ಕವನ : ಕನ್ನಡವೇ ಧರ್ಮ

Must Read

ಕನ್ನಡವೇ ಧರ್ಮ

ಕನ್ನಡವೇ ಧರ್ಮ
ಕನ್ನಡದ ವರ್ಮ
ಕನ್ನಡದ ಕರ್ಮ
ಕಾಯಕದ ಮರ್ಮ
ಶರಣರ ವಚನಗಳು
ಜೈನರ ಚಂಪೂ
ಆಚಾರ್ಯರ ಬೋಧೆ
ಮುಕ್ತಿ ಮಣಿಯು
ದೇಸಿ ನಾಣ್ನುಡಿ
ಜಾನಪದದ ಮುನ್ನುಡಿ
ಹರಿವಿಕೊಂಡಿದೆ ನೋಡು
ತಿರುಳು ಕನ್ನಡವು
ಕನ್ನಡ ಕಾವ್ಯದ ಕಂಪು
ಗಿಳಿ ಕೋಗಿಲೆಯ ಇಂಪು
ಹುಲುಸಾಗಿ ಬೆಳೆಯಿತು
ಅಚ್ಚ ಹಸುರಿನ ಸಂಪು
ಏಳು ಕನ್ನಡ ಕಂದ
ನಾಡ ಹಬ್ಬದ ಚಂದ
ಭುವನೇಶ್ವರಿ ಬರುತಿಹಳು
ಸಜ್ಜಾಗು ಸಡಗರದಿ
ಕನ್ನಡವು ಉಳಿದರೆ
ಕನ್ನಡಿಗರು ಉಳಿದಾರು

ಡಾ. ವೀಣಾ ಯಲಿಗಾರ
ಕನ್ನಡ ಪ್ರಾಧ್ಯಾಪಕರು
ಮುಖ್ಯಸ್ಥರು ಕೆ ಎಲ್ ಈ
ಮೃತ್ಯುಂಜಯ ಕಲಾ ವಾಣಿಜ್ಯ ಮಹಾವಿದ್ಯಾಲಯ
ಧಾರವಾಡ

Latest News

ಅರಭಾವಿಯಲ್ಲಿ ವಿಶ್ವ ಮಣ್ಣು ದಿನಾಚರಣೆ

ಕಿತ್ತೂರ ರಾಣಿ ಚನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯ, ಅರಭಾವಿಯಲ್ಲಿ ದಿನಾಂಕ: ೦೫.೧೨.೨೦೨೫ ರಂದು ವಿಶ್ವ ಮಣ್ಣು ದಿನಾಚರಣೆಯನ್ನು ರಾಷ್ಟ್ರೀಯ ಸೇವಾ ಯೋಜನೆ ಹಾಗೂ ತೋಟಗಾರಿಕೆ ವಿಸ್ತರಣಾ ಮತ್ತು...

More Articles Like This

error: Content is protected !!
Join WhatsApp Group