Monthly Archives: August, 2024
ಕವನ
ಕವನ : ಎಲ್ಲಿ ಇರುವೆ ?
ಎಲ್ಲಿ ಇರುವೆ ?ಎಲ್ಲಿ ಇರುವೆ ?
ಪಾರಿಜಾತವೇ
ಗಗನ ಕುಸುಮ
ಸ್ನೇಹ ಪ್ರೇಮವೇಎಲ್ಲಿ ಇದ್ದೆ
ಕೊಳದ ತಾವರೆ
ಮುಳ್ಳು ಮುತ್ತಿದ
ಕೆಂಗುಲಾಬಿಯೇಮನದ ಬಯಕೆ
ಮುರುಗ ಮಲ್ಲಿಗೆ
ಪ್ರೀತಿ ಪಯಣಕೆ
ಹೆಜ್ಜೆ ಮೆಲ್ಲಗೆ .ಜಾಜಿ ಕನಕ
ಕಂಪು ಸಂಪಿಗೆ
ಮಧುರ ಬದುಕಿನ
ಸೊಂಪಿಗೆಗೆಳತಿ ನೀನು
ಭಾವ ಭಾಷೆ
ನನ್ನ ಕಾವ್ಯದ
ಮುಗ್ಧ ಪದಗಳೇಬನ್ನಿ ಭಾವಗಳೆ
ಕವನ ಲಹರಿ
ಒಲವು ಕಟ್ಟುವ
ಬಾಳ ಗೂಡಿಗೆ
-------------------------
ಡಾ. ಶಶಿಕಾಂತ ಪಟ್ಟಣ ಪುಣೆ
ಸುದ್ದಿಗಳು
ದಿಟ್ಟ ಸಂಶೋಧಕ ಡಾ. ಎಂ. ಎಂ. ಕಲ್ಬುರ್ಗಿ – ಸ್ಮರಣೆ
ಡಾಕ್ಟರ್ ಎಂ ಎಂ ಕಲಬುರ್ಗಿ ಅವರು ಕರ್ನಾಟಕದ ಪ್ರಸಿದ್ಧ ವಿದ್ವಾಂಸರಲ್ಲಿ ಒಬ್ಬರು. ಅವರ ಅಧ್ಯಯನ ಮತ್ತು ಕೊಡುಗೆಗಳು, ಶಾಸನ ಶಾಸ್ತ್ರ, ಸಾಹಿತ್ಯ ಚರಿತ್ರೆ, ಛಂದಸ್ಸು, ಇತಿಹಾಸ, ವಾಸ್ತುಶಿಲ್ಪ, ಗ್ರಂಥ ಸಂಪಾದನೆ, ಹಸ್ತ ಪ್ರತಿ ಶಾಸ್ತ್ರ, ಜಾನಪದ, ಸ್ಥಳನಾಮಗಳ ಅಧ್ಯಯನ, ಸಾಹಿತ್ಯ ವಿಮರ್ಶೆ ಮುಂತಾದ ಹತ್ತು ಹಲವು ಕ್ಷೇತ್ರಗಳಲ್ಲಿ ಹರಡಿಕೊಂಡಿವೆ. ಇದೆಲ್ಲದರ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ಅಧ್ಯಯನದ...
ಸುದ್ದಿಗಳು
ಸೆ.೧ರಂದು ಡಾ.ನೀ.ಗೂ.ರಮೇಶ್ರವರ ‘ಜಲ ಸಂವೇದನೆ’ ಕೃತಿ ಬಿಡುಗಡೆ
ಮೈಸೂರು -ಮೈಸೂರಿನ ಕನ್ನಡ ಸಾಹಿತ್ಯ ಪರಿಷತ್, ಕರ್ನಾಟಕ ಸಂಘ, ಮಂಡ್ಯ ಹಾಗೂ ಲಗೋರಿ ಬಳಗ, ಮೈಸೂರು ಇವರ ವತಿಯಿಂದ ಸಾಹಿತಿ ಡಾ.ನೀ.ಗೂ.ರಮೇಶ್ರವರ ಹೊಸಗನ್ನಡ ಕಾವ್ಯ ‘ಜಲ ಸಂವೇದನೆ’ ಪುಸ್ತಕ ಲೋಕಾರ್ಪಣೆಯು ಸೆ.೧ರಂದು ಭಾನುವಾರ ಸಂಜೆ ೪.೩೦ಕ್ಕೆ ವಿಜಯನಗರ ಕನ್ನಡ ಸಾಹಿತ್ಯ ಪರಿಷತ್ ಆವರಣದಲ್ಲಿ ನಡೆಯಲಿದೆ.ಕಾರ್ಯಕ್ರಮದಲ್ಲಿ ಪುಸ್ತಕವನ್ನು ಲೋಕಾರ್ಪಣೆ ಮಾಡುವವರು ಪ್ರಸಿದ್ಧ ವಿಮರ್ಶಕರಾದ ಪ್ರೊ.ಓ.ಎಲ್.ನಾಗಭೂಷಣಸ್ವಾಮಿ. ಕಾರ್ಯಕ್ರಮದ...
