Monthly Archives: December, 2020

ಗಝಲ್

ಚಾರುಹಾಸದ ರಾಣಿಗಾಗಿ ಬೀದಿಯಲ್ಲಿ ಸುಮವನ್ನು ಹಾಸುವೆನು ಸಖಿ ಜಾರುತಿರುವ ಹಿಮಮಣಿಯ ಪೋಣಿಸಿ ಕೊರಳಿಗೆ ಹಾಕುವೆನು ಸಖಿ ಅರಳಿದ ಪುಷ್ಪಗಳ ಸುಗಂಧವನು ಅರಸಿ ಆರಿಸಿ ತರುವೆನು ಹರಳಿನ ಬೆಟ್ಟದಲಿ ಚೆಂಬವಳವನು ಶೋಧಿಸಿ ತರುವೆನು ಸಖಿ ಕನ್ನಿಕೆಯ ಚುಬುಕಕ್ಕೆ ಢಾಳಕಾಂತಿಯ ಗೌರವರ್ಣವು ನೀಡುತಿದೆ ಚೆನ್ನಿಕೆಯ ಹೆರಳಿಗೆ ಮುಡಿಸಲು ಮಲ್ಲಿಗೆ ಮಾಲೆಯ ಇಡುವೆನು ಸಖಿ ದ್ಯುಮಣಿಯ ಬೆಳಕನ್ನು ಗೊತ್ತಿಲ್ಲದೆ ಕದ್ದಿರುವ ಸಾದ್ವಿಶಿರೋಮಣಿ ರಮಣನನು ನೋಟದಲ್ಲಿ ಗೆದ್ದಿರುವ ಚೆಲುವೆಯ ಅಪ್ಪುವೆನು ಸಖಿ ತೋಳಿನಲಿ ಬಲವಾಗಿ ಹಿಡಿದಿಟ್ಟು ಕೋಮಲೆಯ ಚುಂಬಿಸುವೆ ಪೌಳಿಯಲಿ ಅಭಿನವನ ಆಗಮನಕೆ ಅಹರ್ನಿಶಿ ಕಾಯುವೆನು ಸಖಿ ಶಂಕರಾನಂದ...

ಯಾವುದು ಅದೃಷ್ಟ ?

ಆಧ್ಯಾತ್ಮಿಕವಾಗಿ ಚಿಂತನೆ ನಡೆಸಿದರೆ, ನಮಗೆ ಸರ್ಕಾರಿ ಕೆಲಸ ಸಿಕ್ಕಿದ್ದರೆ ಅದೃಷ್ಟವೋ? ಅಥವಾ ಖಾಸಗಿ ಕೆಲಸಮಾಡುತ್ತಿದ್ದರೆ ಅದೃಷ್ಟ ವೋ ತಿಳಿಯಬೇಕಿದೆ. ಇಲ್ಲಿ ಸರ್ಕಾರದ ಕೆಲಸ ದೇವರ ಕೆಲಸ. ಹಾಗೆ ಕಾಯಕವೆಕೈಲಾಸ ಎನ್ನುವ ಪ್ರಕಾರ, ನಾವು ಕೆಲಸವನ್ನು ಯಾವರೀತಿಯಲ್ಲಿ ಮಾಡುತ್ತೇವೆ,ಯಾರ ಪರವಾಗಿ ಮಾಡುತ್ತೇವೆ, ಯಾವ ಭೂಮಿಯಲ್ಲಿ ಮಾಡುತ್ತೇವೆ. ಯಾರಿಗಾಗಿ ಮಾಡುತ್ತೇವೆ, ಯಾರ ಸಹಕಾರದಲ್ಲಿ ಮಾಡುತ್ತೇವೆ, ಯಾರು ಮಾಡಿಸುತ್ತಿರುವುದು, ಯಾಕೆ...

