Monthly Archives: October, 2025
ಸುದ್ದಿಗಳು
ಭಾರತೀಯರಲ್ಲಿ ದೇಶಭಕ್ತಿಯ ತನ್ಮಯತೆ ತುಂಬಿರಲಿ ಕಾಶಿ ಜ್ಞಾನ ಪೀಠದ ಶ್ರೀಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರ ನವರಾತ್ರಿ ಸಂದೇಶ
ಬೆಂಗಳೂರು : ದೇವಭೂಮಿಯಾದ ಭಾರತದ ಸಂಸ್ಕೃತಿ, ಪರಂಪರೆ, ಚರಿತ್ರೆ ಮಹೋನ್ನತವಾದುದು. ಈ ನೆಲದ ಘನತೆ ಗೌರವವನ್ನು ಕಾಪಾಡುವುದು ಸಮಸ್ತ ದೇಶವಾಸಿಗಳ ಆದ್ಯ ಕರ್ತವ್ಯವಾಗಿದೆ. ಇದಕ್ಕೆ ಪೂರಕವಾಗಿ ಭಾರತೀಯರಲ್ಲಿ ದೇಶಭಕ್ತಿಯ ತನ್ಮಯತೆ ತುಂಬಿರಬೇಕೆಂದು ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾಗಿರುವ ಕಾಶಿ ಜ್ಞಾನ ಪೀಠದ ಶ್ರೀಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಕರೆ ನೀಡಿದರು.ಅವರು ಉತ್ತರಪ್ರದೇಶದ ವಾರಾಣಾಸಿ...
ಸುದ್ದಿಗಳು
ಅಡ್ವೈಸರ್ ಸಾಹಿತ್ಯ ಪ್ರಶಸ್ತಿ ೨೦೨೫ ಕ್ಕೆ ೧೦ ಲೇಖಕರು ಆಯ್ಕೆ
ಮಂಡ್ಯದ ಅಡ್ವೈಸರ್ ಪತ್ರಿಕೆಯು ಪ್ರತಿವರ್ಷದಂತೆ ೨೦೨೫ನೇ ಸಾಲಿನ ಸಾಹಿತ್ಯ ಪ್ರಶಸ್ತಿಗೆ ಕೃತಿಗಳನ್ನು ಆಹ್ವಾನಿಸಿ, ಎಂಟು ವಿಭಾಗಗಳಲ್ಲಿ ೧೦ ಪ್ರಶಸ್ತಿಗಳನ್ನು ಕಳೆದ ೧೮ ವರ್ಷದಿಂದ ನೀಡುತ್ತಾ ಬಂದಿದೆ. ಕನ್ನಡ ಸಾಹಿತ್ಯದ ಈ ಕೆಳಗಿನ ಪ್ರಕಾರಗಳಲ್ಲಿ ನೀಡುವ ಪ್ರಶಸ್ತಿಗಳಿಗೆ ಹಿರಿಯ-ಕಿರಿಯ ಲೇಖಕರುಗಳನ್ನು ಆಯ್ಕೆ ಮಾಡಲಾಗಿದೆ. ಹಿರಿಯ ಸಾಹಿತಿ ಡಾ.ಪ್ರದೀಪಕುಮಾರ ಹೆಬ್ರಿ ನೇತೃತ್ವದ ತೀರ್ಪುಗಾರರ ಮಂಡಳಿ ಕೃತಿಗಳನ್ನು ಆಯ್ಕೆ...