ಸುದ್ದಿಗಳು
ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಾಹಕರುಗಳಿಗೆ ವಿಶೇಷ ತರಬೇತಿ ಶಿಬಿರ ಉದ್ಘಾಟನೆ
ಮೂಡಲಗಿ: ಸಹಕಾರ ಸಂಘಗಳು ಜನರಿಂದ ಠೇವಣಿ ಸಂಗ್ರಹಿಸಿ ಕಾರ್ಯನಿರ್ವಹಿಸುವ ಸಂಸ್ಥೆಗಳಾಗಿದ್ದು, ಎಂದಿಗೂ ಠೇವಣಿದಾರರ ವಿಶ್ವಾಸ ಕಳೆದುಕೊಳ್ಳಬಾರದು ಮತ್ತು ಪತ್ತಿನ ಸಹಕಾರ ಸಂಘಗಳು ಪ್ರಸ್ತುತ ದಿನಗಳಲ್ಲಿ ಬಹಳ ಜಾಗೃತದಿಂದ ಕಾರ್ಯನಿರ್ವಹಿಸ ಬೇಕಾಗಿದೆ ಎಂದು ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಹೇಳಿದರು.ಅವರು ಪಟ್ಟಣ ಬಸವೇಶ್ವರ ಅರ್ಬನ್ ಸೊಸೈಟಿಯ ಸಭಾ ಭವನದಲ್ಲಿ ಸಹಕಾರ ಇಲಾಖೆ, ಕರ್ನಾಟಕ ರಾಜ್ಯ ಸಹಕಾರ...
ಸುದ್ದಿಗಳು
ಸೆ.೨ ಮತ್ತು೩ ರಂದು ಪ್ರವಚನ ಮಂಗಲೋತ್ಸವ
ಮೂಡಲಗಿ: ತಾಲೂಕಿನ ಅರಳಿಮಟ್ಟಿ ಗ್ರಾಮದಲ್ಲಿ ಶ್ರಾವಣ ಮಾಸದ ನಿಮಿತ್ತವಾಗಿ ಒಂದು ತಿಂಗಳ ಕಾಲ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಕಳೆದ ೨೪ ವರ್ಷಗಳಿಂದ ಪ್ರತಿವರ್ಷ ಜರುಗುತ್ತಿರುವ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದ ಮಂಗಲೋತ್ಸವ ಕಾರ್ಯಕ್ರಮ ಸೆ.೨ ಮತ್ತು ೩ ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ ಎಂದು ಮಂಡಳಿಯ ಮುರಿಗೆಪ್ಪ ಹುಬ್ಬಳ್ಳಿ ತಿಳಿಸಿದ್ದಾರೆ.ಸೋಮವಾರ ಸೆ.೨ ರಂದು ರಾತ್ರಿ...
ಸುದ್ದಿಗಳು
ಗ್ರಾಮೀಣ ಪ್ರದೇಶದ ಮಕ್ಕಳೇ ನಿಜವಾದ ಬುದ್ದಿವಂತರು: ಕುಂ. ವೀರಭದ್ರಪ್ಪ
ಮೂಡಲಗಿ: ಯಾವ ಶಿಕ್ಷಣ ಸಂಸ್ಥೆಯಲ್ಲಿ ಹೆಣ್ಣು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಕಲಿಯುತ್ತಾರೆಯೋ ಆ ಸಂಸ್ಥೆಗೆ ಒಳ್ಳೆಯ ಭವಿಷ್ಯವಿದೆ. ಹೆಣ್ಣಿಲ್ಲದೇ ಪ್ರಪಂಚವೇ ಇಲ್ಲ ಎಂದು ಕೇಂದ್ರ ಸಾಹಿತ್ಯ ಪ್ರಶಸ್ತಿ ಪುರಸ್ಕೃತ ಕುಂ. ವೀರಭದ್ರಪ್ಪ ಹೇಳಿದರು.ಅವರು ಕಲ್ಲೋಳಿ ಪಟ್ಟಣದ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕುಂ.ವೀರಭದ್ರಪ್ಪ ಅವರ ಜೊತೆ ಮಾತು-ಕತೆ...
ಸುದ್ದಿಗಳು
ಕಟೀಲಿನಲ್ಲಿ ಕಚುಸಾಪ ಶಿಕ್ಷಕ ಸಾಹಿತಿಗಳ ಏಳನೇ ಸಮ್ಮೇಳನ
ದಿನಾಂಕ ೫ ರ ಸೆಪ್ಟೆಂಬರ ೨೪ ರಂದು ಕಟೀಲಿನ ದೇವಾಲಯದ ಎದುರಿನ ಸಭಾಂಗಣದಲ್ಲಿ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ಏಳನೇ ಶಿಕ್ಷಕ ಸಾಹಿತಿಗಳ ಸಮ್ಮೇಳನ ನಡೆಯಲಿದೆ.ಕಟೀಲು ಹರಿನಾರಾಯಣ ಅಸ್ರಣ್ಣನವರು ದೀಪ ಬೆಳಗಿಸಿ ಉದ್ಘಾಟಿಸುವ ಈ ಸಮ್ಮೇಳನದ ಮುಖ್ಯ ಅತಿಥಿಗಳಾಗಿ ಹರಿಕೃಷ್ಣ ಪುನರೂರು ಆಗಮಿಸಲಿದ್ದು ಹಿರಿಯ ಶಿಕ್ಷಕ ಹೊಸಕೋಟೆ ಶ್ರೀಕಾಂತ್ ಕೆ.ವಿ ಸರ್ವಾಧ್ಯಕ್ಷತೆ ವಹಿಸಲಿರುವರು. ಪರಿಷತ್ತಿನ...