ಕಾರ್ತಿಕಮಾಸ+ಸೋಮವಾರ+ಛಟ್ಟಿ ಅಮಾವಾಸ್ಯೆ

ತ್ರಿವಳಿ ಸಂಗಮದ ಮಹಾ ಪುಣ್ಯದಿನ ‌ಮಾಸಗಳಲ್ಲಿ ಅತ್ಯಂತ ಶ್ರೇಷ್ಠ ಮಾಸವೆಂದರೆ ಅದು ಕಾರ್ತಿಕ ಮಾಸವಂತೆ. ನ ಕಾರ್ತಿಕ ಸಮೋ ಮಾಸ: ಎಂದು ವೇದ ಮತ್ತು ಶಾಸ್ತ್ರಗಳು ಕಾರ್ತಿಕ ಮಾಸವನ್ನು ಕೊಂಡಾಡಿವೆ. ಸ್ವಯಂ ಶಂಭುವೇ ಕಾರ್ತಿಕ ಮಾಸದ ಅಧಿಪತಿಯಾಗಿದ್ದಾನೆ. ಶಿವನಿಗೆ ಅತ್ಯಂತ ಪ್ರೀತಿಯ ಮಾಸ ಅಂದರೆ ಅದು ಕಾರ್ತಿಕ ಮಾಸ. ಶಿವನಿಗೆ ಅತ್ಯಂತ ಪ್ರೀತಿಯ ದಿನವೆಂದರೆ ಸೋಮವಾರ. ಹಾಗೆಯೇ...

ಕವನ: ಅಪ್ಪ

ಅಪ್ಪ ಅಪ್ಪನ ಚಿತ್ರವನ್ನೊಮ್ಮೆ ನೋಡಿದೆ ಅಲ್ಲಿಲ್ಲ ಅಪ್ಪ ಯಾಕೋ ಬೇಗ ಹೋಗಿ ಬಿಟ್ಟ ಕೇಳಲೆಂದು ಬಂದೆ ಯಾಕೋ ಮಾತಾಡಲಿಲ್ಲ ಯಾಕೆಂದೆ ಸುಮ್ಮನಾಗಿ ಬಿಟ್ಟ ಅಪ್ಪ ಅಮ್ಮನೊಂದಿಗೆ ಹೆಗಲು ಕೊಟ್ಟ ಅಪ್ಪ ಎತ್ತಾಗಿ ದುಡಿದು ದಣಿದು ಬಿಟ್ಟ ಅಪ್ಪ ಬೆವರು ಹನಿ ಭೂಮಿ ನುಂಗಿ ಸುಮ್ಮನಿತ್ತು ಅಪ್ಪ ಅತ್ತಿದ್ದ ಆಕಾಶ ನೀಲಿಯಾಗಿತ್ತು ಅಪ್ಪ ತಾನೋಡದ ಜಗವ ನಾನು ನೋಡಲೆಂದು ಹೆಗಲ ಮೇಲೆ ಹತ್ತಿಸಿದ ನಾನು ನೋಡಿದೆ ಅವ ಸಂತಸ ಪಟ್ಟ ಯಾಕೆ ಬೇಗ...

ಕತೆ: ನಿನ್ನ ಮಹಿಮೆ ಅಪಾರವಾದದ್ದೋ…….!!

ಅಂದು ಮಧ್ಯರಾತ್ರಿ ಸಮೀಪಿಸುತ್ತಿತ್ತು.ಮನೆ, ಅ ಕ್ಕ -ಪಕ್ಕ ಸ್ತಬ್ದವಾಗಿತ್ತು ಹೊರಗೆ ಬಯಲು ಕಪ್ಪು ಕತ್ತಲ ಸೆರಗಿನಲ್ಲಿ ಮೋಹಕವಾಗಿತ್ತು. ಅವಿರತಳಿಗೆ ಹಗಲು ಹೊತ್ತಿದ ಹುರುಪು. ಅವಳು ತನ್ನ ಸಂಘದವರು ಏನೇನು ಮೆಸ್ಸೆಜ ಕಳಿಸ್ಯಾರ ನೋಡೊಣ ಎಂದು ಮೊಬೈಲ್ ಓಪನ ಮಾಡಿ ವ್ಯಾಟ್ಸಾಪ ಮೆಸ್ಸೇಜುಗಳನ್ನು ಒಂದೊಂದೇ ಓದತೊಡಗಿದಳು. ಕೊನೆಯಲ್ಲಿ ಅಪರಿಚಿತ ನಂಬರೊಂದು ಅವಳ ಮೊಬೈಲಿಗೆ ಅಪ್ಲೋಡ ಆಗಿತ್ತು.ಅವಳು ಅದನ್ನು ನೋಡುತ್ತಿದ್ದಂತೆ...

