ಚುಟುಕುಗಳು

Must Read

ಸ್ಮರಣೆ

ಬಾವುಟ ಹಾರಿಸಿದ
ಮಂತ್ರಿಗಳು ಮಾಡಿದರು
‘ಗಾಂಧಿ ಸ್ಮರಣೆ ‘
ಎದುರು ರಸ್ತೆಯ ಬಾರೊಂದರಲಿ
ನಡೆದಿತ್ತು…
ಭರ್ಜರಿ ಸೇಂದಿ ಸ್ಮರಣೆ…

ಹುಚ್ಚ

ಬಟ್ಟೆ ಗಂಟುಗಳ
ಹಿಮಾಲಯ ಪರ್ವತ
ಮೆದುಳ ತುಂಬಾ
ಥಕ ದಿಂ-ಥಕ ದಿಂ
ಭಾವಗಳ ಭರತನಾಟ್ಯ,
ಶೃತಿಯಿಲ್ಲದ ಗಾನ
ಹಾಡುವ ಆತ ದಿನವೂ
ರಸ್ತೆಯ ಅಂಚಿನಲ್ಲಿ
ಹುಡುಕುತ್ತಿದ್ದಾನೆ
ಬೆಂಕಿ ಅಪಘಾತದಲ್ಲಿ
ಭಸ್ಮವಾದ…
ತನ್ನ ಹೆಂಡತಿ-ಮಕ್ಕಳನ್ನು!!!
ರಾತ್ರಿ-ಹಗಲೆನ್ನದೆ
ಮಳೆ-ಚಳಿ-ಗಾಳಿಗಳ ಮಧ್ಯೆ…

ಅಚ್ಚರಿ..ಅಚ್ಚರಿ

ಯುವಶಕ್ತಿ ಸಿಡಿದೇಳಬೇಕು
ಎಂಬ ಕರೆ ಕೇಳಿ
ನಮ್ಮೂರ ಯುವಕರು ಸಿಡಿದೆದ್ದು,
ಬಾರಿಗೆ ನುಗ್ಗಿ ‘ಗುಂಡು’ಹಾಕಿ
ಊರೊಳಗೆ ನುಗ್ಗಿ
ರಾತ್ರೋರಾತ್ರಿ
ಹಲವರ ತೆಂಗು-,ಮಾವು
ತೋಟಗಳಿಗೆ ನುಗ್ಗಿ,
ಮರಗಳಿಗೆ ಲಗ್ಗೆ ಹಾಕಿ
ರಸದೌತಣ ಮಾಡಿದರು…

ಡಾ.ಭೇರ್ಯ ರಾಮಕುಮಾರ್,
ಸಾಹಿತಿಗಳು, ಪತ್ರಕರ್ತರು
ಮೊ:94496 80583
63631 72368

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group