ದೇವನೊಲುಮೆಯ ಚರಣಕಮಲಗಳಿಗೆ ಮುಡಿಪಾಯಿತೇ

ಗಡಿಗಳಾಚಿನ ಸ್ನೇಹ ಪ್ರೇಮ ಕರೆಯು ಕೇಳಿತು
ಗಾನಲಹರಿಯ ಸ್ವರ ಮಾಧುರ್ಯವ ಮನ ಬಯಸಿತು
ಆಕಾಶದೀಪವು ಮರೆಯಾಗಿ ಕತ್ತಲಾವರಿಸಿತು
ಭಾರತ ಮಾತೆಯ ಮಡಿಲಲಿ ಚಿರನಿದ್ರೆಗೈದಿತು

ಸ್ವರ ಸಾಮ್ರಾಟನ ಅಪಧಮನಿಗಳಲಿ
ಸಂಗೀತದ ಸ್ವರ ಲಾಲಿತ್ಯವು ತುಂಬಿರಲು
ಏರಿದೆತ್ತರದಲೂ ನಮ್ರತೆಯ ಸಾಕಾರವು
ಎಷ್ಟು ಜನರ ಮನವ ಕದ್ದ ಗಾರುಡಿಗನು

ನಾದದ ತಪಸ್ವಿಯಾಗಿ ಅರಳಿದಂತೆ
ಸಾಗರವೇ ತಾನಾದರೂ ಬಿಂದುವಿನಂತೆ
ತುಂಬಿದ ಕೊಡ ತುಳಕದೆಂದು
ಇರುವುದು ಕಲಿಯಲು ಪಾಠವು

ಸುಗುಣ ಸಂಸ್ಕಾರದ‌ಹಿರಿಮೆ ತಾ ಮೆರೆದು
ಕಿರಿಯ ರಿಗೆ ಹೆಜ್ಜೆಗುರುತು ಮೂಡಿಸಿ
ಮರೆಯಾದರೂ ಮನಭಾವ ಕದಡಿಸಿ
ಕಣ್ಣಬಿಂಬದಲ್ಲೊಂದು ಹನಿಯು ಮೂಡಲು

ಬಾಲ್ಯ ಹರೆಯದ ನೆನಪಿನಲ್ಲಿ ನಿನ್ನ ಗಾನ ತೋರಣ
ಎದೆಯು ಭಾರ ಗಾನ ಕೋಗಿಲೆಗೆ ನನ್ನ ಈ ಅಶ್ರುತರ್ಪಣ

ದೀಪಿಕಾ ಚಾಟೆ
ಬೆಳಗಾವಿ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group