Monthly Archives: February, 2024

ಜಾರಕಿಹೊಳಿ ಸಹೋದರರ ನೇತೃತ್ವದಲ್ಲಿ ಗೋಕಾಕ ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ಎಲ್ಲ ಸ್ಥಾನಗಳಿಗೂ ಅವಿರೋಧವಾಗಿ ಆಯ್ಕೆ

ಗೋಕಾಕ: ಇಲ್ಲಿಯ ಗೋಕಾಕ ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ಆಡಳಿತ ಮಂಡಳಿಯ ಎಲ್ಲ ಸ್ಥಾನಗಳಿಗೂ ಅವಿರೋಧವಾಗಿ ಆಯ್ಕೆ ನಡೆದಿದೆ ಎಂದು ಚುನಾವಣಾ ಅಧಿಕಾರಿಯಾಗಿದ್ದ ಸಹಕಾರ ಅಭಿವೃದ್ಧಿ ಅಧಿಕಾರಿ ಬಿ.ಕೆ.ಗೋಖಲೆ ತಿಳಿಸಿದರು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ "ಅ" ವರ್ಗದಿಂದ ಸುಣಧೋಳಿಯ ಬಸಪ್ಪ ಲಕ್ಷ್ಮಪ್ಪ ಕುರಿಬಾಗಿ, ಗೊಡಚಿನಮಲ್ಕಿಯ ಮಹಾಂತೇಶ ಬಾಳಪ್ಪ ಅವರಗೋಳ, ಅರಭಾವಿಯ...

ಕೃಷಿ ಹವಾಮಾನ ಆಧಾರಿತ ವಲಯಗಳ ಅಭಿವೃದ್ದಿಯಿಂದ ಕರ್ನಾಟಕದ ಪ್ರಾದೇಶಿಕ ಬೆಳವಣಿಗೆ ಸಾದ್ಯ: ಡಾ. ಎಸ್. ವ್ಹಿ. ಹನಗೊಡಿಮಠ

ಸವದತ್ತಿ: ಉತ್ತರ ಕರ್ನಾಟಕವು ಸಾಹಿತ್ಯಿಕ, ಸಾಂಸ್ಕೃತಿಕವಾಗಿ ಶತಮಾನಗಳಿಂದಲೂ ಸಮೃದ್ದಿಯಿಂದ ಕೂಡಿದ್ದರೂ, ಕೃಷಿ ಹವಾಮಾನ ಆಧಾರಿತ ವಲಯಗಳ ಅಭಿವೃದ್ಧಿ ಆಗದಿರುವುದರಿಂದ ಇನ್ನೂ ಹಿಂದುಳಿದಿದೆ ಎಂದು ಧಾರವಾಡ ಸಿ.ಎಮ್.ಡಿ. ಆರ್. ಸಂಸ್ಥೆಯ ಸಹ ಪ್ರಾಧ್ಯಾಪಕರಾದ ಡಾ. ಎಸ್. ವ್ಹಿ. ಹನಗೊಡಿಮಠ ನುಡಿದರು. ಅವರು ಪಟ್ಟಣದ ಕೆ.ಎಲ್.ಇ.ಸಂಸ್ಥೆಯ ಎಸ್.ವಿ.ಎಸ್.ಬೆಳ್ಳುಬ್ಬಿ ಮಹಾವಿದ್ಯಾಲಯದ ಅರ್ಥಶಾಸ್ತ್ರ ವಿಭಾಗವು ಏರ್ಪಡಿಸಿದ ಕರ್ನಾಟಕದಲ್ಲಿ ಪ್ರಾದೇಶಿಕ ಅಸಮತೋಲನ ಹಾಗೂ...