ಸಂಬಳ ಕೊಡದ ಐಫೋನ್‌ ಕಂಪನಿಗೇ ಬೆಂಕಿ ಹಚ್ಚಿದ ಕಾರ್ಮಿಕರು

ವೇತನ ನೀಡದೇ ಇರುವ ಕಾರಣಕ್ಕಾಗಿ ದೇಶದ ಮೊದಲ ಐಫೋನ್ ಕಂಪನಿಗೆ ಕಾರ್ಮಿಕರು ಬೆಂಕಿ ಹಚ್ಚಿದ್ದು ಕಾರು, ಕಂಪ್ಯೂಟರ್ ಒಳಗೊಂಡಂತೆ ಸುಮಾರು ೫೦ ಕೋಟಿ ರೂ.ಗಿಂತ ಹೆಚ್ಚು ಹಾನಿಯಾಗಿದೆ. ಕೇವಲ ಎರಡು ವರ್ಷಗಳ ಹಿಂದೆ ಭಾರತದಲ್ಲಿ ಆರಂಭವಾದ ವಿಸ್ಟ್ರಾನ್ ಎಂಬ ಕಂಪನಿಯು ಪ್ರಖ್ಯಾತ ಐಫೋನ್‌ ಮೊಬೈಲ್ ಗಳ ಬಿಡಿ ಭಾಗಗಳನ್ನು ತಯಾರಿಸುತ್ತಿತ್ತು. ಆದರೆ ಕಾರ್ಮಿಕರಿಗೆ ೪ ತಿಂಗಳಿನಿಂದ...

ಗಝಲ್

ಗಝಲ್ ವರುಷ ದಾಟಿದೆ ಹೃದಯವ ಅರಿಯುತ ಜಸವ ಪಡೆದೆಯಲ್ಲ ನೀನು| ಹರುಷ ತುಂಬುತ ಬಯಸಿದ ಮನೆಯ ಹೊಸ್ತಿಲು ತುಳಿದೆಯಲ್ಲ ನೀನು|| ಋಣದ ಬಂಧವದು ಪ್ರೀತಿಯ ಬೆಸೆದಿದೆ ಕಳವಳವ ದೂರವಿರಿಸಿದೆ| ಮೀನಮೇಷ ಎಣಿಸದೆ ಮನದಿ ಧಾವಿಸಿ ಎದೆಯಲಿ ಕುಣಿದೆಯಲ್ಲ ನೀನು|| ಕನಸಿನ ಕನ್ಯೆಯಾಗಿ ಮೋಹದಲಿ ಅಪ್ಪುತ ತನುಮನವ ಆವರಿಸಿದೆ| ನೆನೆಪಿನ ಸುರಿಮಳೆ ಸುರಿಸುತ ಮೋದದೊಳು ನಯನದಿ ಸೆಳೆದೆಯಲ್ಲ ನೀನು|| ರಾಗದಲಿ ತಾಳವಾಗಿ ಲಯದಿ ಸರಿಗಮ ಹಾಡುತಲಿ ನಿಂತಿರುವೆ| ಭೋಗದಲಿ ವೈಭವವ ಚೂತವನ ರಸವನು ಸವಿಯುತ ಇರುವೆಯಲ್ಲ ನೀನು|| ಹಸೆಮಣೆಯ ಏರುತ...

ಕವನ: ಹೆಣ್ಣು

ಹೆಣ್ಣು ಹೆಣ್ಣು ದೇವರೆನ್ನುವರು ತನ್ನ ಹೆಂಡತಿಯ ಗರ್ಭದಲ್ಲಿ ಹೆಣ್ಣು ಜನಿಸಿದರೆ ಆಸ್ಪತ್ರೆಯಲ್ಲಿ ಹಣಕೊಟ್ಟು ಕೊಲ್ಲಿಸುವರು ನಿಮ್ಮ ತಾಯಿ ಹೆಣ್ಣು ನಿಮ್ಮ ಅಕ್ಕ ತಂಗಿ ಹೆಣ್ಣು ನಿಮ್ಮ ಹೆಂಡತಿಯಾಗಿ ಬಂದವಳು ಹೆಣ್ಣು ನಿಮ್ಮ ಮಗಳಾಗಿ ಏಕೆ ಬೇಡ ಹೆಣ್ಣು ಮುಂದೊಂದು ದಿನ ಹೆಣ್ಣಿಗಾಗಿ ಯುದ್ದವಾದರು ತಪ್ಪೆನಿಲ್ಲ ಹೆಣ್ಣು ಮಗುವನ್ನು ಗರ್ಭದಲ್ಲಿ ಕೊಲ್ಲಿಸಿದರೆ ಶಿಕ್ಷೆ ನಿನಗೆ ತಪ್ಪಿದಲ್ಲ ಹೆಣ್ಣು ಮಗುವನ್ನು ರಕ್ಷಿಸಿ ಹೆಣ್ಣು ಭ್ರೂಣಹತ್ಯೆ ನಿಲ್ಲಿಸಿ ಹೆಣ್ಣೋಂದು ಕಲಿತರೆ ಶಾಲೆಯೊಂದು ತೆರೆದಂತೆ ರಾಹುಲ್ ಸರೋದೆ

ಬಸವಣ್ಣನ ಕಾಲದ ಗೌಪ್ಯ ವಚನಕಾರ್ತಿಯರು..!