ಕವನ
ಕವನ : ಮಂಗಣ್ಣಗಳು
ಮಕ್ಕಳಿಗಾಗಿ ಒಂದು ಕವಿತೆ
ಮಂಗಣ್ಣಗಳು
ಬೆಳಗಿನ ಹೊತ್ತಿಗೆ
ಬೇಗನೆ ಎದ್ದು
ಹಾದಿ ಬೀದಿಯಲಿ
ತಿರುಗುವವುಗಿಡಗಳ ಹತ್ತಿ
ಚಿಗುರೆಲೆ ಕಿತ್ತು
ಖುಷಿಯಲಿ ತಿನ್ನುತ
ಕುಣಿಯುವವು
ಟೊಂಗೆ ಟೊಂಗೆಗೆ
ಹಾರುತ ಜಿಗಿಯುತ
ಹಣ್ಣು ಕಾಯಿಗಳ
ಹರಿಯುವವು
ಕಿಸಿ ಕಿಸಿ ಎಂದು
ಹಲ್ಲನು ಕಿರಿಯುತ
ಮಕ್ಕಳ ಮನವನು
ಸೆಳೆಯುವವು
ಪ್ರತಿ ವಾರವೂ
ತಪ್ಪದೆ ಸಮಯಕೆ
ನಮ್ಮ ಮನೆಗೆ ಅವು
ಬರುತಿಹವು
ನಾನು ತಿನಿಸುವ
ಸೇಂಗಾ ಕಾಳನು
ಖುಷಿಯಲಿ ತಿಂದು
ನಲಿಯುವವು... ಆರ್. ಎಸ್. ಚಾಪಗಾವಿ
ಬೆಳಗಾವಿ 8317404648
ಕವನ
ಕವನ : ವಿಜಯದಶಮಿ
ವಿಜಯದಶಮಿ
ನವರಾತ್ರಿ ಇಂದು ಸಮಾಪ್ತಿಗೊಂಡು
ಬಂದಿತು ವಿಜಯದಶಮಿ
ನವಶಕ್ತಿ ರೂಪಿಣಿ ನವದುರ್ಗೆಯರ
ನಮಿಸುವ ಎಲ್ಲರು ಬನ್ನಿಬನ್ನಿ ಮಹಾಕಾಳಿಯ ಭಕ್ತಿಯಿಂದಲಿ
ಪೂಜಿಸಿ ಬನ್ನಿಯ ಮುಡಿವ
ಹೊನ್ನ ಸಮಾನವು ಈ ದಿನ ಬನ್ನಿಯು
ಹಂಚುತ ಹರುಷವ ಪಡೆವದುಷ್ಟರ ಶಿಕ್ಷಣ ಶಿಷ್ಟರ ರಕ್ಷಣ
ಎನ್ನುವ ಮಾತು ಸತ್ಯ
ಮಿತ್ಯದ ಮೇಲೆ ಸತ್ಯದ ಗೆಲುವಿನ
ಸಂಕೇತವೇ ಈ ಹಬ್ಬನಾಡಿನ ಸಮಸ್ತ ಬಾಂಧವರಿಗೆಲ್ಲ
ವಿಜಯದಶಮಿ ಶುಭಾಶಯ
ಬೇಡುವ ಚಾಮುಂಡೇಶ್ವರಿ ತಾಯಿಗೆ
ಶಾಂತಿ ಸುಭೀಷ್ಟತೆ ಅಭಯ.ಶ್ರೀಮತಿ ಕಮಲಾಕ್ಷಿ ಕೌಜಲಗಿ
ಬೆಂಗಳೂರು
ಸುದ್ದಿಗಳು
ಚನ್ನಮ್ಮಾಜಿ ಸಮಾಧಿಯ ಸನ್ನಿಧಿಯಲ್ಲಿ ಯೋಧರಿಗೆ ಗೌರವ
'ಮಹಾನ್ ದಾರ್ಶನಿಕ ಬಸವಣ್ಣ' ಗ್ರಂಥ
ಲೋಕಾರ್ಪಣೆಬೈಲಹೊಂಗಲ -ಕೇಂದ್ರ ಬಸವ ಸಮಿತಿ ಪ್ರಕಟಿಸಿರುವ 'ಮಹಾನ್ ದಾರ್ಶನಿಕ ಬಸವಣ್ಣ' ಗ್ರಂಥ ಲೋಕಾರ್ಪಣೆ ಕಾರ್ಯಕ್ರಮ ಮತ್ತು ಯೋಧರಿಗೆ ಗೌರವ ಪಟ್ಟಣದ ವೀರರಾಣಿ ಕಿತ್ತೂರು ಚನ್ನಮ್ಮ ಸಮಾಧಿ ಆವರಣದಲ್ಲಿ ಸಂಭ್ರಮ ಪ್ರತಿಷ್ಠಾನ ಮತ್ತು ತಾಲೂಕಾ ಕನ್ನಡ ಜಾನಪದ ಪರಿಷತ್ತಿನ ಸಹಯೋಗದೊಂದಿಗೆ ಕನ್ನಡ ಸಾಹಿತ್ಯ ಪರಿಷತ್ತಿ ನ ಮಾಜಿ ಜಿಲ್ಲಾಧ್ಯಕ್ಷ ಮೋಹನ ಬಸನಗೌಡ...