ಲೋಕ ದೃಷ್ಡಿ ಕಲಾ ಸೃಷ್ಟಿ

ಕಲೆಯು ಮಾನವನ ಹುಟ್ಟಿನೊಂದಿಗೆ ದೈವದತ್ತವಾಗಿ ಬೆಳೆದು ಬಂದ ಚಮತ್ಕಾರವಾಗಿದೆ. ಒಂದು ಕಾಲದ ಸಂಸ್ಕೃತಿಯಿಂದ ಇನ್ನೊಂದು ಕಾಲದ ಸಂಸ್ಕೃತಿಗೆ ಸಂಬಂಧವನ್ನು ಜೋಡಿಸುವ ಸಂಪರ್ಕ ಸಾಧನೆಯಾಗಿರುವ ಭಾಷೆಯಂತೆ ಕಲೆಯೂ ಸಂಪರ್ಕ ಮಾಧ್ಯಮವಾಗಿದೆ. ವಿಶ್ವದ ಮೊಟ್ಟಮೊದಲ ಚಿತ್ರಕಾರನು ಆದಿಮಾನವನು. ಅದೆಷ್ಟೋ ಕಾಲದವರೆಗೆ ಚಿತ್ರವೇ ಆದಿ ಮಾನವನ ಭಾಷೆಯಾಗಿತ್ತು ಎಂಬುದಕ್ಕೆ ಚೀನಾ, ಜಪಾನ್, ಗ್ರೀಸ್, ಈಜಿಪ್ಟ್ ಹಾಗೂ ಸಿಂಧೂ ಸಂಸ್ಕೃತಿಗಳ...

ಶರಣರ ಶಿವಯೋಗದ ಪರಿಕಲ್ಪನೆ ವೈಜ್ಞಾನಿಕ ಮತ್ತು ವೈಶಿಷ್ಟ ಪೂರ್ಣವಾದದ್ದು — ತಪೋವನದ ಅನುಭಾವಿ ಶರಣ ಸತೀಶ ಸವದಿ ಅಭಿಮತ

ಬೆಳಗಾವಿಯ ಮಹಾಂತೇಶ ನಗರದ ಹಳಕಟ್ಟಿ ಭವನದಲ್ಲಿ  18-02-2024 ರಂದು ನಡೆದ ವಾರದ ಸತ್ಸಂಗ ಸಮಾವೇಶದಲ್ಲಿ ಮಾತನಾಡಿದ ಧಾರವಾಡದ ಅನುಭಾವಿಗಳಾದ ಸತೀಶ್ ಸವದಿ ಅವರು ತಮ್ಮ ಅನುಭವದ ನುಡಿಗಳಲ್ಲಿ, ಶರಣರು ತಮ್ಮ ವಚನಗಳಲ್ಲಿ ಶಿವಯೋಗ ಸಾಧನೆಯ ಸ್ವಾನುಭವಗಳನ್ನು ತೆರೆದಿಟ್ಟಿದ್ದಾರೆ ಎಂಬುದನ್ನು ತಿಳಿಸಿದರು. ಅದರಲ್ಲೂ ಧಾರವಾಡದ ತಪೋವನದ ಕುಮಾರಸ್ವಾಮಿಯವರ ಬದುಕು ಮತ್ತು  ಬರಹ ಪೂರ್ಣವಾಗಿ ಶಿವಯೋಗಕ್ಕೆ ಮೀಸಲಾಗಿತ್ತು. ಸಾಧಕರಾಗಿ...

ಹೊಸಪುಸ್ತಕ: ಸಂಕೀರ್ಣ ಬಳ್ಳಾರಿ

ಪುಸ್ತಕದ ಹೆಸರು : ಸಂಕೀರ್ಣ ಬಳ್ಳಾರಿ ಲೇಖಕರು : ಡಾ. ಮೃತ್ಯುಂಜಯ ರುಮಾಲೆ ಪ್ರಕಾಶಕರು : ದಾಸೋಹಿ ಪ್ರಕಾಶನ, ಶ್ರೀ ಶರಣ ಬಸವೇಶ್ವರ ದಾಸೋಹ ಮಠ, ಕಾನಾಮಡಗು (ಕೂಡ್ಲಿಗಿ ತಾಲೂಕು) ೨೦೨೩ ಪುಟ : ೪೨೪ ಬೆಲೆ : ರೂ. ೪೫೦ (ಸಂಪರ್ಕವಾಣಿ : ೮೬೧೮೨೮೮೨೯೯)  ಡಾ. ಮೃತ್ಯುಂಜಯ ರುಮಾಲೆ ಅವರು ನಮ್ಮ ನಾಡು ಕಂಡ ಬಹುಶ್ರುತ ವಿದ್ವಾಂಸರಲ್ಲಿ ಒಬ್ಬರು. ಸಂಶೋಧನೆ,...