ಸುದ್ದಿಗಳು
‘ಮಿಂಚಿನ ಗೊಂಚಲು’ ಕೃತಿ ಬಿಡುಗಡೆ ಸಮಾರಂಭ
ಬೆಳಗಾವಿ - ಬೆಳಗಾವಿ ತನ್ಮಯ ಚಿಂತನ ಚಾವಡಿ ರಾಮತೀಥ೯ನಗರ ಹಾಗೂ ಮಹೇಶ ಪ ಪೂ ಕಾಲೇಜ ಮಹಾಂತೇಶನಗರ ಬೆಳಗಾವಿ ಇವರ ಸಹಯೋಗದಲ್ಲಿ ರವಿವಾರ ದಿನಾಂಕ ೦೮. ೦೯. ೨೦೨೪ ರಂದು ಸಾಹಿತಿ ಸ ರಾ ಸುಳಕೂಡೆ ಅವರ ಆಯ್ದ ಕೃತಿಗಳ ವಿಮರ್ಶಾ ಲೇಖನಗಳ ಸಂಕಲನ "ಮಿಂಚಿನಗೊಂಚಲು" ಕೃತಿಯ ಬಿಡುಗಡೆ ಕಾರ್ಯಕ್ರಮವನ್ನು ಬೆಳಗಾವಿಯ ಮಹೇಶ್ ಪದವಿ...
ಲೇಖನ
ದಿನಕ್ಕೊಬ್ಬ ಶರಣ ಮಾಲಿಕೆ
ಶರಣಸತಿ ಲಿಂಗಪತಿ ಭಾವದ ಗಜೇಶ ಮಸಣಯ್ಯಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಹನ್ನೆರಡನೇಯ ಶತಮಾನ ಅನೇಕ ವೈಶಿಷ್ಟ್ಯಗಳಿಂದ ಮೆರೆದ ಒಂದು ಮಹತ್ವಪೂರ್ಣಕಾಲ. ಅಂದು ಅಸಂಖ್ಯಾತ ಶರಣಶರಣೆಯರು ತಮ್ಮ ಸ್ವತಂತ್ರ ಮನೋಭಾವ ಸ್ವಚ್ಚಂದ ವಿಚಾರ, ಅಪಾರ ಲೋಕಾನುಭವ ಹಾಗೂ ಅನುಪಮ ಪ್ರತಿಭೆಗಳಿಂದ ಸಾಹಿತ್ಯ ಕ್ಷೇತ್ರಗಳಲ್ಲಿ ವಿನೂತನ ಕ್ರಾಂತಿಯನ್ನೆಸಗಿದರು. ಅವರ ಕ್ರಾಂತಿಯ ಫಲವಾಗಿ ಹೊಸ ವಸ್ತು, ರೂಪ, ಭಾಷೆ,...
Uncategorized
ಎಮ್ಮೆತಮ್ಮನ ಕಗ್ಗದ ತಾತ್ಪರ್ಯ
ಅಂತಪ್ಪುದಿಂತಪ್ಪುದೆಂತಪ್ಪುದೆನಬೇಡ
ಚಿಂತಿಸುತ ಕಾಲವನು ಕಳೆಯಬೇಡ
ಎಂತಾದರೇನಂತೆ ಸಿದ್ಧನಿರು ಸಹಿಸಲಿಕೆ
ಸಂತೈಸುತಾತ್ಮವನು - ಎಮ್ಮೆತಮ್ಮಶಬ್ಧಾರ್ಥ
ಅಂತಪ್ಪುದು = ಹಾಗೆ ಆಗುವುದು. ಇಂತಪ್ಪುದು = ಹೀಗೆ ಆಗುವುದು.ಎಂತಪ್ಪುದು = ಹೇಗಾಗುವುದು.ಎಂತು = ಹೇಗೆನಾಳೆ ಹಾಗಾವುದು , ಹೀಗಾವುದು, ಹೇಗಾಗುವುದು ಎಂದು
ಕಳವಳಪಡಬೇಡ. ಅದೇ ಚಿಂತೆಯಲಿ ಸಮಯವನ್ನು ಹಾಳುಮಾಡಬೇಡ. ಮುಂದೆ ಹೇಗಾವುದೆನ್ನುವುದನ್ನು ಯಾರು ತಿಳಿದಿದ್ದಾರೆ. ಏನೇ ಬರಲಿ ಅದನ್ನು ಎದುರಿಸಲು ತಯಾರು ಇರಬೇಕು. ಬಂದದ್ದನ್ನು ಒಪ್ಪಿಕೊಂಡು...
Latest News
ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು
ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...