ಲೇಖನ
ಹಾಸ್ಯ ನಟ ಬಹುಮುಖ ಪ್ರತಿಭೆಯ ಮೈಸೂರು ರಮಾನಂದ
ಕರ್ನಾಟಕದ ರಂಗಭೂಮಿಯ ಪರಂಪರೆ ಕನ್ನಡಿಗರ ವಾಸ್ತವ ಬದುಕನ್ನು ಸಮರ್ಥವಾಗಿ ಪ್ರತಿನಿಧಿಸುತ್ತಲೇ ಬಂದಿದೆ. ಆಧ್ಯಾತ್ಮಿಕ, ಪೌರಾಣಿಕ, ಐತಿಹಾಸಿಕ, ಸಾಮಾಜಿಕ, ವಿಡಂಬನೆ, ಸಮಕಾಲೀನ ಸಮಸ್ಯೆ......ಹೀಗೆ ರಂಗಭೂಮಿಯಿಂದ ಆಗಿರುವ ಜೀವನಕ್ರಾಂತಿ ಬಹು ದೊಡ್ಡದು. ಜನಮಾನಸವನ್ನು ಈ ರೀತಿಯಾಗಿ ಸದಾ ಚಾಲನೆಯಲ್ಲಿ ಇರಿಸಿದ ದೃಷ್ಟಿಯಿಂದ ರಂಗಭೂಮಿಯನ್ನು ಜವಾಬ್ದಾರಿಯಿಂದ ಬೆಳಸಿದ ಮಹಾನ್ ಕಲಾವಿದರ ಪರಂಪರೆಗೆ ದೊಡ್ಡ ಗೌರವ ಸಲ್ಲಲೇಬೇಕಿದೆ. ಇಂತಹ ಮಹಾನ್...
ಸುದ್ದಿಗಳು
ಕಾಯಕವೇ ಕೈಲಾಸ ಎಂದು ಬಸವಣ್ಣ ಹೇಳಿಲ್ಲವೆ ಪಂಡಿತಾರಾಧ್ಯ ಸ್ವಾಮೀಜಿಗಳೇ….
ಪೂಜ್ಯರಾದ ಡಾ ಪಂಡಿತಾರಾಧ್ಯ ಸ್ವಾಮೀಜಿ ಅವರಿಗೆ ಶರಣಾರ್ಥಿನೆಲಮಂಗಲದಲ್ಲಿ ಒಬ್ಬ ಒಳ್ಳೆಯ ವಿದ್ಯಾರ್ಥಿ ಬಸವಣ್ಣನವರು 'ಕಾಯಕವೇ ಕೈಲಾಸ' ಎಂದಿದ್ದಾರೆ ಅದನ್ನು ಹೇಗೆ ಅರ್ಥೈಸುತ್ತೀರಿ ಎಂಬ ಪ್ರಶ್ನೆಗೆನಿಮ್ಮ ಉತ್ತರ 'ಕಾಯಕವೇ ಕೈಲಾಸ' ಬಸವಣ್ಣನವರು ಹೇಳಿಯೆ ಇಲ್ಲ! ಎಂದು ಎಲ್ಲರನ್ನೂ ಚಿಂತನೆಗೆ ಎಡೆ ಮಾಡಿಕೊಡಲು ಮುಂದಾದಿರಿಕಾಯಕ ಮತ್ತು ದಾಸೋಹ ಇವು ಮೂಲ ಬಸವಣ್ಣನವರ ವೈಚಾರಿಕ ನೆಲೆಯಲ್ಲಿ ರೂಪಗೊಂಡ ಸಿದ್ಧಾಂತಗಳು...