ಅಖಿಲ ಕರ್ನಾಟಕ ಶಿಕ್ಷಕರ ಸಮ್ಮೇಳನ ಹಾಗೂ ವೈ. ಬಿ. ಕಡಕೋಳ ರ ಕೃತಿ ಲೋಕಾರ್ಪಣೆ

ಧಾರವಾಡ: ರವಿವಾರ ಬೆಳಿಗ್ಗೆ 9.30 ಕ್ಕೆ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಡಾ, ಪಾಟೀಲ ಪುಟ್ಟಪ್ಪ ಸಭಾಂಗಣದಲ್ಲಿ, ಚೇತನ ಫೌಂಡೇಶನ್ ಕರ್ನಾಟಕ ವತಿಯಿಂದ ಅಖಿಲ ಕರ್ನಾಟಕ ಶಿಕ್ಷಕರ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದು ಫೌಂಡೇಶನ್ ನ ಅಧ್ಯಕ್ಷರಾದ ಚಂದ್ರಶೇಖರ ಮಾಡಲಗೇರಿ ಹೇಳಿದರು. ಧಾರವಾಡದ ಜರ್ನಲಿಸ್ಟ ಗಿಲ್ಡನಲ್ಲಿ  ಮಾದ್ಯಮ ಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಇದೇ ಸಂದರ್ಭದಲ್ಲಿ ಶಿಕ್ಷಕ ಸಾಹಿತಿ...

ಯಲಗುಂದ ಗ್ರಾಮದ ಶ್ರೀ ಈಶ್ವರ ದೇವಾಲಯ ಪುನರ್ ನಿರ್ಮಾಣ

ನಾಯಕರಹಳ್ಳಿ ಮಂಜೇಗೌಡರು ವೈ,ಹೆಚ್.ಈಶ್ವರ್ ಅವರ ನಂಬರ್ ಕಳಿಸಿದ್ದರು. ಈಶ್ವರ್ ಯಲಗುಂದ ಗ್ರಾಮದವರು. ಈ ಹಿಂದೆ ಮಂಜೇಗೌಡರು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಯಲಗುಂದ ಗ್ರಾಮದಲ್ಲಿ ದಿನಾಂಕ 27,28 ಫೆಬ್ರುವರಿ 2018ರ ಎರಡು ದಿನಗಳು ಈ ಯಲಗುಂದ ಗ್ರಾಮದಲ್ಲಿ ಹಾಸನ ತಾಲ್ಲೂಕು 5ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿತ್ತು. ಸಮ್ಮೇಳನಾಧ್ಯಕ್ಷತೆಯ ಗೌರವ ನನಗೆ (ಗೊರೂರು...

ಮಾದರಿ ಕರ್ನಾಟಕದ ಹೊಸ ಹೆಜ್ಜೆಯ  ಬಜೆಟ್ – ಅಶೋಕ ಮನಗೂಳಿ

ಸಿಂದಗಿ- ಈ ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿದ ಬಜೆಟ್ ರಾಜ್ಯದ ಜನತೆಗೆ ತೃಪ್ತಿ ತಂದಿದೆ. ಇದೊಂದು ಕರ್ನಾಟಕದ ಮಾದರಿ ಅಭಿವೃದ್ದಿಯ ಹೊಸ ಹೆಜ್ಜೆಯ ಬಜೆಟ್ ಆಗಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು. ನಮ್ಮ ತಂದೆ ದಿ.ಎಂ.ಸಿ.ಮನಗೂಳಿ ಅವರ ಕನಸಿನ ಕೂಸಾಗಿರುವ ಆಲಮೇಲದಲ್ಲಿ ತೋಟಗಾರಿಕೆ ಮಹಾವಿದ್ಯಾಲಯವು ಇಂದಿನ ಬಜೆಟ್ ನಲ್ಲಿ ಘೋಷಣೆಯಾಗಿದೆ. ಇದು ನಮ್ಮ ತಾಲೂಕಿನ...

