ಕವನ

Must Read

ಭಯದ ನೆರಳಿನಲ್ಲಿ

ಅವರೇನು ಅನ್ನುವರು
ಇವರೇನು ಹೇಳುವರು
ಎನ್ನುವ ಗೊಂದಲ -ಗಡಿಬಿಡಿಯ
ಮೀರಿ ಬೆಳೆದಾಗಲೇ
ಅಲ್ಲವೇ ನಿಜವಾದ ವ್ಯಕ್ತಿತ್ವದ
ಅನಾವರಣ

ಗಡಿ -ಗಡಿಗೆ ಭಯದ ನೆರಳು
ಅಡಿ -ಅಡಿಗೆ ಸಂಕೋಚದ ಮುದ್ದೆ
ಹೇಳಲೊಲ್ಲದು ತಿಳಿಯಲೊಲ್ಲದು
ಅರಗಿಸಿಕೊಳ್ಳಲಂತೂ ದೂರದ
ಮಾತು

ಭಯವೇ ಹಾಗೆ
ಹೇಳದೆ ಕೇಳದೆ ಧುತ್ತೆಂದು
ಆವರಿಸಿಕೊಂಡು
ಇಲ್ಲದ ಸಲ್ಲದ ವಿಚಾರದಿಂದ
ಬಳಲಿಸುತ್ತದೆ
ವಿವರಿಸಲಾರದ ಸನ್ನಿವೇಶ
ತಂದಿಡುತ್ತದೆ

ನಿನ್ನ ನೀನು ಅರಿತಾಗ
ನಿನ್ನದೇ ಶಕ್ತಿ ನಿನಗೆ
ಗೊತ್ತಾದಾಗ
ಎಲ್ಲರ ಹಂಗು ತೊರೆದು
ಬದುಕಲು ಕಲಿತಾಗ
ಭಯ ಅಂದ್ರೆ ಏನು
ಎಂದು ಕೇಳುವಂತಾಗುತ್ತದೆ
ಆಗಲೇ ಸತ್ಯದ ಅನಾವರಣ
ವ್ಯಕ್ತಿತ್ವದ ನಿಜಾವರಣ

ಸುಧಾ ಪಾಟೀಲ
ಬೆಳಗಾವಿ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group