ಸುದ್ದಿಗಳು
ನಿವೃತ್ತ ಕೆಂಪಣ್ಣ ಹುಬ್ಬಳ್ಳಿ ಸತ್ಕಾರ, ನೂತನ ಕಾರ್ಯದರ್ಶಿ ರಾಮಣ್ಣ ಸುಣದೋಳಿ ಅವರ ಪದಗ್ರಹಣ ಸಮಾರಂಭ
ಹಳ್ಳೂರ - ಶ್ರೀ ಬಸವೇಶ್ವರ ಬ್ಯಾಂಕಿನಿಂದ ಸಾಕಷ್ಟು ರೈತ ಬಾಂಧವರಿಗೆ ಅನುಕೂಲವಾಗಿದೆ. ಯಾವುದೇ ಹುದ್ದೆಯಲ್ಲಿ ಕಾರ್ಯ ನಿರ್ವಹಿಸಿ ವಯೋ ನಿವೃತ್ತಿ ಹೊಂದುವುದು ಸಹಜ ಆದರೆ ತಾವು ಮಾಡಿದ ಕೆಲಸದ ಬಗ್ಗೆ ಸದಾ ಕಾಲ ಜನರ ಮನಸ್ಸಿನಲ್ಲಿರಬೇಕು. ಕೆಂಪಣ್ಣ ಹುಬ್ಬಳ್ಳಿ ಅವರು ಜನರೊಡನೆ ಬೆರೆತು ಸಂಸ್ಥೆ ಬೆಳೆಯಲು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆಂದು ಬಸಪ್ಪ ಸಂತಿ ಹೇಳಿದರು.ಅವರು...
ಸುದ್ದಿಗಳು
ಕಸಾಪ ಸರ್ವ ಸದಸ್ಯರ ಸಭೆಗೆ ಸರ್ವಾಧಿಕಾರಿ ಮಹೇಶ ಜೋಶಿ ನಡೆಯನ್ನು ಪ್ರಶ್ನಿಸಲು ತಪ್ಪದೆ ಬನ್ನಿ
ದಿನಾಂಕ 05.09.2025 ರಂದು ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಕಲ್ಲಹಳ್ಳಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ವಾರ್ಷಿಕ ಸಾಮಾನ್ಯ ಸಭೆ ನಡೆಯುತ್ತಿದ್ದು, ಸದರಿ ಸಭೆಯ ಮಾಹಿತಿಯನ್ನು ಸುತ್ತೋಲೆಯು ಈವರೆಗೆ ಕಸಾಪದ ಸರ್ವ ಸದಸ್ಯರಿಗೆ ಸೂಕ್ತ ರೀತಿಯಲ್ಲಿ ತಲುಪಿಸಿಲ್ಲ. ಇದು ಕಸಾಪದ ವಾರ್ಷಿಕ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಬರುವುದನ್ನು ತಡೆಗಟ್ಟುವ ಹುನ್ನಾರವಾಗಿದೆ ಎಂದು ನೇ ಭ ರಾಮಲಿಂಗಶೆಟ್ಟಿ...
Latest News
ಸೈಡ್ ನೀಡಲಿಲ್ಲ ಎಂಬ ಕಾರಣಕ್ಕೆ ಬಸ್ ಚಾಲಕನನ್ನು ಥಳಿಸಿದ ಬೈಕ್ ಸವಾರ
ಬೀದರ - ಸರ್ಕಾರಿ ಬಸ್ ಚಾಲಕ ಸೈಡ್ ಕೊಡಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಬಸ್ ಚಾಲಕನನ್ನು ಬಸ್ ನಿಂದ ಕೆಳಗೆ ಇಳಿಸಿ ಬೈಕ್ ಸವಾರ ಹಲ್ಲೆ...