ಗುರಿ ಸಾಧನೆಗೆ ಯೋಗ್ಯ ಗುರು ಅವಶ್ಯ – ಡಾ. ಗೌತಮ್ ವಗ್ಗರ್

ಸಿಂದಗಿ: ನಮ್ಮ ಜೀವನದ ಗುರಿ ಸಾಧನೆಗೆ ಯೋಗ್ಯ ಗುರುಗಳ ಅವಶ್ಯವಿದೆ. ಗುರುಗಳ ಸೂಕ್ತ ಮಾರ್ಗದರ್ಶನದಲ್ಲಿ ನಾವು ಗುರಿ ಮುಟ್ಟಲು ಸಾಧ್ಯವೆಂದು ವಿಜಯಪುರದ ಆರೋಗ್ಯ ಧಾಮದ ಹೃದಯ ರೋಗ ತಜ್ಞ ಡಾ. ಗೌತಮ್ ವಗ್ಗರ್ ಹೇಳಿದರು. ಅವರು ಬಂದಾಳ ರಸ್ತೆಯಲ್ಲಿರುವ ವಿವೇಕ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ ನಡೆದ ‘ವಿವೇಕ ಸಿರಿ ಸಂಭ್ರಮ‘ದ ಮುಖ್ಯ ಅತಿಥಿಗಳಾಗಿ...

ವಿದ್ಯಾ ಚೇತನ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕ ಕಲರವ

ಸಿಂದಗಿ: ವಿದ್ಯಾಚೇತನ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವವನ್ನು 'ವಾರ್ಷಿಕ ಕಲರವ 2K24' ಶಿರೋನಾಮೆ ಅಡಿಯಲ್ಲಿ ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾಕ್ಟರ್ ಚನ್ನಪ್ಪ ಕಟ್ಟಿ ಹಿರಿಯ ಸಾಹಿತಿಗಳು ಸಿಂದಗಿ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಶಿಕ್ಷಣ ಸಂಸ್ಥೆಯನ್ನು ನಡೆಸುವುದು ಶಿಕ್ಷಣದ ಸೇವೆಯಾಗಬೇಕು ವ್ಯಾಪಾರವಾಗಬಾರದು ಮಕ್ಕಳಲ್ಲಿರುವ ಸೂಕ್ತ ಪ್ರತಿಭೆಯನ್ನು ಹೊರ ತರುವ ನೈತಿಕ ಸಾಮಾಜಿಕ ಮತ್ತು ಭಾವೈಕ್ಯತೆಯನ್ನು...
- Advertisement -spot_img

Latest News

10 ನೆಯ ತರಗತಿ ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿ ಧೈರ್ಯ ನೀಡಿದ ತಾಲೂಕಾಧಿಕಾರಿಗಳು

ಮೂಡಲಗಿ:- ಮಾರ್ಚ್ ನಲ್ಲಿ ನಡೆಯುವ 10 ನೆಯ ತರಗತಿ ವಿದ್ಯಾರ್ಥಿಗಳ ಪರೀಕ್ಷೆ, ಅದರ ಪೂರ್ವ ತಯಾರಿ ನಡೆಸುತ್ತಿರುವ ತಾಲೂಕಾ ಅಧಿಕಾರಿಗಳು ಪೂರ್ವಭಾವಿಯಾಗಿ ವಿದ್ಯಾರ್ಥಿಗಳ ಮನೆಗೆ ಭೇಟಿ...
- Advertisement -spot_img
close
error: Content is protected !!
Join WhatsApp Group