ವಚನ ಸಾಹಿತ್ಯದಲ್ಲಿ ಬಸವಯುಗದ ವಚನಕಾರ್ತಿಯರಂತೆ ಕೊಡುಗೆಯಿತ್ತವರನ್ನು ಬಹುಶ: ಯಾವ ಶತಮಾನವೂ ಕಂಡಿರಲಿಲ್ಲ. ಈ ಕಾಲಘಟ್ಟದಲ್ಲಿ ಹಲವಾರು ಶರಣೆಯರು ಮುಕ್ತ ಮನಸ್ಸಿನಿಂದ ವಚನಗಳನ್ನು ರಚಿಸಿರುವುದನ್ನು ಯಾರು ಹೆಚ್ಚಾಗಿ ಪ್ರಚುರ ಪಡಿಸದೆ ಇರುವುದು ಅಚ್ಚರಿ ಯನ್ನುಂಟು ಮಾಡುತ್ತದೆ. ಇಂತಹವರನ್ನು 'ಅಪ್ರಸಿದ್ದ ಶರಣೆಯರು/ವಚನಕಾರ್ತಿಯರು' ಅಥವಾ 'ಗೌಪ್ಯವಚನಕಾರ್ತಿಯರೆಂದು 'ಕರೆಯ ಬಹುದಾಗಿದೆ. ವಚನಯುಗವು ಮಹಿಳೆಯರ ಆಂತರ್ಯದಲ್ಲಿ ನವ ಜಾಗೃತಿ, ನವಸಾಕ್ಷರತೆಯ ಅರಿವು ಮೂಡಿಸಿ,...

ಕಥೆ: ಅನುಭವ

(ಈ ಅನುಭವ ನಿಮ್ಮದೂ ಆಗಿರಬಹುದು) 'ಸಾಯಿ ರಾಂ....ಅನಾಥ ಮಕ್ಕಳಿಗೆ ದಾನ ಮಾಡಿ ಸಾಯಿರಾಂ' ಹಾಡು ಗಾಳಿಯಲ್ಲಿ ತೇಲಿ ಬಂತು. ಅನಾಥಾಶ್ರಮದ ಆಟೋನೋ, ವ್ಯಾನೋ ಇನ್ನೇನು ನಮ್ಮ ರಸ್ತೆಗೆ ಬಂದೇ ಬಿಡುತ್ತೆ. ಮಗನಿಗೆ ಕೂಗಿ ಹೇಳಿದೆ. 'ಬೇಗ ಬೇಗ ವಾರ್ಡ್ರೋಬಲ್ಲಿ ಕೆಳಗಡೆ ಇಟ್ಟಿರೋ ಅಪ್ಪನ ಬಟ್ಟೆಗಳು, ನಿನ್ನ ಶಾರ್ಟ್ ಪ್ಯಾಂಟ್ ಟಿ- ಶರ್ಟುಗಳು, ಶೀತಲ್ ದು ಫ್ರಾಕ್, ಲಂಗ...
- Advertisement -spot_img

Latest News

ಮೈಸೂರು ರೋಟರಿ ಐವರಿ ಸಿಟಿ ವತಿಯಿಂದ ಮಾರ್ಗದರ್ಶಕ ಪ್ರಶಸ್ತಿ

ಮೈಸೂರು -ಮೈಸೂರು ನಗರದ ರೋಟರಿ ಐವರಿ ಸಿಟಿ ಅಫ್ ಮೈಸೂರು ವತಿಯಿಂದ ಜಯಲಕ್ಷ್ಮಿ ಪುರಂನ ಸತ್ಯ ಸಾಯಿಬಾಬಾ ಶಿಕ್ಷಣ ಸಂಸ್ಥೆಯ ಗೌರವ ಅಧ್ಯಕ್ಷರಾದ ಪ್ರೊಫೆಸರ್ ಕೆ.ಬಿ.ಪ್ರಭು...
- Advertisement -spot_img
close
error: Content is protected !!
Join WhatsApp Group